Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ರಾಧಾ ರಮಣ'ದಲ್ಲಿ ದಿನಕರ್ ಕಥೆ ಮುಗಿಸಿಬಿಟ್ಲಾ ಸಿತಾರ.?
ವಿಧಾನಸಭೆ ಚುನಾವಣೆ 2018 ರಲ್ಲಿ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನೆ.ಲ.ನರೇಂದ್ರ ಬಾಬು ಕಣಕ್ಕೆ ಇಳಿದ್ಮೇಲೆ, 'ರಾಧಾ ರಮಣ' ಧಾರಾವಾಹಿಯಿಂದ ಅವರು ನಾಪತ್ತೆ ಆಗಿದ್ದರು.
ಸೀರಿಯಲ್ ನಲ್ಲಿ ದಿನಕರ್ (ನೆ.ಲ.ನರೇಂದ್ರ ಬಾಬು) ರನ್ನ ರಾಧಾ ಹಾಗೂ ಅನ್ವಿತಾ ಹುಡುಕುತ್ತಲೇ ಇದ್ದಾರೆ. ಆದ್ರೆ, ಅದ್ಯಾಕೋ ಇನ್ನೂ ದಿನಕರ್ ಸುಳಿವು ಯಾರಿಗೂ ಸಿಕ್ಕಿಲ್ಲ.
ಚುನಾವಣೆ ಮುಗಿದು ಒಂದು ತಿಂಗಳಾಗಿದೆ. ಎಲೆಕ್ಷನ್ ನಲ್ಲಿ ನೆ.ಲ.ನರೇಂದ್ರ ಬಾಬು ಸೋಲು ಅನುಭವಿಸಿದರು. ಚುನಾವಣೆ ರಾಜಕೀಯದಿಂದ ಅವರೀಗ ಬಿಡುವು ಪಡೆದುಕೊಂಡಿದ್ದಾಗಿದೆ. ಹೀಗಿದ್ದರೂ, ಅವರಿನ್ನೂ 'ರಾಧಾ ರಮಣ' ಧಾರಾವಾಹಿಯಲ್ಲಿ ಕಾಣಿಸಿಕೊಂಡಿಲ್ಲ.
'ರಾಧಾ ರಮಣ' ಧಾರಾವಾಹಿಯಲ್ಲಿ ದಿನಕರ್ ಕಾಣೆಯಾಗಿದ್ಹೇಗೆ.? ರಹಸ್ಯ ಇಲ್ಲಿದೆ..
ಈ ನಡುವೆ ದಿನಕರ್ ಏನಾಗಿದ್ದಾರೆ ಎಂಬ ಅನುಮಾನ ದೀಪಿಕಾಗೆ ಶುರುವಾಗಿದೆ. ತನ್ನ ತಾಯಿ ಸಿತಾರ ದೇವಿಯೇ ದಿನಕರ್ ರನ್ನ ಮುಗಿಸಿಬಿಟ್ರಾ ಎಂಬ ಪ್ರಶ್ನೆ ದೀಪಿಕಾಗೆ ಕಾಡುತ್ತಿದೆ.
ಅಷ್ಟಕ್ಕೂ, ಸಿತಾರ ದೇವಿ ಯಾಕೆ ದಿನಕರ್ ರನ್ನ ಮುಗಿಸಬೇಕು ಅಂದ್ರೆ, ಇಡೀ ಕುಟುಂಬದಲ್ಲಿ 'ಅವನಿ' ಮುಖ ಗೊತ್ತಿರೋದು ದಿನಕರ್ ಗೆ ಮಾತ್ರ. ಹೀಗಾಗಿ ದೀಪಿಕಾಗೆ ಡೌಟ್ ಬಂದಿದೆ. ಆದ್ರೆ, ದಿನಕರ್ ಕಥೆ ಏನಾಗಿದೆ ಎಂಬ ಸತ್ಯವನ್ನ ಸಿತಾರ ದೇವಿ ಇನ್ನೂ ಬಾಯ್ಬಿಟ್ಟಿಲ್ಲ.
ಸದ್ಯ 'ಅವನಿ' ಹಾಗೂ 'ರಾಣಿ' ಅದಲು ಬದಲಾದ ಕಥೆ ಅನಾವರಣವಾಗಿದೆ. ದಿನಕರ್ ಕಥೆ ಮಾತ್ರ ಬಯಲಾಗಬೇಕಿದೆ ಅಷ್ಟೇ.