Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ರಾಧಾ ರಮಣ'ದಲ್ಲಿ ದಿನಕರ್ ಕಥೆ ಮುಗಿಸಿಬಿಟ್ಲಾ ಸಿತಾರ.?
ವಿಧಾನಸಭೆ ಚುನಾವಣೆ 2018 ರಲ್ಲಿ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನೆ.ಲ.ನರೇಂದ್ರ ಬಾಬು ಕಣಕ್ಕೆ ಇಳಿದ್ಮೇಲೆ, 'ರಾಧಾ ರಮಣ' ಧಾರಾವಾಹಿಯಿಂದ ಅವರು ನಾಪತ್ತೆ ಆಗಿದ್ದರು.
ಸೀರಿಯಲ್ ನಲ್ಲಿ ದಿನಕರ್ (ನೆ.ಲ.ನರೇಂದ್ರ ಬಾಬು) ರನ್ನ ರಾಧಾ ಹಾಗೂ ಅನ್ವಿತಾ ಹುಡುಕುತ್ತಲೇ ಇದ್ದಾರೆ. ಆದ್ರೆ, ಅದ್ಯಾಕೋ ಇನ್ನೂ ದಿನಕರ್ ಸುಳಿವು ಯಾರಿಗೂ ಸಿಕ್ಕಿಲ್ಲ.
ಚುನಾವಣೆ ಮುಗಿದು ಒಂದು ತಿಂಗಳಾಗಿದೆ. ಎಲೆಕ್ಷನ್ ನಲ್ಲಿ ನೆ.ಲ.ನರೇಂದ್ರ ಬಾಬು ಸೋಲು ಅನುಭವಿಸಿದರು. ಚುನಾವಣೆ ರಾಜಕೀಯದಿಂದ ಅವರೀಗ ಬಿಡುವು ಪಡೆದುಕೊಂಡಿದ್ದಾಗಿದೆ. ಹೀಗಿದ್ದರೂ, ಅವರಿನ್ನೂ 'ರಾಧಾ ರಮಣ' ಧಾರಾವಾಹಿಯಲ್ಲಿ ಕಾಣಿಸಿಕೊಂಡಿಲ್ಲ.
'ರಾಧಾ ರಮಣ' ಧಾರಾವಾಹಿಯಲ್ಲಿ ದಿನಕರ್ ಕಾಣೆಯಾಗಿದ್ಹೇಗೆ.? ರಹಸ್ಯ ಇಲ್ಲಿದೆ..
ಈ ನಡುವೆ ದಿನಕರ್ ಏನಾಗಿದ್ದಾರೆ ಎಂಬ ಅನುಮಾನ ದೀಪಿಕಾಗೆ ಶುರುವಾಗಿದೆ. ತನ್ನ ತಾಯಿ ಸಿತಾರ ದೇವಿಯೇ ದಿನಕರ್ ರನ್ನ ಮುಗಿಸಿಬಿಟ್ರಾ ಎಂಬ ಪ್ರಶ್ನೆ ದೀಪಿಕಾಗೆ ಕಾಡುತ್ತಿದೆ.
ಅಷ್ಟಕ್ಕೂ, ಸಿತಾರ ದೇವಿ ಯಾಕೆ ದಿನಕರ್ ರನ್ನ ಮುಗಿಸಬೇಕು ಅಂದ್ರೆ, ಇಡೀ ಕುಟುಂಬದಲ್ಲಿ 'ಅವನಿ' ಮುಖ ಗೊತ್ತಿರೋದು ದಿನಕರ್ ಗೆ ಮಾತ್ರ. ಹೀಗಾಗಿ ದೀಪಿಕಾಗೆ ಡೌಟ್ ಬಂದಿದೆ. ಆದ್ರೆ, ದಿನಕರ್ ಕಥೆ ಏನಾಗಿದೆ ಎಂಬ ಸತ್ಯವನ್ನ ಸಿತಾರ ದೇವಿ ಇನ್ನೂ ಬಾಯ್ಬಿಟ್ಟಿಲ್ಲ.
ಸದ್ಯ 'ಅವನಿ' ಹಾಗೂ 'ರಾಣಿ' ಅದಲು ಬದಲಾದ ಕಥೆ ಅನಾವರಣವಾಗಿದೆ. ದಿನಕರ್ ಕಥೆ ಮಾತ್ರ ಬಯಲಾಗಬೇಕಿದೆ ಅಷ್ಟೇ.