Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಂತೂ ಇಂತೂ ದಿನಕರ್ ಮನೆ ಸೇರಾಯ್ತು.!
Recommended Video
ಕರ್ನಾಟಕ ವಿಧಾನಸಭೆ ಚುನಾವಣೆ 2018 ರಲ್ಲಿ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಿಂದ ನೆ.ಲ.ನರೇಂದ್ರ ಬಾಬು ಕಣಕ್ಕೆ ಇಳಿದಿದ್ದರು. ಆದ್ರೆ, ಚುನಾವಣೆಯಲ್ಲಿ ಅವರು ಗೆಲುವು ಸಾಧಿಸಲಿಲ್ಲ.
ಚುನಾವಣೆ ಕಾರಣಕ್ಕಾಗಿ 'ರಾಧಾ ರಮಣ' ಧಾರಾವಾಹಿಯಿಂದ ಬ್ರೇಕ್ ಪಡೆದಿದ್ದ ನೆ.ಲ.ನರೇಂದ್ರ ಬಾಬು ಇದೀಗ ಮತ್ತೆ ಕಿರುತೆರೆ ಕಡೆ ಮುಖ ಮಾಡಿದ್ದಾರೆ.
ಎಲೆಕ್ಷನ್ ನಿಂದಾಗಿ 'ರಾಧಾ ರಮಣ' ಧಾರಾವಾಹಿಯಲ್ಲಿ ನೆ.ಲ.ನರೇಂದ್ರ ಬಾಬು ನಿರ್ವಹಿಸುತ್ತಿದ್ದ ದಿನಕರ್ ಪಾತ್ರಕ್ಕೆ ಕೊಂಚ ಟ್ವಿಸ್ಟ್ ನೀಡಲಾಗಿತ್ತು. ಸಿತಾರ ದೇವಿ ಸೆರೆಮನೆಯಲ್ಲಿ ದಿನಕರ್ ಇಷ್ಟು ದಿನ ಬಂಧಿಯಾಗಿದ್ದರು ಎಂದು ಧಾರಾವಾಹಿಯಲ್ಲಿ ತೋರಿಸಲಾಗಿದೆ.
'ರಾಧಾ ರಮಣ' ಧಾರಾವಾಹಿಯಲ್ಲಿ ದಿನಕರ್ ಕಾಣೆಯಾಗಿದ್ಹೇಗೆ.? ರಹಸ್ಯ ಇಲ್ಲಿದೆ
'ಅವನಿ' ಸಿಕ್ಕ ದಿನದಿಂದ ಕಾಣೆ ಆಗಿದ್ದ ದಿನಕರ್ ರನ್ನ ಹುಡುಕಿ ಹುಡುಕಿ ಅನ್ವಿತಾ ಹಾಗೂ ರಾಧಾ ಸುಸ್ತಾಗಿದ್ದರು. ಇಲ್ಲಿಯವರೆಗೂ ದಿನಕರ್ ರನ್ನ ಕೂಡಿ ಹಾಕಿದ್ದ ಸಿತಾರ ದೇವಿ ಇದೀಗ ಅವರನ್ನ ಮನೆಗೆ ಕಳುಹಿಸುವ ದೊಡ್ಡ ಮನಸ್ಸು ಮಾಡಿದ್ದಾಳೆ. ಜೊತೆಗೆ ಯಾವ ಸತ್ಯವನ್ನೂ ಬಾಯಿ ಬಿಡದಂತೆ ತಾಕೀತು ಮಾಡಿದ್ದಾಳೆ.
ಒಂದ್ವೇಳೆ ಸತ್ಯ ಬಾಯ್ಬಿಟ್ಟರೆ, 'ಅವನಿ'ಗೆ ಅಪಾಯ ತಪ್ಪಿದ್ದಲ್ಲ ಅಂತ ದಿನಕರ್ ಗೆ ಸಿತಾರ ದೇವಿ ಬ್ಲಾಕ್ ಮೇಲ್ ಮಾಡಿದ್ದಾಳೆ. ಸಿತಾರ ದೇವಿ ಕಪಿಮುಷ್ಟಿಯಿಂದ ಬಿಡಿಸಿಕೊಂಡು ದಿನಕರ್ ಮನೆ ತಲುಪಿದ್ದಾರೆ. ಸಿತಾರ ದೇವಿ ಬ್ಲಾಕ್ ಮೇಲ್ ಗೆ ಬೆದರಿ ದಿನಕರ್ ತಮ್ಮ ಬಾಯಿಗೆ ಬೀಗ ಹಾಕಿಕೊಳ್ತಾರೋ, ಇಲ್ಲ ಸತ್ಯ ಬಾಯ್ಬಿಡ್ತಾರೋ, ಇಂದಿನ ಸಂಚಿಕೆಯಲ್ಲಿ ನೋಡಬೇಕು.