Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಜೇನುಗೂಡು' ಧಾರಾವಾಹಿಯಲ್ಲಿ ಮದುವೆ ಸಂಭ್ರಮ: ಹೆಂಗೈತೆ ಪ್ರೀ ವೆಡ್ಡಿಂಗ್ ಫೋಟೊಶೂಟ್?
ಸ್ಟಾರ್ ಸುವರ್ಣದಲ್ಲಿ ವೀಕ್ಷಕರ ಗಮನ ಸೆಳೆಯುತ್ತಿರುವ ಕೌಟುಂಬಿಕ ಧಾರಾವಾಹಿ 'ಜೇನುಗೂಡು'. ಪ್ರತಿದಿನ ವಾರ ಈ ಧಾರಾವಾಹಿಯಲ್ಲಿ ಏನಾದರೂ ಟ್ವಿಸ್ಟ್ಗಳು ಎದುರಾಗುತ್ತವೆ. ಅದು ಇಡೀ ವಾರ ವೀಕ್ಷಕರನ್ನು ಹಿಡಿದಿಡುತ್ತೆ. ಮುಂದಿನವಾರ ಕೂಡ 'ಜೇನುಗೂಡು' ಕುಟುಂಬದಲ್ಲಿ ಮಸ್ತ್ ಮನರಂಜನೆ ಇರುತ್ತೆ. ಅದಕ್ಕೆ ಕಾರಣ ದಿಯಾ-ಶಶಾಂಕ್ ಮದುವೆ.
ಮಾಯಾ-ಕ್ರಿಶ್ ಜೊತೆಯಾಗಿದ್ದಾರೆ. ಇಬ್ಬರ ಗುರಿ ಒಂದೇ ದಿಯಾ - ಶಶಾಂಕ್ ಮದುವೆ ಮುರಿಯುವುದು. ದಿಯಾಳನ್ನು ಹಣದ ಆಸೆಗೆ ಮದುವೆಯಾಗಬೇಕು ಎಂಬ ದುರಾಲೋಚನೆ ಕ್ರಿಶ್ಗಿದೆ. ಶಶಾಂಕ್ ಮೇಲೆ ಪ್ರೀತಿ ಹುಟ್ಟಿರುವುದರಿಂದ ಈ ಮದುವೆ ಮುರಿಯುವುದಕ್ಕೆ ಮಾಯಾ ಸಜ್ಜಾಗಿದ್ದಾಳೆ. ಇವರ ಕುತಂತ್ರದ ನಡುವೆಯೂ ಮದುವೆ ಸಂಭ್ರಮ ಜೋರಾಗಿ ನಡೆಯುತ್ತಿದೆ.
ಶ್ರೀರಸ್ತು ಶುಭಮಸ್ತು ಖ್ಯಾತಿಯ ರಾಧಾ ಟೀಚರ್ ಬೋಲ್ಡ್ ಟೂರ್ ಹೇಗಿತ್ತು ನೋಡಿ!
ಜೇನುಗೂಡಿನಲ್ಲಿ ಪ್ರೀ ವೆಡ್ಡಿಂಗ್ ಫೋಟೊಶೂಟ್
ಸ್ಟಾರ್ ಸುವರ್ಣದ 'ಜೇನುಗೂಡು' ಧಾರಾವಾಹಿ ವೀಕ್ಷಕರನ್ನು ಇಷ್ಟ ಆಗಿದೆ. ಅವರಿಗಾಗಿ ಕಲರ್ಫುಲ್ ಆದ ಎಪಿಸೋಡ್ಗಳನ್ನು ನೀಡಲು 'ಜೇನುಗೂಡು' ತಂಡ ಮುಂದಾಗಿದೆ. ಕಿರುತೆರೆಯಲ್ಲಿ ಹಿಂದೆಂದೂ ನೋಡಿರದ ಹಾಗೆ ದಿಯಾ ಹಾಗೂ ಶಶಾಂಕ್ ಇಬ್ಬರ ಫೋಟೊಶೂಟ್ ಮಾಡಲು ತಂಡ ಮುಂದಾಗಿದೆ. ಅದಕ್ಕೆ ಒಂದಿಷ್ಟು ತಯಾರಿಗಳನ್ನೂ ಮಾಡಿಕೊಂಡಿದೆ.
ಅಂದ್ಹಾಗೆ ಮದುವೆ ಉತ್ತರ ಕರ್ನಾಟಕ ಶೈಲಿಯಲ್ಲಿ ನಡೆದರೂ, ಫೋಟೊಶೂಟ್ ಮಾತ್ರ ಮಾಡರ್ನ್ ಆಗಿರುತ್ತೆ ಅನ್ನುವುದಕ್ಕೆ ಈ ಫೋಟೊಗಳೇ ಸಾಕ್ಷಿ. ಧಾರಾವಾಹಿಯಲ್ಲಿ ನೇರವಾಗಿ ಮದುವೆಗೆ ಹೋಗುವ ತಂಡ ಇದೇ ಮೊದಲ ಬಾರಿಗೆ ಫೋಟೊಶೂಟ್ ಮಾಡಿದೆ. ಕಿರುತೆರೆಯಲ್ಲಿ ಇದೇ ಮೊದಲು ಎಂದು ಹೇಳಲಾಗುತ್ತಿದೆ.
ಪಾರು ಧಾರಾವಾಹಿಯಲ್ಲಿ ಬಳಸಿದ ಹೆಂಡತಿಯ ಗುಲಾಮ ಪದಕ್ಕೆ ನೆಟ್ಟಿಗರ ಆಕ್ರೋಶ..!
ಜವಳಿ ಮಾರಲು ಬಂದ ಹಿರಿಯ ನಟ ಉಮೇಶ್
'ಜೇನುಗೂಡು' ಹೇಳಿ ಕೇಳಿ ಉತ್ತರ ಕರ್ನಾಟಕ ಶೈಲಿಯಲ್ಲಿ ಪ್ರಸಾರ ಆಗುತ್ತಿರುವ ಧಾರಾವಾಹಿ. ಈ ಕಾರಣಕ್ಕೆ ಶಶಾಂಕ್ ಮತ್ತು ದಿಯ ಉತ್ತರ ಕರ್ನಾಟಕ ಶೈಲಿಯಲ್ಲಿ ಪೇಟ, ಸೀರೆ ತೊಟ್ಟು ಸಂಭ್ರಮಕ್ಕೆ ಸಜ್ಜಾಗಿದ್ದಾರೆ. ಇನ್ನೊಂದು ಕಡೆ ಸೂಟ್ ಮತ್ತು ಗೌನ್ ಹಾಕಿ ಮಾಡರ್ನ್ ಲುಕ್ ಕೊಟ್ಟಿದ್ದಾರೆ. ಈ ಕಾರಣಕ್ಕೆ ಫ್ರಿ ವೆಡ್ಡಿಂಗ್ ಫೋಟೊಶೂಟ್ ಧಾರಾವಾಹಿಯಲ್ಲಿ ಹೇಗಿರುತ್ತೆ? ಅನ್ನುವ ಕುತೂಹಲವಂತೂ ಮೂಡಿದೆ.
'ಜೇನುಗೂಡು' ಧಾರಾವಾಹಿಯ ಮತ್ತೊಂದು ಆಕರ್ಷಣೆ ಹಿರಿಯ ನಟ ಉಮೇಶ್. ನಡುಕೋಟೆ ಮನೆಗೆ ಜವಳಿ ಮಾರಲು ವಿಶೇಷ ಪಾತ್ರದಲ್ಲಿ ಬರುತ್ತಿದ್ದಾರೆ. ನಟ ಉಮೇಶ್ ಎಂಟ್ರಿ 'ಜೇನುಗೂಡು' ಧಾರಾವಾಹಿಗೆ ಮತ್ತಷ್ಟು ಮೆರುಗು ನೀಡಿದೆ. ವಿನಾಯಕ್ ದಾದಾ ಮದುವೆ ಜವಳಿಗಾಗಿ ಎಷ್ಟು ಹಣ ಖರ್ಚು ಮಾಡ್ತಾರೆ? ಉಮೇಶ್ ಮದುವೆ ಸಂಭ್ರಮದಲ್ಲಿರುವವರಿಗೆ ಯಾವ ರೀತಿ ಜವಳಿ ಕೊಡ್ತಾರೆ? ಅನ್ನೋದೇ ಕುತೂಹಲ. ಇದೇ ಸೋಮವಾರದಿಂದ ಒಂದು ವಾರ ರಾತ್ರಿ 10ಕ್ಕೆ ಮದುವೆ ಸಂಭ್ರಮ ಕಿರುತೆರೆಯಲ್ಲಿ ಪ್ರಸಾರ ಆಗಲಿದೆ.
80ರ ದಶಕದ ಬ್ಯೂಟಿ: ಕನಕಪುರ ಬೋಲ್ಡ್ ನಟಿ ಸಿನಿಮಾಗೆ ಬರೋದು ಯಾವಾಗ?