Don't Miss!
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- News ಬೆಂಗಳೂರಿನಲ್ಲಿ ಮೋದಿ ಮತಬೇಟೆ; ರಾಜ್ಯಕ್ಕೆ ಪ್ರಧಾನಿ ಮೋದಿಯ ಕೊಡುಗೆ ಏನಿದೆ?: ಡಾ.ಜಿ ಪರಮೇಶ್ವರ್
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ರಾಧಾ ರಮಣ' ಧಾರಾವಾಹಿಯಲ್ಲಿ ಏನಿರಬಹುದು ಡಿಸೆಂಬರ್ 5 ರ ಗುಟ್ಟು.?
Recommended Video
ರಮಣ್ ಮನೆಗೆ ಸದ್ಯ 'ಅವನಿ'ಯಾಗಿ ಕಾಲಿಟ್ಟಿರುವಾಕೆ ಒರಿಜಿನಲ್ ಅಲ್ಲ, ಡ್ಯೂಪ್ಲಿಕೇಟ್ ಎಂಬ ಡಿಬೇಟು ಫೇಸ್ ಬುಕ್ ನಲ್ಲಿ ಸಿಕ್ಕಾಪಟ್ಟೆ ನಡೆಯುತ್ತಿದೆ. ಈಗಿರುವ 'ಅವನಿ' ನಿಜವಾದವಳೋ, ಅಲ್ವೋ ಇನ್ನೂ ಪಕ್ಕಾ ಆಗಿಲ್ಲ. ಈ ನಡುವೆ ಇನ್ನೊಂದು ಹೊಸ ತಿರುವಿಗೆ 'ರಾಧಾ ರಮಣ' ಧಾರಾವಾಹಿ ಸಾಕ್ಷಿ ಆಗಿದೆ.
'ಅವನಿ'ಗೆ ಹಳೆಯ ನೆನಪುಗಳನ್ನೆಲ್ಲ ವಾಪಸ್ ತರಿಸಲು ರಮಣ್ ಹಾಗೂ ರಾಧಾ ಶತಾಯಗತಾಯ ಪ್ರಯತ್ನ ಪಡುತ್ತಿದ್ದಾರೆ. 'ಸೈಕ್ಯಾಟ್ರಿಸ್ಟ್' ಬಳಿ 'ಅವನಿ'ಯನ್ನ ಕರೆದುಕೊಂಡು ಹೋಗುವುದು ಬೇಡ ಅಂತ ಸರಸ್ವತಿ ಹಠ ಮಾಡಿದ್ಮೇಲೆ, ರಮಣ್ ಮನೆಗೆ ಕಾಲಿಟ್ಟವರು ಇರ್ಫಾನ್ ಚಾಚಾ.
ಮೊದಲು ಇರ್ಫಾನ್ ಚಾಚಾರನ್ನ ನೋಡಿದಾಗ, 'ಅವನಿ'ಗೆ ಗುರುತೇ ಸಿಗಲಿಲ್ಲ. ಬಳಿಕ ಮಾನಸಿ ಬಂದು ಇರ್ಫಾನ್ ಚಾಚಾ ರನ್ನ ಮಾತನಾಡಿಸಿದ್ಮೇಲೆ, 'ಅವನಿ' ನೆನಪಾಗಿರುವಂತೆ ಮ್ಯಾನೇಜ್ ಮಾಡಿರುವುದು ಆಕೆ ಡ್ಯೂಪ್ಲಿಕೇಟ್ ಎಂಬ ವಾದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.
ವೀಕ್ಷಕರಿಗೆ ಯಾಕೆ ನಟಿ ಆಶಿತಾ ಮೇಲೆ ಇಷ್ಟೊಂದು ಸಿಟ್ಟು.?
ಇರ್ಫಾನ್ ಚಾಚಾ ಜೊತೆ ಮಾತನಾಡಿ, ಫೈಯರ್ ಆಕ್ಸಿಡೆಂಟ್ ಬಗ್ಗೆ ತಿಳಿದುಕೊಂಡ್ಮೇಲೆ, ''ನನಗೆ ಎಲ್ಲ ನೆನಪಾಗಿದೆ'' ಅಂತ ಇಡೀ ಕುಟುಂಬದ ಮುಂದೆ 'ಅವನಿ' ಹಾಜರ್ ಆಗಿದ್ದಾಳೆ. ಇಷ್ಟು ಸಾಲದು ಅಂತ 'ಡಿಸೆಂಬರ್ 5' ಎಂದೂ 'ಅವನಿ' ಹೇಳಿದ್ದಾಳೆ.
'ಡಿಸೆಂಬರ್ 5' ಎಂದು 'ಅವನಿ' ಹೇಳುತ್ತಿದ್ದಂತೆಯೇ, ಎಲ್ಲರಿಗೂ ಶಾಕ್ ಆಯ್ತು. ಹಾಗಾದ್ರೆ, ಏನಿದು 'ಡಿಸೆಂಬರ್ 5' ರ ಗುಟ್ಟು.? ಎಂಬುದನ್ನ ತಿಳಿಯಲು ಇಂದಿನ ಸಂಚಿಕೆ ನೋಡಬೇಕು.