twitter
    For Quick Alerts
    ALLOW NOTIFICATIONS  
    For Daily Alerts

    'ರಾಧಾ ರಮಣ'ದಲ್ಲಿ ದಿನಕರ್ ಕಥೆ ಮುಗಿಸಿಬಿಟ್ಲಾ ಸಿತಾರ.?

    By Harshitha
    |

    ವಿಧಾನಸಭೆ ಚುನಾವಣೆ 2018 ರಲ್ಲಿ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನೆ.ಲ.ನರೇಂದ್ರ ಬಾಬು ಕಣಕ್ಕೆ ಇಳಿದ್ಮೇಲೆ, 'ರಾಧಾ ರಮಣ' ಧಾರಾವಾಹಿಯಿಂದ ಅವರು ನಾಪತ್ತೆ ಆಗಿದ್ದರು.

    ಸೀರಿಯಲ್ ನಲ್ಲಿ ದಿನಕರ್ (ನೆ.ಲ.ನರೇಂದ್ರ ಬಾಬು) ರನ್ನ ರಾಧಾ ಹಾಗೂ ಅನ್ವಿತಾ ಹುಡುಕುತ್ತಲೇ ಇದ್ದಾರೆ. ಆದ್ರೆ, ಅದ್ಯಾಕೋ ಇನ್ನೂ ದಿನಕರ್ ಸುಳಿವು ಯಾರಿಗೂ ಸಿಕ್ಕಿಲ್ಲ.

    ಚುನಾವಣೆ ಮುಗಿದು ಒಂದು ತಿಂಗಳಾಗಿದೆ. ಎಲೆಕ್ಷನ್ ನಲ್ಲಿ ನೆ.ಲ.ನರೇಂದ್ರ ಬಾಬು ಸೋಲು ಅನುಭವಿಸಿದರು. ಚುನಾವಣೆ ರಾಜಕೀಯದಿಂದ ಅವರೀಗ ಬಿಡುವು ಪಡೆದುಕೊಂಡಿದ್ದಾಗಿದೆ. ಹೀಗಿದ್ದರೂ, ಅವರಿನ್ನೂ 'ರಾಧಾ ರಮಣ' ಧಾರಾವಾಹಿಯಲ್ಲಿ ಕಾಣಿಸಿಕೊಂಡಿಲ್ಲ.

    Radha Ramana serial: Did Sitara Devi kill Dinakar

    'ರಾಧಾ ರಮಣ' ಧಾರಾವಾಹಿಯಲ್ಲಿ ದಿನಕರ್ ಕಾಣೆಯಾಗಿದ್ಹೇಗೆ.? ರಹಸ್ಯ ಇಲ್ಲಿದೆ..'ರಾಧಾ ರಮಣ' ಧಾರಾವಾಹಿಯಲ್ಲಿ ದಿನಕರ್ ಕಾಣೆಯಾಗಿದ್ಹೇಗೆ.? ರಹಸ್ಯ ಇಲ್ಲಿದೆ..

    ಈ ನಡುವೆ ದಿನಕರ್ ಏನಾಗಿದ್ದಾರೆ ಎಂಬ ಅನುಮಾನ ದೀಪಿಕಾಗೆ ಶುರುವಾಗಿದೆ. ತನ್ನ ತಾಯಿ ಸಿತಾರ ದೇವಿಯೇ ದಿನಕರ್ ರನ್ನ ಮುಗಿಸಿಬಿಟ್ರಾ ಎಂಬ ಪ್ರಶ್ನೆ ದೀಪಿಕಾಗೆ ಕಾಡುತ್ತಿದೆ.

    ಅಷ್ಟಕ್ಕೂ, ಸಿತಾರ ದೇವಿ ಯಾಕೆ ದಿನಕರ್ ರನ್ನ ಮುಗಿಸಬೇಕು ಅಂದ್ರೆ, ಇಡೀ ಕುಟುಂಬದಲ್ಲಿ 'ಅವನಿ' ಮುಖ ಗೊತ್ತಿರೋದು ದಿನಕರ್ ಗೆ ಮಾತ್ರ. ಹೀಗಾಗಿ ದೀಪಿಕಾಗೆ ಡೌಟ್ ಬಂದಿದೆ. ಆದ್ರೆ, ದಿನಕರ್ ಕಥೆ ಏನಾಗಿದೆ ಎಂಬ ಸತ್ಯವನ್ನ ಸಿತಾರ ದೇವಿ ಇನ್ನೂ ಬಾಯ್ಬಿಟ್ಟಿಲ್ಲ.

    ಸದ್ಯ 'ಅವನಿ' ಹಾಗೂ 'ರಾಣಿ' ಅದಲು ಬದಲಾದ ಕಥೆ ಅನಾವರಣವಾಗಿದೆ. ದಿನಕರ್ ಕಥೆ ಮಾತ್ರ ಬಯಲಾಗಬೇಕಿದೆ ಅಷ್ಟೇ.

    English summary
    Radha Ramana serial written update: Did Sitara Devi kill Dinakar.
    Friday, June 15, 2018, 18:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X