ಸುದೀಪ್, ರಮೇಶ್ ನಿರೂಪಣೆ ಬಗ್ಗೆ ಸಂತಸ ವ್ಯಕ್ತಪಡಿಸಿದ ಪುನೀತ್
Recommended Video
ಬೆಳ್ಳಿತೆರೆಯಲ್ಲಿ ರಾರಾಜಿಸುವ ಸ್ಟಾರ್ ನಟರು ಈಗ ಕಿರುತೆರೆಯಲ್ಲೂ ಮಿಂಚುತ್ತಿದ್ದಾರೆ. ಹಲವು ವರ್ಷದ ನಂತರ ಪುನೀತ್ ರಾಜ್ ಕುಮಾರ್ ಟಿವಿ ರಂಗಕ್ಕೆ ಪ್ರವೇಶ ಮಾಡಿದ್ದಾರೆ. ಕನ್ನಡದ ಕೋಟ್ಯಧಿಪತಿ ಸೀಸನ್ 4ರಲ್ಲಿ ಅಪ್ಪು ಕಂಬ್ಯಾಕ್ ಆಗಿದ್ದಾರೆ.
ಸಾಮಾನ್ಯವಾಗಿ ಸ್ಟಾರ್ ನಟರು ಕಿರುತೆರೆಗೆ ಬಂದಾಗ ಯಾರ ನಿರೂಪಣೆ ಚೆನ್ನಾಗಿದೆ ಎಂಬ ಪ್ರಶ್ನೆ ಮೂಡುತ್ತೆ. ಇದನ್ನ ಸ್ಪರ್ಧಾತ್ಮಕವಾಗಿ ತೆಗೆದುಕೊಳ್ಳದ ಕಲಾವಿದರು ಆರೋಗ್ಯಕರ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಇದೀಗ, ಪುನೀತ್ ಅವರಿಗೆ ಈ ಪ್ರಶ್ನೆ ಎದುರಾಗಿದೆ. ಸುದೀಪ್, ರಮೇಶ್ ಅರವಿಂದ್ ಸೇರಿದಂತೆ ಅನೇಕರು ಆಂಕರಿಂಗ್ ಮಾಡ್ತಾರೆ. ಇವರಲ್ಲಿ ನಿಮಗೆ ಯಾರ ನಿರೂಪಣೆ ಇಷ್ಟ ಎಂದು ಕೇಳಿದ್ದಕ್ಕೆ ''ಎಲ್ಲರೂ ಚೆನ್ನಾಗಿ ಮಾಡ್ತಾರೆ, ನಾನು ಎಲ್ಲರ ಆಂಕರಿಂಗ್ ನೋಡಿದ್ದೀನಿ. ಸುದೀಪ್ ಮತ್ತು ರಮೇಶ್ ಅವರು ಅದ್ಬುತ. ಅಕುಲ್, ಅನುಶ್ರೀ, ಸೃಜನ್ ಎಲ್ಲರೂ ಒಳ್ಳೆಯ ಕೆಲಸ ಮಾಡ್ತಾರೆ'' ಎಂದು ಮೆಚ್ಚಿಕೊಂಡರು.

ಕನ್ನಡದ ಕೋಟ್ಯಧಿಪತಿ ಎರಡು ಆವೃತ್ತಿ ನಿರೂಪಣೆ ಮಾಡಿದ್ದ ಪವರ್ ಸ್ಟಾರ್ ಆಮೇಲೆ 'ಫ್ಯಾಮಿಲಿ ಪವರ್' ಶೋ ಮಾಡಿದ್ರು. ಇದೀಗ, ಸಣ್ಣದೊಂದು ಗ್ಯಾಪ್ ನ ಬಳಿಕ ಮತ್ತೆ ಕನ್ನಡದ ಕೋಟ್ಯಧಿಪತಿ ನಾಲ್ಕನೇ ಆವೃತ್ತಿಯಲ್ಲಿ ವಾಪಸ್ ಆಗಿದ್ದಾರೆ. ಜೂನ್ 22 ರಿಂದ ಶನಿವಾರ ಮತ್ತು ಭಾನುವಾರ ಪ್ರಸಾರವಾಗಲಿದೆ.


Click it and Unblock the Notifications











