Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಜ್ - ಸಿದ್ಧರಾಮಯ್ಯ ಬಾಂಧವ್ಯದ ಬಗ್ಗೆ ಪುನೀತ್ ಪವರ್ ಫುಲ್ ಮಾತು
'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಬಗ್ಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮಾತನಾಡಿದ್ದಾರೆ. ರಾಜ್ ಕುಟುಂಬ ಮತ್ತು ಸಿದ್ಧರಾಮಯ್ಯ ಅವರ ಬಾಂಧವ್ಯವನ್ನು ಅಪ್ಪು ತಮ್ಮ ಮಾತುಗಳಲ್ಲಿ ಹಂಚಿಕೊಂಡಿದ್ದಾರೆ.
ಸಿದ್ಧರಾಮಯ್ಯ ಅವರ ಸಂಚಿಕೆಯಲ್ಲಿ ಬಹುತೇಕ ರಾಜಕೀಯ ಗಣ್ಯರು ಅವರ ಬಗ್ಗೆ ಮಾತನಾಡಿದರು. ಆದರೆ ಚಿತ್ರರಂಗದ ಕಡೆಯಿಂದ ಪುನೀತ್ ರಾಜ್ ಕುಮಾರ್ ಮಾತನಾಡಿದರು. ಜೊತೆಗೆ ಕಾರ್ಯಕ್ರಮದಲ್ಲಿ ಸಿದ್ಧರಾಮಯ್ಯ ಕೂಡ ರಾಜ್ ಕುಮಾರ್ ಮತ್ತು ಅವರ ಆ ದಿನಗಳನ್ನು ಬಿಚ್ಚಿಟ್ಟರು.
ಸಿದ್ದು 'ನಿದ್ದೆ' ಬಗ್ಗೆ ಲೇವಡಿ ಮಾಡುವ ಮುನ್ನ ಈ ವಿಷ್ಯ ನೆನಪಿರಲಿ.!
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಬಗ್ಗೆ ಅಪ್ಪು ಅಕ್ಕರೆಯ ಮಾತುಗಳು ಇಲ್ಲಿವೆ, ಓದಿ..
ತುಂಬ ಹೆಮ್ಮೆ ಅನಿಸುತ್ತೆ
''ಸುಮಾರು ಕಾರ್ಯಕ್ರಮಗಳಲ್ಲಿ ಅವರನ್ನು ಮೀಟ್ ಮಾಡಿದ್ದೀನಿ. ಅವರನ್ನು ಭೇಟಿ ಮಾಡಿದಾಗ ತುಂಬ ಖುಷಿಯಾಗುತ್ತೆ. ಸಾಕಷ್ಟು ಸರ್ಕಾರಕ್ಕೆ ಸಂಬಂಧಪಟ್ಟ ಬ್ರ್ಯಾಂಡ್ ಗಳಿಗೆ ನನ್ನನ್ನು ರಾಯಭಾರಿಯಾಗಿ ಮಾಡಿದ್ದಾರೆ. ತುಂಬ ಹೆಮ್ಮೆ ಅನಿಸುತ್ತೆ, ತುಂಬ ಖುಷಿಯಾಗುತ್ತೆ'' - ಪುನೀತ್ ರಾಜ್ ಕುಮಾರ್, ನಟ
'ನಮ್ ಕಾಡಿನವರು'
''ಸರ್ ಜೊತೆಗೆ ನಮ್ಮ ಬಾಂಧವ್ಯ ಐದು, ಹತ್ತು ವರ್ಷದಿಂದ ಇರುವುದಲ್ಲ. ಬಹುಶಃ ಅದು ನೋಡಿದರೆ ಇಪತ್ತು, ಮೂವತ್ತು ವರ್ಷಕ್ಕೆ ಹೋಗುತ್ತೆ. ಸೋ, ಹಾಗಾಗಿ ನಮ್ಮ ತಂದೆಯವರು ಸಿದ್ಧರಾಮಯ್ಯ ಸರ್ ನೋಡಿದಾಗ 'ನಮ್ ಕಾಡಿನವರು' ಅಂತ ಕರೆಯುತ್ತಿದ್ದರು. ಈಗಲೂ ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ ಅವರು 'ನಮ್ ಕಾಡಿನವರು ಅಂತ'' - ಪುನೀತ್ ರಾಜ್ ಕುಮಾರ್, ನಟ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬಗ್ಗೆ ಸಿದ್ದರಾಮಯ್ಯ ಏನಂದರು.?
ಆಲ್ ದಿ ಬೆಸ್ಟ್
''ಆಲ್ ದಿ ಬೆಸ್ಟ್ ಮಾಮ... ನಿಮ್ಮ ಫ್ಯೂಚರ್ ನಲ್ಲಿ ನೀವ್ ಏನೇನು ಅಂದುಕೊಂಡಿದ್ದೀರೋ ಎಲ್ಲದರಲ್ಲೂ ಗೆಲುವು ಸಿಗಲಿ ಅಂತ ಭಗವಂತನಲ್ಲಿ ಬೇಡಿಕೊಳ್ಳುತ್ತೇನೆ'' - ಪುನೀತ್ ರಾಜ್ ಕುಮಾರ್, ನಟ
ಸಿದ್ಧರಾಮಯ್ಯ ಮಾತು
''ರಾಜಕುಮಾರ್ ಅವರು ನಮ್ಮ ಜಿಲ್ಲೆಯವರು. ಪಾರ್ವತಮ್ಮ ಅವರು ಸಹ ನಮ್ಮ ಜಿಲ್ಲೆಯವರೇ. ರಾಜ್ ಕುಮಾರ್ ಅವರು ಯಾವಾಗ ಭೇಟಿ ಆದರೂ ಬನ್ನಿ.. ಬನ್ನಿ.. 'ನಮ್ ಕಾಡಿನೋರು' ನೀವು, ಚೆನ್ನಾಗಿದ್ದೀರಾ ಅಂತ ಹೇಳುತ್ತಿದ್ರು. ನಮ್ಮ ಜಿಲ್ಲೆಯವರು.. ನಮ್ಮ ಊರಿನವರು.. ಅಂತ ಅವರು ಕರೀತಿರಲಿಲ್ಲ. 'ನಮ್ ಕಾಡಿನೋರು' ಅಂತ ಕರೆಯೋರು'' - ಸಿದ್ಧರಾಮಯ್ಯ, ಮುಖ್ಯಮಂತ್ರಿ
ಬಹಳ ಗೌರವ ಕೊಡ್ತಾರೆ
''ರಾಜಕುಮಾರ್ ಅವರು ಬಹಳ ಪ್ರೀತಿಯಿಂದ ನನ್ನ ಕಾಣುತ್ತಿದ್ರು. ಪುನೀತ್ ಕೂಡ ಬಹಳ ಗೌರವ ದಿಂದ ಅಭಿಮಾನದಿಂದ ನೋಡ್ತಾರೆ. ನಮ್ಮ ಅನೇಕ ಸರ್ಕಾರದ ಕಾರ್ಯಕ್ರಮಗಳಲ್ಲಿ ಅವರು ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ'' - ಸಿದ್ಧರಾಮಯ್ಯ, ಮುಖ್ಯಮಂತ್ರಿ