Don't Miss!
- Sports 'ಟಿ20 ವಿಶ್ವಕಪ್ಗೆ ಈತನನ್ನು ಆಯ್ಕೆ ಮಾಡಿ'; ಅಜಿತ್ ಅಗರ್ಕರ್ಗೆ ಬಂತು ದೊಡ್ಡ ಮನವಿ!
- Finance ಡಾ. ರಾಜ್ಕುಮಾರ್ ಜನ್ಮದಿನದಂದು ಹೊಸ ಉದ್ಯಮ ಆರಂಭಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- News Realme Narzo 70: ಭರ್ಜರಿ ಕ್ಯಾಮೆರಾ ಫೀಚರ್ಗಳೊಂದಿಗೆ ರಿಯಲ್ಮಿ ನಾರ್ಜೊ 70 ಗ್ರ್ಯಾಂಡ್ ಲಾಂಚ್
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕ್ರಿಕೆಟ್ ಆಟ ಆಡಲು ಒಡವೆ ಕದ್ದಿದ್ದರಂತೆ ನಟ ಪೆಟ್ರೋಲ್ ಪ್ರಸನ್ನ.!
Recommended Video
ನಟ ಪ್ರಸನ್ನ ಎಂದಕೂಡಲೆ ನಿಮಗೆ ಒಂದು ಕ್ಷಣ ಕನ್ ಫ್ಯೂಸ್ ಆಗಬಹುದು. ಆದ್ರೆ, ಪೆಟ್ರೋಲ್ ಪ್ರಸನ್ನ ಎಂದ ಕೂಡಲೆ ಕನ್ನಡ ಚಿತ್ರರಂಗದ ಕೇಡಿ ನಟ ನಿಮ್ಮ ಕಣ್ ಮುಂದೆ ಬರುವುದು ಖಚಿತ. ಅಷ್ಟರ ಮಟ್ಟಿಗೆ ಕೇಡಿ ಪಾತ್ರಗಳಿಗೆ ಜೀವ ತುಂಬಿರುವವರು ನಟ ಪೆಟ್ರೋಲ್ ಪ್ರಸನ್ನ.
ಸಣ್ಣ-ಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತ ಕನ್ನಡ ಚಿತ್ರರಂಗಕ್ಕೆ ಬಂದ ಪ್ರಸನ್ನ ಅವರ ಬದುಕಿಗೆ ಹೊಸ ತಿರುವು ಕೊಟ್ಟ ಸಿನಿಮಾ 'ದುನಿಯಾ'. ಇದರಲ್ಲಿ 'ಪೆಟ್ರೋಲ್' ಪಾತ್ರಧಾರಿ ಆಗಿ ಅಭಿನಯಿಸಿದ ಪ್ರಸನ್ನ ಅವರು ಇಂದಿಗೂ ಪೆಟ್ರೋಲ್ ಪ್ರಸನ್ನ ಆಗಿಯೇ ಚಿರಪರಿಚಿತ.
ಇಂತಿಪ್ಪ ಪೆಟ್ರೋಲ್ ಪ್ರಸನ್ನ ಉತ್ತಮ ಕ್ರಿಕೆಟ್ ಆಟಗಾರ ಕೂಡ ಹೌದು. ಚೆನ್ನಾಗಿ ಬೌಲ್ ಮಾಡುವ ಪೆಟ್ರೋಲ್ ಪ್ರಸನ್ನ ಕೆಸಿಸಿ (ಕನ್ನಡ ಚಲನಚಿತ್ರ ಕಪ್) ನಲ್ಲಿ ಖಾಯಂ ಆಟಗಾರ.
ಕೆಸಿಸಿ-2 ನಲ್ಲಿ ಒಡೆಯರ್ ಚಾರ್ಜರ್ಸ್ ಪರವಾಗಿ ಆಡಿ ಎಲ್ಲರ ಗಮನ ಸೆಳೆದ ಪೆಟ್ರೋಲ್ ಪ್ರಸನ್ನ, ಎರಡು ದಶಕಗಳ ಹಿಂದೆ ಕ್ರಿಕೆಟ್ ಆಟ ಆಡಲು ಒಡವೆಗಳನ್ನ ಕದ್ದಿದ್ದರಂತೆ. ಆ ಸ್ಟೋರಿ ಇಲ್ಲಿದೆ ಓದಿರಿ...
ಮಜಾ ಮನೆಯಲ್ಲಿ ಪೆಟ್ರೋಲ್ ಪ್ರಸನ್ನ
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ಕೆಸಿಸಿ ಪಂದ್ಯಾವಳಿಯ ನಟರು/ಆಟಗಾರರು ಅತಿಥಿಗಳಾಗಿ ಭಾಗವಹಿಸಿದ್ದರು. ಈ ವೇಳೆ ನಟ ಪೆಟ್ರೋಲ್ ಪ್ರಸನ್ನಗೆ ಸೃಜನ್ ಲೋಕೇಶ್ ಒಂದು ಪ್ರಶ್ನೆ ಕೇಳಿದರು.
ಕ್ಯಾಪ್ಟನ್ ಸುದೀಪ್ ತುಂಬಾನೇ ಸ್ಟ್ರಿಕ್ಟ್: ಕಿಚ್ಚನನ್ನು ಕಂಡರೆ ತಂಡದಲ್ಲಿರುವವರಿಗೆ ನಡುಕ.!
ಟಾರ್ಚರ್ ಅನುಭವಿಸಿದ್ದೀರಾ.?
''ಕ್ರಿಕೆಟ್ ವಿಚಾರದಲ್ಲಿ ಯಾವ್ಯಾವ ಟಾರ್ಚರ್ ಅನುಭವಿಸಿದ್ದೀರಾ.? ಯಾವ್ಯಾವ ತರಹ ಟಾರ್ಚರ್ ಕೊಟ್ಟಿದ್ದೀರಾ.?'' ಎಂದು ಸೃಜನ್ ಲೋಕೇಶ್ ಕೇಳಿದಾಗ, ''ಮನೆಯಲ್ಲಿ ನಮ್ಮನ್ನ ಕ್ರಿಕೆಟ್ ಆಟ ಆಡಲು ಕಳುಹಿಸುತ್ತಿರಲಿಲ್ಲ. ಅದೇ ನಮಗೆ ದೊಡ್ಡ ಟಾರ್ಚರ್ ಆಗಿತ್ತು'' ಎಂದರು ನಟ ಪೆಟ್ರೋಲ್ ಪ್ರಸನ್ನ.
'ಕೆಸಿಸಿ' ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸಿದ ಕಿಚ್ಚ ಸುದೀಪ್
ಓಲೆ ಕದಿಯುವುದು ವಾಡಿಕೆ
''25-30 ವರ್ಷಗಳ ಹಿಂದಿನ ಕಥೆ ಇದು. ಟೆನ್ನಿಸ್ ಬಾಲ್ ಟೂರ್ನಮೆಂಟ್ ಆಡ್ತಿದ್ವಿ. ನಮ್ಮ ಬಳಿ ದುಡ್ಡು ಇರುತ್ತಿರಲಿಲ್ಲ. 20 ಜನ ಪ್ಲೇಯರ್ಸ್ ಇದ್ವಿ. ಕಾಸಿಲ್ಲದೇ ಇರುವಾಗ, ಯಾರಾದರೂ ಒಬ್ಬರ ಮನೆಯಲ್ಲಿ ಓಲೆ, ಝುಮ್ಕಿ ಕದಿಯುವುದು ವಾಡಿಕೆ. ಒಡವೆ ಕದ್ದು, ಅದನ್ನ ಅಡವಿಟ್ಟು, ಟೂರ್ನಮೆಂಟ್ ಆಡಲು ಹೋಗುತ್ತಿದ್ವಿ. ಇದರಿಂದ ನಮ್ಮ ಮನೆಯವರಿಗೆ ನನ್ನಿಂದ ಟಾರ್ಚರ್ ಆಗುತ್ತಿತ್ತು'' ಅಂತ ಪೆಟ್ರೋಲ್ ಪ್ರಸನ್ನ ಹೇಳಿದರು.
'ಹೆಬ್ಬುಲಿ' ಸುದೀಪ್ ಟೀಮ್ ಗೆ ಸಖತ್ತಾಗಿ 'ಚಮಕ್' ಕೊಟ್ಟ ಗಣೇಶ್ ತಂಡ.!
ಒಡೆಯರ್ ಚಾರ್ಜರ್ಸ್ ನಲ್ಲಿ ಪೆಟ್ರೋಲ್ ಪ್ರಸನ್ನ
ಮೊನ್ನೆಯಷ್ಟೇ ಮುಕ್ತಾಯವಾದ ಕನ್ನಡ ಚಲನಚಿತ್ರ ಕಪ್ ನಲ್ಲಿ ಒಡೆಯರ್ ಚಾರ್ಜರ್ಸ್ ತಂಡದ ಪರವಾಗಿ ಪೆಟ್ರೋಲ್ ಪ್ರಸನ್ನ ಆಡಿದರು. ಒಡೆಯರ್ ಚಾರ್ಜರ್ಸ್ ಕೆಸಿಸಿ-2 ಚಾಂಪಿಯನ್ಸ್ ಆದರು.