Don't Miss!
- News Lok Sabha Election: ರಾಜಕೀಯ ಅಖಾಡದಲ್ಲಿ ನಕಲಿ ಅಭ್ಯರ್ಥಿಗಳ ಸೌಂಡ್ ಜೋರು: ಅಖಾಡದಲ್ಲಿ ನಕಲಿ ರಾಹುಲ್ ಗಾಂಧಿ, ಪಿಎಸ್ ಯಡಿಯೂರಪ್ಪ
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- Automobiles ಭಾರತದ ರಸ್ತೆಯಲ್ಲಿ ಘರ್ಜಿಸುತ್ತಿರುವ ಪವರ್ಫುಲ್ ಎಪ್ರಿಲಿಯಾ ಬೈಕ್ಗಾಗಿ ಅಕ್ಸೆಸರೀಸ್ ಬಿಡುಗಡೆ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಣ ಪಡೆಯದೆ ಟಿವಿ ಕಾರ್ಯಕ್ರಮದಲ್ಲಿ ಜಗ್ಗೇಶ್ ಪತ್ನಿ ಭಾಗಿ
ನಟ ಜಗ್ಗೇಶ್ ಅವರ ಪತ್ನಿ ಇದೀಗ ಟಿವಿ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಈ ಕಾರ್ಯಕ್ರಮದ ಮೂಲಕ ಪರಿಮಳ ಜಗ್ಗೇಶ್ ಅವರು ಕಿರುತೆರೆಗೆ ಕಾಲಿಡುತ್ತಿದ್ದಾರೆ. ಆದರೆ ವಿಶೇಷ ಅಂದರೆ ಈ ಕಾರ್ಯಕ್ರಮಕ್ಕೆ ಅವರು ಹಣ ಪಡೆದಿಲ್ಲ.
ಜೀ ಕನ್ನಡ ವಾಹಿನಿಯ 'ಒಗ್ಗರಣೆ ಡಬ್ಬಿ' ಮಹಿಳೆಯರ ಮನ ಗೆದ್ದ ಕಾರ್ಯಕ್ರಮಗಳಲ್ಲಿ ಒಂದು. ಇಂತಹ ಕಾರ್ಯಕ್ರಮದಲ್ಲಿ ಈಗ ಪರಿಮಳ ಜಗ್ಗೇಶ್ ಭಾಗಿಯಾಗಲಿದ್ದಾರೆ. ಕಾರ್ಯಕ್ರಮದ ಒಂದು ಭಾಗದಲ್ಲಿ ಪ್ರತಿ ನಿತ್ಯ ಅವರು ಬರಲಿದ್ದಾರೆ. ಮುಖ್ಯವಾಗಿ ಅಡುಗೆಯ ಜೊತೆಗೆ ಮಹಿಳೆಯರಿಗೆ ಬೇಕಾಗುವ ಅನೇಕ ಟಿಪ್ಸ್ ಗಳನ್ನು ಅವರು ನೀಡಲಿದ್ದಾರೆ.
ಈ ಕಾರ್ಯಕ್ರಮವನ್ನು ಮಾಡುವುದಕ್ಕೆ ಪರಿಮಳ ಜಗ್ಗೇಶ್ ಯಾವುದೇ ಹಣವನ್ನು ಪಡೆದಿಲ್ಲವಂತೆ. ಈ ವಿಷಯವನ್ನು ಸ್ವತಃ ಜಗ್ಗೇಶ್ ಹಂಚಿಕೊಂಡಿದ್ದಾರೆ. ಪರಿಮಳ ಜಗ್ಗೇಶ್ ಅವರು ಕಿರುತೆರೆಗೆ ಕಾಲಿಡುವ ಬಗ್ಗೆ 'ಫಿಲ್ಮಿಬೀಟ್ ಕನ್ನಡ' ಲೇಖನ ಪ್ರಕಟ ಮಾಡಿತ್ತು. ಈ ಲೇಖನಕ್ಕೆ ಟ್ವಿಟ್ಟರ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿರುವ ಜಗ್ಗೇಶ್ ''ಹಣಪಡೆಯದೆ ಪ್ರೀತಿಯಿಂದ ಭಾಗವಹಿಸುತ್ತಿದ್ದಾಳೆ ಮಡದಿ..ಆಕೆ ಕಲಿತ #diet ಪದವಿ ಜನೋಪಕಾರಕ್ಕಾಗಿ..! ಅವಳ ಪ್ರಾಮಾಣಿಕ ಪ್ರಯತ್ನ ರಾಯರಪೂಜೆ ಎಂದು ಭಾವಿಸುವೆ..ಧನ್ಯವಾದ.'' ಎಂದು ಟ್ವೀಟ್ ಮಾಡಿದ್ದಾರೆ.
ಹಣಪಡೆಯದೆ ಪ್ರೀತಿಯಿಂದ ಭಾಗವಹಿಸುತ್ತಿದ್ದಾಳೆ ಮಡದಿ..ಆಕೆ ಕಲಿತ #diet ಪದವಿ ಜನೋಪಕಾರಕ್ಕಾಗಿ..! ಅವಳ ಪ್ರಾಮಾಣಿಕ ಪ್ರಯತ್ನ ರಾಯರಪೂಜೆ ಎಂದು ಭಾವಿಸುವೆ..ಧನ್ಯವಾದ. https://t.co/tUmnrsrOw5
— ನವರಸನಾಯಕ ಜಗ್ಗೇಶ್ (@Jaggesh2) January 3, 2018
ಜೀ ಕನ್ನಡ ವಾಹಿನಿಯ 'ಕಾಮಿಡಿ ಕಿಲಾಡಿಗಳು 2' ಕಾರ್ಯಕ್ರಮಕ್ಕೆ ನಟ ಜಗ್ಗೇಶ್ ತೀರ್ಪುಗಾರರಾಗಿದ್ದಾರೆ. ಅದರ ಜೊತೆಗೆ ಅವರ ಪತ್ನಿ ಕೂಡ ಅದೇ ವಾಹಿನಿ ಮೂಲಕ ಹೊಸ ಪಯಣ ಶುರು ಮಾಡುತ್ತಿರುವುದು ವಿಶೇಷವಾಗಿದೆ.