Don't Miss!
- News Tirumala Property: ತಿರುಪತಿ ತಿರುಮಲ ಶ್ರೀವಾರಿಯ 2023-24ರ ಆಸ್ತಿ ವಿವರ ಇಲ್ಲಿದೆ..
- Automobiles ಭಾರತದ ರಸ್ತೆಯಲ್ಲಿ ಘರ್ಜಿಸುತ್ತಿರುವ ಪವರ್ಫುಲ್ ಎಪ್ರಿಲಿಯಾ ಬೈಕ್ಗಾಗಿ ಅಕ್ಸೆಸರೀಸ್ ಬಿಡುಗಡೆ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಪುಟ್ಟಗೌರಿ'ಯ ವನವಾಸ ಅಂತ್ಯ: ಗೌರಿ ಕಾಡಿನಿಂದ ನಾಡಿಗೆ ಬಂದಿದ್ದು ಹೇಗೆ?
ಕಾಡಿನಲ್ಲಿ ಸಿಲುಕಿಹಾಕಿಕೊಂಡು, ಸಾಕಷ್ಟು ನೋವುಗಳನ್ನ ಎದುರಿಸಿದ್ದ 'ಪುಟ್ಟಗೌರಿ' ಕೊನೆಗೆ ನಗರಕ್ಕೆ ವಾಪಸ್ ಆಗಿದ್ದಾರೆ. ಈ ಮೂಲಕ ಕಾಡಿನಲ್ಲಿ ಸಾಹಸ ಮರೆದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದ್ದ ಗೌರಿಯ ಅರಣ್ಯವಾಸ ಅಂತ್ಯವಾಗಿದೆ.
ಇನ್ನು ಕಾಡಿನಿಂದ ವಾಪಸ್ ಬಂದ ಗೌರಿ, ರೀ-ಎಂಟ್ರಿಯಲ್ಲೇ ರೌಡಿಗಳ ಹೊಡೆದೊಡಿಸಿದ್ದಾರೆ. ಹೀಗಾಗಿ, ಇನ್ಮುಂದೆ ನಾಡಿನಲ್ಲೂ ಗೌರಿಯ ಅಟ್ಟಹಾಸ ನಡೆಯಬಹುದು ಎಂಬ ಸೂಚನೆ ಸಿಕ್ಕಿದೆ.
ಅಷ್ಟಕ್ಕೂ, ಪುಟ್ಟಗೌರಿ ಕಾಡಿನಿಂದ ನಾಡಿಗೆ ವಾಪಸ್ ಬಂದಿದ್ದು ಹೇಗೆ? ಅರಣ್ಯದಿಂದ ಗೌರಿ ವಾಪಸ್ ಆಗಲು ಸಹಾಯ ಮಾಡಿದ್ದು ಯಾರು? ಎಂದು ತಿಳಿಯಲು ಮುಂದೆ ಓದಿ......
ಗೌರಿ ಈಸ್ ಬ್ಯಾಕ್
ದಟ್ಟಾರಣ್ಯದಲ್ಲಿ ಸಿಲುಕಿಕೊಂಡು ಕಷ್ಟಪಡುತ್ತಿದ್ದ ಪುಟ್ಟಗೌರಿ ಯಾವಾಗ ವಾಪಸ್ ಆಗುತ್ತಾಳೆ ಎಂಬ ಕುತೂಹಲದಿಂದ ಪ್ರೇಕ್ಷಕರು ಕಾಯುತ್ತಿದ್ದರು. ಕೊನೆಗೂ ಗೌರಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದ್ದು ನಾಡಿಗೆ ಗೌರಿ ವಾಪಸ್ ಆಗಿದ್ದಾಳೆ.
ಪ್ರಾಣಾಪಾಯದಲ್ಲಿದ್ದ 'ಪುಟ್ಟಗೌರಿ' ಜೀವನದಲ್ಲಿ ಪವಾಡ: ಗೌರಿ ಮತ್ತೆ ಸೇಫ್.!
ತಂದೆಯನ್ನ ಕಾಪಾಡಿದ ಗೌರಿ
ನಗರಕ್ಕೆ ಬರುತ್ತಿದ್ದಂತೆ ತಮ್ಮ ತಂದೆಯನ್ನ ಕೊಲ್ಲು ಬಂದಿದ್ದ ರೌಡಿಗಳನ್ನ ಗೌರಿ ಹೊಡೆದೊಡಿಸಿದ್ದಾಳೆ. ಸುಮಾರು ಆರೇಳು ದಾಂಡಿಗರ ಜೊತೆ ಗೌರಿ ಫೈಟ್ ಮಾಡಿ ತಂದೆಯನ್ನ ಕಾಪಾಡಿಕೊಂಡಿದ್ದಾಳೆ.
ಹುಲಿ, ಹಾವಿನಿಂದ ತಪ್ಪಿಸಿಕೊಂಡ 'ಗೌರಿ' ಪ್ರಾಣಕ್ಕೆ ಮತ್ತೆ ಅಪಾಯ.!
ಗೌರಿಗೆ ಸಹಾಯ ಮಾಡಿದ್ದು ಯಾರು?
ಅಂದ್ಹಾಗೆ, ಅಷ್ಟು ದೊಡ್ಡ ಕಾಡಿನಲ್ಲಿ ಗೌರಿ, ನಗರಕ್ಕೆ ಬರಲು ದಾರಿ ತೋರಿಸಿದ್ದು ಯಾರು? ಎಂಬ ಪ್ರಶ್ನೆಗೆ ಗೌರಿ ಉತ್ತರ ಕೊಟ್ಟಿದ್ದಾರೆ. ಕಾಡು ಜನರ ಮಧ್ಯೆ ಸಿಕ್ಕಿಹಾಕಿಕೊಂಡಿದ್ದ ಗೌರಿಯನ್ನೇ ಅವರೇ ನಗರಕ್ಕೆ ಕರೆದುಕೊಂಡು ಬಂದು ಬಿಟ್ಟಿದ್ದಾರೆ.
'ಬೆಟ್ಟದ ಮೇಲಿಂದ ಬಿದ್ದ ಪುಟ್ಟಗೌರಿ': ಆಮೇಲೆ ಆದ ಅದ್ಭುತಗಳು ಇವು.!
ಇನ್ಮುಂದೆ ಗೌರಿ ಕಷ್ಟ ಪರಿಹಾರ ಆಗ್ಬಹುದಾ?
ಇನ್ನು ಕಾಡಿನಲ್ಲಿ ಸಾಕಷ್ಟು ಕಷ್ಟ, ಅನುಭವಿಸಿದ ಬಂದ ಗೌರಿ ಇನ್ನುಂದೆ ಈ ಕಷ್ಟದಿಂದ ಹೊರಬರ್ತಾರ ಎಂಬ ಕುತೂಹಲ ಕಾಡುತ್ತಿದೆ. ಮುಂದಿನ ದಿನದಲ್ಲಿ 'ಪುಟ್ಟಗೌರಿ ಮದುವೆ' ಧಾರಾವಾಹಿಯಲ್ಲಿ ತಿರುವುಗಳು ಹೇಗಿರುತ್ತೆ ಎಂಬುದನ್ನ ಕಾದುನೋಡೋಣ.