Don't Miss!
- News ಕರ್ನಾಟಕದ 14 ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ: ನಿಷೇಧಾಜ್ಞೆ, ಮಹತ್ವದ ದಿನಾಂಕಗಳು
- Finance ಲೋಕಸಭಾ ಚುನಾವಣೆ ಟಿಕೆಟ್ ನಿರಾಕರಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಸಂಸದ?
- Technology ಇಂದು ಪೊಕೊ C61 ಫೋನಿನ ಫಸ್ಟ್ ಸೇಲ್!..ಬೆಲೆ, ಆಫರ್ ಮಾಹಿತಿ ಇಲ್ಲಿದೆ
- Lifestyle ಕೈಗೆ ಹಿಡಿದ ಬಣ್ಣ ತೆಗಿಯೋದು ತುಂಬಾ ಸಿಂಪಲ್..! ಇಂಥಾ ಪ್ರತಿಭೆ ನೀವೆಲ್ಲೂ ನೋಡಿರಲ್ಲ..!
- Automobiles Bajaj: ಯುವಕರ ಮನಗೆದ್ದಿರುವ ಪಲ್ಸರ್ ಬೈಕ್ಗಳಿವು, ಬೆಲೆ ರೂ.2 ಲಕ್ಷದೊಳಗೆ.. 50 ಕಿ.ಮೀಗಿಂತ ಹೆಚ್ಚಿನ ಮೈಲೇಜ್
- Sports Hardik Pandya: ಸ್ವತಃ ಮುಂಬೈ ಇಂಡಿಯನ್ಸ್ ಫ್ಯಾನ್ಸ್ನಿಂದಲೂ ಹಾರ್ದಿಕ್ ಪಾಂಡ್ಯ ಟ್ರೋಲ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪುನೀತ್ ರಾಜ್ ಕುಮಾರ್ ತುಂಬ ಭಯ ಪಡುವುದು ಇವರಿಗೆ ಮಾತ್ರ
Recommended Video
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಗ್ಗೆ ಗೊತ್ತಿರದ ಒಂದಿಷ್ಟು ಇಂಟ್ರಸ್ಟಿಂಗ್ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ ನವರಸ ನಾಯಕ ಜಗ್ಗೇಶ್. ಇತ್ತೀಚಿಗಷ್ಟೆ ಪ್ರಸಾರವಾದ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜಗ್ಗೇಶ್ ಪವರ್ ಸ್ಟಾರ್ ಗೆ ಪ್ರಶ್ನೆ ಕೇಳುವ ಮೂಲಕ ಅಪ್ಪು ಬಗ್ಗೆ ಗೊತ್ತಿರದ ಕುತೂಹಲಕಾರಿ ಸಂಗತಿಗಳನ್ನು ಬಯಲಿಗೆಳೆದಿದ್ದಾರೆ.
ಕಾರ್ಯಕ್ರಮದ ನಿಯಮದ ಪ್ರಕಾರ ಅಪ್ಪು ಹಾಟ್ ಸೀಟಿನಲ್ಲಿದ್ದ ಜಗ್ಗೇಶ್ ಗೆ ಪ್ರಶ್ನೆಗಳನ್ನು ಕೇಳಿದ್ರೆ ನಂತರ ಜಗ್ಗೇಶ್ ಕೂಡ ಪುನೀತ್ ಗೆ ಒಂದೊಂದು ಪ್ರಶ್ನೆಗಳನ್ನು ಕೇಳಿ ಯುವರತ್ನ ಬಗ್ಗೆ ಗೊತ್ತಿರದ ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ.
ಪುನೀತ್ ರಾಜ್ ಕುಮಾರ್ ಸದಾಕಾಲ ಧರಿಸುವ ಸರದ ರಹಸ್ಯ ಬಯಲು
ಅಪ್ಪುಗೆ ನವರಸನಾಯಕ ಜಗ್ಗೇಶ್ ಕೇಳಿದ ಪ್ರಶ್ನೆ "ಭಯ ಎನ್ನುವುದು ಸಹಜ. ಮನೆಯಲ್ಲಿ ಯಾರೊ ಒಬ್ಬ ವ್ಯಕ್ತಿಗೆ ಭಯಪಡುತ್ತೀರಿ ಅಂದ್ರೆ ಅದೂ ಯಾರು?" ಅಂತ ಕೇಳಿದ್ದಾರೆ.
ಇದಕ್ಕೆ ಪುನೀತ್ "ಬಾಲ್ಯದಲ್ಲಿ ಅಪ್ಪನ ಕಂಡರೆ ತುಂಬ ಭಯ. ಆದ್ರೆ ಯಾಕೆ ಅಂತ ಗೊತ್ತಿಲ್ಲ. ಅವರು ಯಾವತ್ತು ಬೈದಿಲ್ಲ. ಹಾಗಾಗಿ ಯಾವತ್ತಾದರು ಬೈದುಬಿಡುತ್ತಾರೆನೋ ಎನ್ನುವ ಭಯ ಇತ್ತು" ಎಂದು ಉತ್ತರಿಸಿದ್ದಾರೆ. ಆದ್ರೆ ಇದು ಅಂದು.
ಈಗ ಅಪ್ಪು ಭಯಪಡುವುದು ಯಾರಿಗೆ ಗೊತ್ತಾ? ಪುನೀತ್ ರಾಜ್ ಕುಮಾರ್ ಗೆ ಎರಡನೆ ಮಗಳು ಅಂದ್ರೆ ಭಯ ಅಂತೆ. ಅದೂ ಬಿಟ್ರೆ ಯಾರಿಗೂ ಭಯಪಡುವುದಿಲ್ಲ ಎಂದು ಹೇಳಿದ್ದಾರೆ. ಹೆಣ್ಣು ಮಕ್ಕಳಿಗೆ ದೇವರು ಎಷ್ಟು ಶಕ್ತಿ ಕೊಟ್ಟಿದ್ದಾನೆ. ಹೆಣ್ಣುಮಕ್ಕಳು ಕಂಡ್ರೆ ಎಲ್ಲರಿಗೂ ಭಯ ಅಂತ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ರು.
ನಟ ಜಗ್ಗೇಶ್ ಎರಡನೆ ಬಾರಿಗೆ ಕನ್ನಡದ ಕೊಟ್ಯಧಿಪತಿಯಲ್ಲಿ ಭಾಗಿಯಾಗಿದ್ದಾರೆ. ಅದೂ ಪುನೀತ್ ರಾಜ್ ಕುಮಾರ್ ಗಾಗಿ ಎಂದು ಶೋನಲ್ಲಿ ಹೇಳಿದ್ದಾರೆ. ನೀರಿಗಾಗಿ ಜಗ್ಗೇಶ್ ಕನ್ನಡದ ಕೋಟ್ಯಧಿಪತಿ ಹಾಟ್ ಸೀಟ್ ಏರಿದ್ದಾರೆ.