Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಡೆಗೂ ದಿನಕರ್ ದರ್ಶನ ಆಯ್ತು.! ಅವ್ರು ಸತ್ತಿಲ್ಲ ಕಣ್ರೀ...
Recommended Video
'ಕಲರ್ಸ್ ಕನ್ನಡ' ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ' ಧಾರಾವಾಹಿಯಲ್ಲಿ ಕಡೆಗೂ ದಿನಕರ್ ದರ್ಶನ ಆಗಿದೆ.
ವಿಧಾನಸಭೆ ಚುನಾವಣೆ 2018ರಲ್ಲಿ ಬಿಜೆಪಿ ಪಕ್ಷದಿಂದ ನೆ.ಲ.ನರೇಂದ್ರ ಬಾಬು ಅವರಿಗೆ ಟಿಕೆಟ್ ಘೋಷಣೆ ಆದ್ಮೇಲೆ 'ರಾಧಾ ರಮಣ' ಧಾರಾವಾಹಿ ಕಡೆ ಅವರು (ದಿನಕರ್) ಮುಖ ಮಾಡಿರಲಿಲ್ಲ. ಇದೀಗ ಚುನಾವಣೆ ಮುಗಿದು, ಎಲೆಕ್ಷನ್ ನಲ್ಲಿ ನೆ.ಲ.ನರೇಂದ್ರ ಬಾಬು ಸೋಲು ಅನುಭವಿಸಿರುವುದರಿಂದ ವಾಪಸ್ ಕಿರುತೆರೆ ಕಡೆ ಮುಖ ಮಾಡಿದ್ದಾರೆ.
ಇಷ್ಟು ದಿನ ಧಾರಾವಾಹಿಯಲ್ಲಿ ನಾಪತ್ತೆ ಆಗಿದ್ದ ದಿನಕರ್ ಇದೀಗ ಸಿತಾರ ದೇವಿ 'ಸೆರೆ'ಮನೆಯಲ್ಲಿ ಪ್ರತ್ಯಕ್ಷವಾಗಿದ್ದಾರೆ. ಸಿತಾರ ದೇವಿ ಕಪಿಮುಷ್ಟಿಯಿಂದ ತಪ್ಪಿಸಿಕೊಳ್ಳಲು ದಿನಕರ್ ಪ್ರಯತ್ನ ಪಟ್ಟರೂ, ಸಫಲ ಆಗಲಿಲ್ಲ.
'ರಾಧಾ ರಮಣ'ದಲ್ಲಿ ದಿನಕರ್ ಕಥೆ ಮುಗಿಸಿಬಿಟ್ಲಾ ಸಿತಾರ.?
ಮನೆಗೆ ತೆರಳಿ ಸಿತಾರ ದೇವಿ ಬಣ್ಣ ಬಯಲು ಮಾಡಬೇಕು ಎಂದುಕೊಂಡಿದ್ದ ದಿನಕರ್ ಗೆ ಇದೀಗ ಶಾಕ್ ಕಾದಿದೆ. ನಿಜವಾದ 'ಅವನಿ' ಮನೆ ಸೇರಿಲ್ಲ ಎಂಬ ಸಂಗತಿ ದಿನಕರ್ ಗೆ ಗೊತ್ತಾಗಿದೆ. ಒಂದ್ವೇಳೆ ಮನೆಯಲ್ಲಿ ದಿನಕರ್ ಸತ್ಯ ಬಾಯಿಬಿಡಲು ಪ್ರಯತ್ನ ಪಟ್ಟರೂ, ಅದರ ದುಷ್ಪರಿಣಾಮ 'ಅವನಿ' ಮೇಲಾಗುತ್ತದೆ ಎಂದು ಸಿತಾರ ದೇವಿ ಬ್ಲಾಕ್ ಮೇಲ್ ಮಾಡಿದ್ದಾಳೆ.
ಸಿತಾರ ಬ್ಲಾಕ್ ಮೇಲ್ ಗೆ ದಿನಕರ್ ಬೆದರುತ್ತಾರಾ.? ಸಿತಾರ ನಿಜಬಣ್ಣ ಯಾವಾಗ ಬಯಲಾಗುತ್ತದೋ, ಧಾರಾವಾಹಿ ನಿರ್ದೇಶಕರೇ ಬಲ್ಲ.!