Don't Miss!
- Finance Zero Shadow Day: ಬೆಂಗಳೂರಿನಲ್ಲಿ ಇಂದು ಪ್ರಕೃತಿಯ ಅಚ್ಚರಿ
- News ರಾಜ್ಯದ ವಿವಿಧೆಡೆ ವರುಣದೇವನ ಆರ್ಭಟ; ಕರ್ನಾಟಕದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಎಷ್ಟು ?
- Technology ಇಂದು ವಿವೋ T3x 5G ಸ್ಮಾರ್ಟ್ಫೋನ್ ಫಸ್ಟ್ ಸೇಲ್; ಬೆಲೆ 13,499ರೂ.!
- Automobiles Triber: 7 ಜನ ಹೋಗಬಹುದಾದ ರೆನಾಲ್ಟ್ ಟ್ರೈಬರ್ ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Lifestyle ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
- Sports CSK vs LSG IPL 2024: ಐಪಿಎಲ್ನಲ್ಲಿ ಈ ದಾಖಲೆ ಮಾಡಿದ ಮೊದಲ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವೇಶ್ಯಾವಾಟಿಕೆ ಜಾಲ : ಕಿರುತೆರೆ ನಟಿ ಬಂಧನ
ಮಾಂಸ ದಂಧೆ ನಡೆಯುತ್ತಿದೆ ಎಂದು ಮಾಹಿತಿ ಬಂದ ಹಿನ್ನೆಲೆಯಲ್ಲಿ ಬಂಜಾರಾ ಹಿಲ್ಸ್ ಪೊಲೀಸರು ಯಲ್ಲಾರೆಡ್ಡಿಗುಡದಲ್ಲಿರುವ ಪ್ರಗತಿ ನಗರದಲ್ಲಿನ ಮನೆಯೊಂದರ ಮೇಲೆ ದಾಳಿ ಮಾಡಿದಾಗ ಪುಷ್ಪಾಂಜಲಿ ಅಲಿಯಾಸ್ ಪುಷ್ಪಾ ಎಂಬ 22 ವರ್ಷದ ಟಿವಿ ನಟಿ ಮತ್ತು ಶ್ರೀಕಾಕುಲಂನ ಮತ್ತೊಬ್ಬ ನಹನಟಿ 24 ವರ್ಷದ ಸಪ್ನಾ ಎಂಬಾಕೆಯನ್ನು ಬಂಧಿಸಿದರು.
ಇವರಿಬ್ಬರ ಜೊತೆ ರಾಜು ಅಲಿಯಾಸ್ ರಾಜೇಶ್ ಎಂಬ ನಿರ್ಮಾಪಕನನ್ನೂ ತಮ್ಮ ವಶಕ್ಕೆ ಪೊಲೀಸರು ತೆಗೆದುಕೊಂಡಿದ್ದಾರೆ. ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಲೋಕೇಶ್ ಎಂಬ ಪಿಂಪ್ನನ್ನೂ ಪೊಲೀಸರು ಬಂಧಿಸಿದ್ದಾರೆ. ಯುವ ನಟಿಯರನ್ನು ಕರೆತರುವ ಕೆಲಸ ರಾಜು ಮಾಡುತ್ತಿದ್ದರೆ, ವಿಟರನ್ನು ಸೆಳೆಯುವ ಕೆಲಸ ಲೋಕೇಶ್ ಮಾಡುತ್ತಿದ್ದ.
ಟಿವಿ ಮತ್ತು ಸಿನೆಮಾದಲ್ಲಿ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ ನಿರ್ಮಾಪಕ ರಾಜೇಶ್ ಯುವ ಮತ್ತು ಅಮಾಯಕ ನಟಿಯರನ್ನು ಈ ಜಾಲದಲ್ಲಿ ಎಳೆದುತರುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಹಿರಿತೆರೆ ಮತ್ತು ಕಿರುತೆರೆಯಲ್ಲಿ ಯುವ ನಟಿಯರನ್ನು ನಿರ್ಮಾಪಕರು ದುರ್ಬಳಸಿಕೊಳ್ಳುತ್ತಿರುವುದಕ್ಕೆ ಈ ಘಟನೆ ಮತ್ತೊಂದು ಸಾಕ್ಷಿಯಾಗಿದೆ.
ಕಳೆದ ವರ್ಷ ಬೆಂಗಳೂರಿನ ಲೊಟ್ಟೆಗೊಲ್ಲನಹಳ್ಳಿಯಲ್ಲಿ ನಡೆದ ದಾಳಿಯಲ್ಲಿ ಕನ್ನಡದ ಕಿರುತೆರೆ ನಟಿ ರೂಪಾ ಎಂಬಾಕೆಯನ್ನು ಸಂಜಯನಗರ ಪೊಲೀಸರು ಬಂಧಿಸಿದ್ದರು. ಆಕೆಯ ಜೊತೆ ಮೂವರು ನಿರೂಪಕಿಯರನ್ನು ಕೂಡ ಪೊಲೀಸರು ಬಂಧಿಸಿದ್ದರು.