Don't Miss!
- News Big Offer for Bengaluru Voters: ಮತದಾರರಿಗೆ ಗುಡ್ ನ್ಯೂಸ್.. ರಿಯಾಯಿತಿ ದರದಲ್ಲಿ ತಿಂಡಿ ವ್ಯವಸ್ಥೆ
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಓಂ' ಸಿನಿಮಾ ಮಾಡುವಾಗ ಉಪ್ಪಿ ಕಂಡ್ರೆ ಪ್ರೇಮಾ ಉರಿದು ಬೀಳುತ್ತಿದ್ದರಂತೆ.!
Recommended Video
'ಓಂ' ಸಿನಿಮಾ ಶಿವರಾಜ್ ಕುಮಾರ್ ಮತ್ತು ಉಪೇಂದ್ರ ಅವರಿಗೆ ಎಷ್ಟು ಮುಖ್ಯನೋ ನಟಿ ಪ್ರೇಮಾಗೂ ಈ ಚಿತ್ರ ಅಷ್ಟೇ ಮುಖ್ಯ. 'ಸವ್ಯಸಾಚಿ' ಎಂಬ ಮೊದಲ ಸಿನಿಮಾ ಮಾಡಿ ಸೋಲು ಕಂಡಿದ್ದ ಪ್ರೇಮಾಗೆ ಪಾರ್ವತಮ್ಮ ನಿರ್ಮಾಣದ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ತು.
ಬಹಳ ಖುಷಿಯಿಂದ 'ಓಂ' ಒಪ್ಪಿಕೊಂಡ ಪ್ರೇಮಾ ಅವರಿಗೆ ಉಪೇಂದ್ರ ಮೇಲೆ ದ್ವೇಷ ಬರುವಂತೆ ಮಾಡಿತ್ತು. ಓಂ ಸಿನಿಮಾ ಮುಗಿಯವರೆಗೂ ಉಪ್ಪಿ ಕಂಡ್ರೆ ಪ್ರೇಮಾ ಅವರಿಗೆ ಆಗುತ್ತಲೇ ಇರಲಿಲ್ಲ. 'ಉಪೇಂದ್ರ ಎಷ್ಟು ಕ್ರೂರಿ' ಎಂದು ಬೈಯ್ದುಕೊಂಡಿರುವುದು ಇದೆಯಂತೆ.
ಉತ್ತುಂಗದಲ್ಲಿದ್ದ ಪ್ರೇಮಾ ದಿಢೀರ್ ಅಂತ ನಟನೆ ನಿಲ್ಲಿಸಿದ್ದಕ್ಕೆ ಕಾರಣ ಇಲ್ಲಿದೆ
ಮೊದಲ ಚಿತ್ರದಲ್ಲೇ ಉಪ್ಪಿ ಮೇಲೆ ಕೆಂಡದಂಥ ಕೋಪ ಮಾಡಿಕೊಂಡಿದ್ದ ಪ್ರೇಮಾ, ಅದನ್ನ ಸಹಿಸಿಕೊಂಡೇ ಸಿನಿಮಾ ಮಾಡಿದ್ರಂತೆ. ಆಮೇಲೆ ಸಿನಿಮಾ ನೋಡಿದ್ಮೇಲೆ ಅಯ್ಯೂ ರಾಮ ಹೀಗೆಲ್ಲಾ ಇದ್ಯಾ ಎಂದು ಅಚ್ಚರಿಯಾಗಿದ್ದರಂತೆ. ಅಷ್ಟಕ್ಕೂ, ಉಪ್ಪಿ ಮೇಲೆ ಪ್ರೇಮಾ ಮುನಿಸಿಕೊಳ್ಳಲು ಕಾರಣವೇನು? ಮುಂದೆ ಓದಿ.....
ಉಪೇಂದ್ರ ಮೇಲೆ ದ್ವೇಷ ಬರ್ತಿತ್ತು
''ಆಗಷ್ಟೇ ಮೊದಲನೇ ಸಿನಿಮಾ ಆಗಿತ್ತು. ಎರಡನೇ ಸಿನಿಮಾದಲ್ಲಿ ಬಣ್ಣ ಎರುಚುವುದು, ಜುಟ್ಟು ಎಳೆಯುವುದು ಎಲ್ಲ ಮಾಡಿಸಿದ್ರು. ಈ ಮನುಷ್ಯ ಎಷ್ಟು ಕ್ರೂರಿ ಅನಿಸುತ್ತಿತ್ತು. ಉಪೇಂದ್ರಗೆ ಕರುಣೆ ಇಲ್ವಾ, ಹೆಣ್ಣು ಎಂಬ ಭಾವನೆ ಇಲ್ವಾ ಎಂದು ಕೋಪ ಬರ್ತಿತ್ತು'' ಎಂದು ಪ್ರೇಮಾ ಹೇಳಿಕೊಂಡಿದ್ದಾರೆ.
'ಓಂ' ಚಿತ್ರಕ್ಕಾಗಿ ರೇಸ್ ನಲ್ಲಿದ್ದರಂತೆ ಇಬ್ಬರು ಸ್ಟಾರ್ ನಟಿಯರು.! ಪ್ರೇಮಾಗೆ ಅದೃಷ್ಟ ಸಿಕ್ಕಿದ್ದು ಹೇಗೆ?
ಹುಡುಗಿಯರನ್ನ ಕಂಡ್ರೆ ಆಗ್ತಿರಲಿಲ್ಲ
''ಹುಡುಗಿಯರನ್ನ ಕಂಡ್ರೆ ಉಪ್ಪಿಗೆ ಆಗ್ತಿರಲಿಲ್ಲ. ನಮ್ಮನ್ನ ಸಾಫ್ಟ್ ಆಗಿ ನೋಡಿಕೊಳ್ಳುತ್ತಲೇ ಇರಲಿಲ್ಲ. ಶಿವಣ್ಣ ಅವರಿಗೆ ಮಾತ್ರ ಹಾಗೆ ಮಾಡೋಣ, ಹೀಗೆ ಮಾಡೋಣ ಅಂತ ಹೇಳಿಕೊಡ್ತಿದ್ರು. ನನಗೆ ಏನೂ ಹೇಳ್ತಿರಲಿಲ್ಲ. ಹೇಗೋ ನಾನೇ ಟ್ರೈ ಮಾಡಿ ಮಾಡಿದೆ. ಆಮೇಲೆ ಸಿನಿಮಾ ನೋಡಿದ್ಮೇಲೆ ಅಯ್ಯೂ ರಾಮ, ಸಿನಿಮಾದಲ್ಲಿ ಇಷ್ಟೊಂದು ಇದ್ಯಾ'' ಎಂದು ಅನಿಸಿತ್ತಂತೆ.
ವೈವಾಹಿಕ ಜೀವನದ ಬಗ್ಗೆಯ ನೇರ ಪ್ರಶ್ನೆಗೆ ಪ್ರೇಮಾ ಉತ್ತರವೇನು?
ಉಪೇಂದ್ರ ಮೇಲೆ ಕೋಪ ಹೆಚ್ಚಿತ್ತು
''ಉಪೇಂದ್ರ ಅವರು ಏನೂ ಹೇಳಿಕೊಡ್ತಿರಲಿಲ್ಲ. ಅವರ ಸಹಾಯಕರಾಗಿದ್ದ ಮುರುಳಿ, ಲೋಕೇಶ್ ಎಲ್ಲರೂ ಸಹಾಯ ಮಾಡ್ತಿದ್ರು. ಉಪೇಂದ್ರ ಅವರ ಮೇಲೆ ಸಿಕ್ಕಾಪಟ್ಟೆ ಕೋಪ ಇತ್ತು'' ಎಂದು ಪ್ರೇಮಾ ಅವರು ವೀಕೆಂಡ್ ವಿತ್ ರಮೇಶ್ ಹೇಳಿಕೊಂಡ್ರು.
ಪ್ರೇಮಾ ಬಾಳಲ್ಲಿ ಬಿರುಗಾಳಿ ಎಬ್ಬಿಸಿದ್ದ ಆ ಎರಡು ಘಟನೆ ಬಗ್ಗೆ ಮಾತನಾಡ್ತಾರಾ?
ಪ್ರೇಮಾಗೆ ಟಾರ್ಚರ್ ಕೊಟ್ಟಿದ್ವಿ
ಇದೇ ಮಾತನ್ನ ಉಪೇಂದ್ರ ಕೂಡ ಹೇಳಿದ್ರು. ''ಪ್ರೇಮಾ ಅವರಿಗೆ ನನ್ನ ಮೇಲೆ ಸಿಕ್ಕಾಪಟ್ಟೆ ಕೋಪ ಇತ್ತು. ಅದನ್ನ ನಮ್ಮ ಸಹಾಯಕರ ಬಳಿ ಹೇಳಿಕೊಂಡಿದ್ರು. ಓಂ ಸಿನಿಮಾ ಆರಂಭದಲ್ಲಿ ನಾನು ಕೂಡ ಅವರಿಗೆ ತುಂಬಾ ಟಾರ್ಚರ್ ಕೊಟ್ಟಿದ್ದೆ. ಹೀಗೆ ಮಾಡ್ಬೇಕು, ಹಾಗೆ ಮಾಡ್ಬೇಕು ಅಂತ. ಅದಲ್ಲೆವನ್ನ ಸಹಿಸಿಕೊಂಡು ಮಾಡಿದ್ರು. ಆ ಸಿನಿಮಾ ದೊಡ್ಡ ಹಿಟ್ ಆಯ್ತು'' ಎಂದು ಉಪ್ಪಿ ಕೂಡ ಅದೇ ಹೇಳಿದ್ರು.