ಕಡೆಗೂ ದಿನಕರ್ ದರ್ಶನ ಆಯ್ತು.! ಅವ್ರು ಸತ್ತಿಲ್ಲ ಕಣ್ರೀ...
Recommended Video

'ಕಲರ್ಸ್ ಕನ್ನಡ' ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ' ಧಾರಾವಾಹಿಯಲ್ಲಿ ಕಡೆಗೂ ದಿನಕರ್ ದರ್ಶನ ಆಗಿದೆ.
ವಿಧಾನಸಭೆ ಚುನಾವಣೆ 2018ರಲ್ಲಿ ಬಿಜೆಪಿ ಪಕ್ಷದಿಂದ ನೆ.ಲ.ನರೇಂದ್ರ ಬಾಬು ಅವರಿಗೆ ಟಿಕೆಟ್ ಘೋಷಣೆ ಆದ್ಮೇಲೆ 'ರಾಧಾ ರಮಣ' ಧಾರಾವಾಹಿ ಕಡೆ ಅವರು (ದಿನಕರ್) ಮುಖ ಮಾಡಿರಲಿಲ್ಲ. ಇದೀಗ ಚುನಾವಣೆ ಮುಗಿದು, ಎಲೆಕ್ಷನ್ ನಲ್ಲಿ ನೆ.ಲ.ನರೇಂದ್ರ ಬಾಬು ಸೋಲು ಅನುಭವಿಸಿರುವುದರಿಂದ ವಾಪಸ್ ಕಿರುತೆರೆ ಕಡೆ ಮುಖ ಮಾಡಿದ್ದಾರೆ.
ಇಷ್ಟು ದಿನ ಧಾರಾವಾಹಿಯಲ್ಲಿ ನಾಪತ್ತೆ ಆಗಿದ್ದ ದಿನಕರ್ ಇದೀಗ ಸಿತಾರ ದೇವಿ 'ಸೆರೆ'ಮನೆಯಲ್ಲಿ ಪ್ರತ್ಯಕ್ಷವಾಗಿದ್ದಾರೆ. ಸಿತಾರ ದೇವಿ ಕಪಿಮುಷ್ಟಿಯಿಂದ ತಪ್ಪಿಸಿಕೊಳ್ಳಲು ದಿನಕರ್ ಪ್ರಯತ್ನ ಪಟ್ಟರೂ, ಸಫಲ ಆಗಲಿಲ್ಲ.

ಮನೆಗೆ ತೆರಳಿ ಸಿತಾರ ದೇವಿ ಬಣ್ಣ ಬಯಲು ಮಾಡಬೇಕು ಎಂದುಕೊಂಡಿದ್ದ ದಿನಕರ್ ಗೆ ಇದೀಗ ಶಾಕ್ ಕಾದಿದೆ. ನಿಜವಾದ 'ಅವನಿ' ಮನೆ ಸೇರಿಲ್ಲ ಎಂಬ ಸಂಗತಿ ದಿನಕರ್ ಗೆ ಗೊತ್ತಾಗಿದೆ. ಒಂದ್ವೇಳೆ ಮನೆಯಲ್ಲಿ ದಿನಕರ್ ಸತ್ಯ ಬಾಯಿಬಿಡಲು ಪ್ರಯತ್ನ ಪಟ್ಟರೂ, ಅದರ ದುಷ್ಪರಿಣಾಮ 'ಅವನಿ' ಮೇಲಾಗುತ್ತದೆ ಎಂದು ಸಿತಾರ ದೇವಿ ಬ್ಲಾಕ್ ಮೇಲ್ ಮಾಡಿದ್ದಾಳೆ.
ಸಿತಾರ ಬ್ಲಾಕ್ ಮೇಲ್ ಗೆ ದಿನಕರ್ ಬೆದರುತ್ತಾರಾ.? ಸಿತಾರ ನಿಜಬಣ್ಣ ಯಾವಾಗ ಬಯಲಾಗುತ್ತದೋ, ಧಾರಾವಾಹಿ ನಿರ್ದೇಶಕರೇ ಬಲ್ಲ.!


Click it and Unblock the Notifications











