Don't Miss!
- News Lok Sabha Election 2024: ಬೆಂಗಳೂರಿನಲ್ಲಿ ಈ ದಿನಗಳಂದು ಮದ್ಯ ಮಾರಾಟ ಸಂಪೂರ್ಣ ನಿಷೇಧ-ಯಾವ್ಯಾವಾಗ ಹಾಗೂ ಕಾರಣವೇನು?
- Technology ಸದ್ಯ ನೀವೇನಾದರೂ ಹೊಸ ರೆಡ್ಮಿ ಫೋನ್ ಖರೀದಿಸ್ತೀರಾ?..ಹಾಗಿದ್ರೆ, ಇಲ್ಲಿ ಗಮನಿಸಿ!
- Lifestyle ದುಬೈ ಪ್ರವಾಹದ ವೈರಲ್ ವೀಡಿಯೋಗಳು: ಒಂದೊಂದು ದೃಶ್ಯವೂ ಬದುಕಿನ ಪಾಠ ಹೇಳುತ್ತೆ
- Finance Binance: ಫೈನ್ ಕಟ್ಟಿ ಭಾರತಕ್ಕೆ ಮರಳಿ ಬರಲಿದೆ ಕ್ರಿಫ್ಟೋಕರೆನ್ಸಿ ವಿನಿಮಯ ಕೇಂದ್ರ!
- Automobiles Tata: ಮಧ್ಯಮ ವರ್ಗದವರಿಗೆ ಸಿಹಿಸುದ್ದಿ.. ಮುಂಬರಲಿರುವ ಟಾಟಾ ಕಾರುಗಳಿವು, ಒಂದಕ್ಕಿಂತ ಒಂದು ಭರ್ಜರಿಯಾಗಿವೆ!
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮನೆಗೆ ಬಂದ್ಮೇಲೆ ಬಾಂಬ್ ಸಿಡಿಸಿದ ದಿನಕರ್.! ಸಿತಾರ ದೇವಿಗೆ ಶಾಕ್.!
''ಯಾವುದೇ ಕಾರಣಕ್ಕೂ ಮನೆಯಲ್ಲಿ ದಿನಕರ್ ಸತ್ಯ ಬಾಯಿ ಬಿಡುವುದಿಲ್ಲ. 'ಅವನಿ'ಗೆ ತೊಂದರೆ ಆದರೆ ದಿನಕರ್ ಸಹಿಸುವುದಿಲ್ಲ'' ಎಂಬ ನಂಬಿಕೆ ಮೇಲೆ ದಿನಕರ್ ನ ಸಿತಾರ ದೇವಿ ಮನೆಗೆ ಕಳುಹಿಸಿಕೊಟ್ಟಳು. ಆದ್ರೀಗ, ಸಿತಾರ ದೇವಿ ಪ್ಲಾನ್ ಉಲ್ಟಾ ಹೊಡೆಯುವ ಹಾಗೆ ಕಾಣುತ್ತಿದೆ.
ಮನೆಗೆ ಬಂದ ಕೂಡಲೆ ಸಿತಾರ ದೇವಿ ಹೇಳಿದ ಹಾಗೆ, 'ಕಿಡ್ನ್ಯಾಪ್' ಕುರಿತು ದಿನಕರ್ ಪುಂಗಿ ಊದಿದರು. ಅದಾದ್ಮೇಲೆ ಸಿತಾರ ದೇವಿ ಕೂಡ ಮನೆಗೆ ಎಂಟ್ರಿ ಕೊಟ್ಟು ದಿನಕರ್ ಕಷ್ಟ-ಸುಖ ವಿಚಾರಿಸಿದರು. ಸಾಲದಕ್ಕೆ, 'ಅವನಿ' ಹೆಸರಿನಲ್ಲಿ ಮನೆಗೆ ಸೇರಿದ 'ರಾಣಿ' ಕೂಡ ದಿನಕರ್ ನ ಮಾತನಾಡಿಸಿದಳು.
ನಿಜವಾದ 'ಅವನಿ' ಅಮ್ಮನಿಗಾಗಿ ಹಪಹಪಿಸುತ್ತಿರುವಾಗ, ಡ್ಯೂಪ್ಲಿಕೇಟ್ 'ಅವನಿ' ಮನೆ ಸೇರಿರುವುದು ದಿನಕರ್ ಗೆ ಸಹಿಸಲಾಗಲಿಲ್ಲ. ಹೀಗಾಗಿ, ''ಕೋಗಿಲೆ ಗೂಡಲ್ಲಿ ಸೇರಿಕೊಂಡಿರುವ ಕಾಗೆ ನೀನು.. ಜಾಸ್ತಿ ದಿನ ನೀನು ಈ ಮನೆಯಲ್ಲಿ ಉಳಿಯಲು ಸಾಧ್ಯ ಇಲ್ಲ.. ನಾನು ಇದಕ್ಕೆ ಅವಕಾಶ ಮಾಡಿಕೊಡಲ್ಲ'' ಅಂತ 'ರಾಣಿ' ಮುಂದೆ ದಿನಕರ್ ಬಾಂಬ್ ಸಿಡಿಸಿದರು.
ಅಂತೂ ಇಂತೂ ದಿನಕರ್ ಮನೆ ಸೇರಾಯ್ತು.!
ದಿನಕರ್ ಆಡಿದ ಮಾತನ್ನು ಕೇಳಿ ಸಿತಾರ ದೇವಿ ಹಾಗೂ ದೀಪಿಕಾ ಅಕ್ಷರಶಃ ಶಾಕ್ ಆಗಿದ್ದಾರೆ. ಪ್ಲಾನ್ ಉಲ್ಟಾ ಹೊಡೆಯಬಹುದು ಎಂಬ ಅನುಮಾನ ಅವರಿಬ್ಬರಿಗೂ ಕಾಡುತ್ತಿದೆ.
ಆಡಿದ ಮಾತಿನಂತೆ ರಾಣಿಯನ್ನ ಮನೆಯಿಂದ ಓಡಿಸಲು ದಿನಕರ್ ಪ್ರಯತ್ನ ಪಡುತ್ತಾರಾ.? ಈಗಲಾದರೂ ದಿನಕರ್ ಸತ್ಯ ಬಿಚ್ಚಿಡುತ್ತಾರಾ.? ಮುಂದೇನಾಗುತ್ತೋ, ನೋಡೋಣ...