Don't Miss!
- Automobiles ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು.. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ!
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Lifestyle ಮೈ ತೂಕ ಕಡಿಮೆಯಾಗಲು ಈ ಪುದೀನಾ ನೀರು ಸಹಕಾರಿಯೇ? ಇದರ ಇತರ ಪ್ರಯೋಜನಗಳೇನು?
- News Poornachandra Tejaswi: ವಿಸ್ಮಯಲೋಕವನ್ನೇ ತೆರೆದಿಡುವ ತೇಜಸ್ವಿಯವರ ಪುಸ್ತಕಗಳು
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ರಾಧಾ ರಮಣ': ವೀಕ್ಷಕರಿಗೆ ಕಾದಿದ್ಯಾ ಬ್ಯಾಡ್ ನ್ಯೂಸ್.?
Recommended Video
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ' ಧಾರಾವಾಹಿಯಲ್ಲಿ 'ಅವನಿ ಆಗಮನ' ಅಧ್ಯಾಯ ಶುರುವಾಗಿದೆ. ಕಡೆಗೂ 'ಅವನಿ' ರಮಣ್ ಕೈಸೇರಿದ್ದಾಳೆ. ಇಪ್ಪತ್ತು ವರ್ಷಗಳ ಬಳಿಕ 'ಅವನಿ' ತನ್ನ ಮನೆ ಸೇರಿರುವುದಕ್ಕೆ ವೀಕ್ಷಕರಂತೂ ಫುಲ್ ಖುಷಿಯಾಗಿದ್ದರು.
ಆದ್ರೆ, ಇದೇ ಖುಷಿ ಮುಂದಿನ ಸಂಚಿಕೆಗಳಲ್ಲಿ ಮುಂದುವರೆಯುವುದು ಅನುಮಾನ. ಯಾಕಂದ್ರೆ, ಇವತ್ತಿನ ಸಂಚಿಕೆಯಲ್ಲಿ ವೀಕ್ಷಕರಿಗೆ ಒಂದು ಬ್ಯಾಡ್ ನ್ಯೂಸ್ ಕಾದಿದೆ.
ನಿಮಗೆಲ್ಲ ಗೊತ್ತಿರುವ ಹಾಗೆ, 'ಅವನಿ' ಮ್ಯಾಟರ್ ಈಗಾಗಲೇ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದೆ. ಇಷ್ಟು ವರ್ಷಗಳ ಕಾಲ 'ಅವನಿ'ಯನ್ನ ನೋಡಿಕೊಳ್ಳುತ್ತಿದ್ದ ರುದ್ರ ಪೊಲೀಸರ ಅತಿಥಿಯಾಗಿದ್ದಾನೆ. ರುದ್ರನನ್ನ ಬೆಂಡೆತ್ತಿ ಬ್ರೇಕ್ ಹಾಕಿದ್ಮೇಲೆ, ಅದೇನು ವಿಷಯ ಗೊತ್ತಾಯ್ತೋ ಏನೋ, ಸೀದಾ ರಮಣ್ ಮನೆಗೆ ಬಂದ ಪೊಲೀಸರು 'ಬ್ಯಾಡ್ ನ್ಯೂಸ್' ಹೇಳಲು ಮುಂದಾಗಿದ್ದಾರೆ.
ರಮಣ್ ಗೆ ಬ್ಯಾಡ್ ನ್ಯೂಸ್ ಕಾದಿದೆ ಅಂದ್ರೆ, ವೀಕ್ಷಕರಿಗೂ ಅದರಿಂದ ದುಃಖ ತಂದರೆ ಅಚ್ಚರಿ ಇಲ್ಲ. ಮುಂದೆ ಓದಿರಿ...
ಮನೆಯಲ್ಲಿ ಸಂಭ್ರಮ, ಸಡಗರ
ಇಪ್ಪತ್ತು ವರ್ಷಗಳ ಬಳಿಕ ಮನೆಗೆ 'ಅವನಿ' ಬರುತ್ತಿರುವುದರಿಂದ, ಸಹಜವಾಗಿ ರಮಣ್ ಮನೆಯಲ್ಲಿ ಸಡಗರ, ಸಂಭ್ರಮವಿತ್ತು. ಆರತಿ ಮಾಡಿ ಮನೆಯೊಳಗೆ 'ಅವನಿ'ಯನ್ನ ಬರಮಾಡಿಕೊಳ್ಳಲಾಯಿತು.
ಇಷ್ಟು ದಿನ ಸಸ್ಪೆನ್ಸ್ ಕೊಟ್ಟಿದ್ದು ಅವಳಿಗಾ? 'ಬಿಗ್ ಬಾಸ್' ಬಳಿಕ ಆಶಿತಾ ಮಾಡ್ತಿರೋದು ಇದೇನಾ?
ಸಿತಾರ ದೇವಿಗೆ ಶಾಕ್.!
ಮನೆಗೆ 'ಅವನಿ' ಎಂಟ್ರಿಕೊಟ್ಟಿರುವ ಸಂಗತಿ ಸಿತಾರ ದೇವಿಗೆ ಶಾಕ್ ತಂದಿದೆ. 'ಅವನಿ' ಎದುರು ಬರುವ ತಾಕತ್ತು ಸಿತಾರ ದೇವಿಗೆ ಇಲ್ಲದಂತಾಗಿದೆ. ಇತ್ತ ಅತ್ತೆ 'ಸಿತಾರ ದೇವಿ' ಹೆಸರು ಕೇಳಿದ ಕೂಡಲೆ 'ಅವನಿ' ಪ್ರಜ್ಞೆ ತಪ್ಪಿ ಬಿದ್ದಿದ್ದು, ಮನೆಯವರಲ್ಲಿ ಆತಂಕ ಮೂಡಿಸಿದೆ.
ಅಂತೂ ಇಂತೂ 'ಅವನಿ' ಸಿಕ್ಕಳು: ಎಲ್ಲರ ಮೊಗದಲ್ಲೂ ಮೂಡಿದೆ ನಗು.!
ದೀಪಿಕಾ ಮೇಲೆ ಸಿತಾರಗೆ ಸಿಟ್ಟು.!
'ಅವನಿ' ಮ್ಯಾಟರ್ ನಲ್ಲಿ ಡಬಲ್ ಗೇಮ್ ಆಡಿದ್ದು ಸ್ವಂತ ಮಗಳು ದೀಪಿಕಾ ಅನ್ನೋ ಸತ್ಯ ಸಿತಾರ ದೇವಿ ಅರಿವಿಗೆ ಬಂದಿದೆ. ಒಂದ್ಕಡೆ ಮಗಳ ಮೇಲೆ ಸಿಟ್ಟು, ಇನ್ನೊಂದು ಕಡೆ ಆತಂಕ. ಒಟ್ನಲ್ಲಿ ಸಿತಾರ ಸದ್ಯ ಪೇಚಿಗೆ ಸಿಲುಕಿದ್ದಾರೆ.
ರಮಣ್ ಕೈಗೆ 'ಅವನಿ' ಸಿಗಲ್ಲ: ಧಾರಾವಾಹಿ ಮುಗಿಯಲ್ಲ.!
ದಿನಕರ್ ಪತ್ತೆ ಇಲ್ಲ.!
ಮನೆಗೆ 'ಅವನಿ' ವಾಪಸ್ ಬಂದಿದ್ದರೂ, ದಿನಕರ್ ಪತ್ತೆ ಆಗಿಲ್ಲ. ಇದ್ದಕ್ಕಿದ್ದಂತೆ ದಿನಕರ್ ನಾಪತ್ತೆ ಆಗಿರುವುದು ರಾಧಾಗೆ ಆತಂಕ ಮೂಡಿಸಿದೆ.
ಅತ್ತ ವಿನಯ್ ಕೊಲೆ, ಇತ್ತ 'ಅವನಿ' ಕಾಣೆ: ಅಯ್ಯೋ ದೇವರೇ.!
ರಾತ್ರೋರಾತ್ರಿ ಮಾಸ್ಟರ್ ಪ್ಲಾನ್ ಮಾಡಿದ್ರಾ ಸಿತಾರ.?
ಆಂಬ್ಯುಲೆನ್ಸ್ ನಲ್ಲಿ 'ಅವನಿ'ಯನ್ನ ರುದ್ರ ಕಿಡ್ನ್ಯಾಪ್ ಮಾಡಿಕೊಂಡು ಹೋದ್ಮೇಲೆ, ಸಿತಾರ ದೇವಿ ಕೂಡ ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆ ಆಗಿದ್ದರು. ಹೀಗಾಗಿ, ರಾತ್ರೋರಾತ್ರಿ ಸಿತಾರ ದೇವಿ ಮತ್ತೊಂದು ಮಾಸ್ಟರ್ ಪ್ಲಾನ್ ಮಾಡಿರಬಹುದಾ ಎಂಬ ಅನುಮಾನ ವೀಕ್ಷಕರಲ್ಲಿ ಕಾಡುತ್ತಿದೆ.
ಬೆದರಿ ಬೆಂಡಾದ ಸಿತಾರ ದೇವಿ: ಕಿಡ್ನ್ಯಾಪ್ ಆಗಿದ್ದಾಳಾ 'ಅವನಿ'?
ಈಕೆ ನಿಜವಾದ 'ಅವನಿ' ಅಲ್ಲ.?
ಅಷ್ಟು ಸುಲಭವಾಗಿ ಮನೆಯವರ ಕೈಗೆ 'ಅವನಿ'ಯನ್ನ ಸೇರಿಸಲು ಸಿತಾರ ದೇವಿ ಬಿಡುವುದಿಲ್ಲ. ಆಂಬ್ಯುಲೆನ್ಸ್ ನಲ್ಲಿ 'ಅವನಿ' ಜಾಗಕ್ಕೆ ಬೇರೆಯವರನ್ನ ಕರೆದು ತಂದಿರಬಹುದು ಎಂದು ವೀಕ್ಷಕರು ಲೆಕ್ಕ ಹಾಕುತ್ತಿದ್ದಾರೆ.
ಇಂದು ಏನಾಗುವುದೋ.?
'ರುದ್ರ'ನನ್ನ ವರ್ಕ್ ಮಾಡಿದ್ಮೇಲೆ, ಪೊಲೀಸರು ರಮಣ್ ಮನೆಗೆ ಬಂದು 'ನಿಮಗೊಂದು ಬ್ಯಾಡ್ ನ್ಯೂಸ್ ಇದೆ' ಅಂತ ಹೇಳಿದ್ದಾರೆ. ಇವತ್ತು ಇನ್ನೇನ್ ಬ್ಯಾಡ್ ನ್ಯೂಸ್ ಇದೆಯೋ, ವೀಕ್ಷಕರು ಇನ್ನೂ ಏನೇನೆಲ್ಲ ನೋಡಬೇಕೋ.? 'ಆ' ನಿರ್ದೇಶಕರೇ ಬಲ್ಲ.!