Don't Miss!
- Sports IPL 2024: ವಿರಾಟ್ ಕೊಹ್ಲಿ ವಿವಾದಾತ್ಮಕ ಔಟ್ ಬಗ್ಗೆ ಭಾರತದ ಮಾಜಿ ಆಟಗಾರರ ಅಭಿಪ್ರಾಯ
- Technology Airtel: ಏರ್ಟೆಲ್ನಿಂದ ಹೊಸ ಅಂತಾರಾಷ್ಟ್ರೀಯ ರೋಮಿಂಗ್ ಪ್ಲ್ಯಾನ್ಗಳು! ಇವು ಹೇಗೆಲ್ಲಾ ಅನುಕೂಲ?
- News ಧಾರವಾಡ; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ವಾಪಸ್, ಕಣದಲ್ಲಿ 17 ಮಂದಿ
- Lifestyle ಮೊಲದ ಜೊತೆ ಓಡಿ ಮತ್ತೊಮ್ಮೆ ರೇಸ್ ಗೆದ್ದ ಆಮೆ..! ಈ ಕಥೆ ನಿಜವಾಗಿದ್ದು ಹೇಗೆ ನೋಡಿ.!
- Finance Bangalore Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- Automobiles ಸಾಮಾನ್ಯರಂತೆ ಹಳ್ಳಿಯಲ್ಲಿರುವ ದೇಶದ 55ನೇ ಶ್ರೀಮಂತ ಶ್ರೀಧರ್ ವೆಂಬು: ಕಚೇರಿಗೆ ಹೋಗಲು ಎಲೆಕ್ಟ್ರಿಕ್ ಆಟೋ ಖರೀದಿ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಂತೂ ಇಂತೂ ರಾಧಾ ರಮಣ್ ಒಂದಾದರು: ಇನ್ಮೇಲಿದೆ ಹೊಸ ತಿರುವು.!
Recommended Video
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ್' ಧಾರಾವಾಹಿಯಲ್ಲಿ ಹೊಸ ತಿರುವು ಸಿಕ್ಕಿದೆ.
ಮದುವೆ ಆಗಿ ವರ್ಷ ಕಳೆದರೂ, ಇನ್ನೂ ತಮ್ಮ ಮನಸ್ಸಿನಲ್ಲಿ ಇರುವ ಪ್ರೀತಿಯನ್ನ ಹೇಳಿಕೊಳ್ಳಲು ಒದ್ದಾಡುತ್ತಿದ್ದ ರಾಧಾ ಮತ್ತು ರಮಣ್ ಸದ್ಯ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.
''ರಮಣ್ ಗೆ ಆಕ್ಸಿಡೆಂಟ್ ಆಗಿದೆ, ರಮಣ್ ಆರೋಗ್ಯ ಸ್ಥಿತಿ ತುಂಬಾ ಕ್ರಿಟಿಕಲ್ ಆಗಿದೆ. ಆಪರೇಶನ್ ನಡೆಯುತ್ತಿದೆ'' ಎಂಬುದನ್ನೆಲ್ಲ ಕೇಳಿ ಆಘಾತಗೊಂಡಿದ್ದ ರಾಧಾ ಕಡೆಗೆ ರಮಣ್ ಪ್ರತ್ಯಕ್ಷವಾಗುತ್ತಿದ್ದಂತೆಯೇ ತಮ್ಮ ಮನಸ್ಸಿನಲ್ಲಿದ್ದ ಭಾವನೆಗಳನ್ನೆಲ್ಲ ಹೊರಹಾಕಿಬಿಟ್ಟರು.
ಅಂತೂ ಇಂತೂ 480 ಸಂಚಿಕೆಗಳು ಉರುಳಿದ ಬಳಿಕ ಕಡೆಗೂ ರಾಧಾ ಬಾಯಲ್ಲಿ ''ರಮಣ್ ಐ ಲವ್ ಯು'' ಎಂಬ ಮಾತು ಬಂದಿದೆ. ಇದನ್ನ ನೋಡಿ ದೀಪಿಕಾ ಉರ್ಕೊಂಡಿದ್ರೆ, ರಾಧಾ-ರಮಣ್ ಫ್ಯಾನ್ಸ್ ಅಂತೂ ಖುಷಿ ಆಗಿದ್ದಾರೆ. ಮುಂದೆ ಓದಿರಿ...
ರಾಧಾ-ರಮಣ್ ಲವ್ ಸ್ಟೋರಿ ಶುರು
'ರಾಧಾ ರಮಣ' ಧಾರಾವಾಹಿಯಲ್ಲಿ ಇದೀಗ ರಾಧಾ-ರಮಣ್ ರ ರೋಮ್ಯಾಂಟಿಕ್ ಅಧ್ಯಾಯ ಆರಂಭವಾಗಿದೆ. ಕಾಂಟ್ರ್ಯಾಕ್ಟ್ ಮ್ಯಾರೇಜ್ ಮಾಡಿಕೊಂಡಿದ್ದ ರಾಧಾ-ರಮಣ್ ಮಧ್ಯೆ ಇದ್ದ ಎಲ್ಲ ಕನ್ ಫ್ಯೂಶನ್ ಗಳು ಶಮನಗೊಂಡಿದೆ. ರಾಧಾ ಮತ್ತು ರಮಣ್ ಪರಸ್ಪರ ತಮ್ಮ ಪ್ರೀತಿಯನ್ನ ನಿವೇದಿಸಿಕೊಂಡಿದ್ದಾರೆ.
ಅಂತೂ ರಾಧಾ ಮಿಸ್ ಗೆ ಒಂದು ಸತ್ಯ ಗೊತ್ತಾಯಿತು.!
ಆಕ್ಸಿಡೆಂಟ್ ಟ್ವಿಸ್ಟ್.!
ರಮಣ್ ಗೆ ಆಕ್ಸಿಡೆಂಟ್ ಆಗಿದ್ದು ನಿಜ. ಆದ್ರೆ, ಮನೆಯವರಿಗೆ ಮಾಹಿತಿ ತಲುಪಿದ ಹಾಗೆ ರಮಣ್ ಪ್ರಾಣಕ್ಕೆ ಯಾವುದೇ ತೊಂದರೆ ಆಗಿರಲಿಲ್ಲ. ರಮಣ್ ಗಾಗಿ ಆಪರೇಶನ್ ಕೂಡ ನಡೆಯುತ್ತಿರಲಿಲ್ಲ. ಫುಲ್ ಫಿಟ್ ಅಂಡ್ ಫೈನ್ ಆಗಿದ್ದ ರಮಣ್ ಮುಂದೆ ಶಾಕ್ ನಲ್ಲಿದ್ದ ರಾಧಾ ತಮ್ಮ ಪ್ರೀತಿಯನ್ನ ಹೇಳಿಕೊಂಡರು.
'ರಾಧಾ ರಮಣ'ನ ಮುಂದೆ ರಾಣಿ-ಮಾದ ಸಿಕ್ಕಿಬೀಳೋದೊಂದೇ ಬಾಕಿ.!
ರಮಣ್ ಗೆ ಖುಷಿಯೋ ಖುಷಿ.!
ರಾಧಾಗೆ ಪ್ರಪೋಸ್ ಮಾಡಲು ಇಲ್ಲಿಯವರೆಗೂ ಎಷ್ಟೋ ಬಾರಿ ರಮಣ್ ಹರಸಾಹಸ ಪಟ್ಟಿದ್ದಾರೆ. ಆದ್ರೆ, ಪ್ರತಿ ಬಾರಿಯೂ ಒಂದಲ್ಲ ಒಂದು ಅಡ್ಡಿ-ಆತಂಕ ಎದುರಾಗುತ್ತಲೇ ಇತ್ತು. ಹೀಗಿರುವಾಗಲೇ, ಸ್ವತಃ ರಾಧಾ ತಮಗೆ ಪ್ರಪೋಸ್ ಮಾಡಿದ್ದು ಸಹಜವಾಗಿ ರಮಣ್ ಗೆ ಖುಷಿ ಕೊಟ್ಟಿದೆ.
ಸಿಕ್ಕಿಬಿದ್ದ ಸಿತಾರ ದೇವಿ: ಸಿಡಿಮಿಡಿಗೊಂಡ ರಮಣ್.!
ದೀಪಿಕಾಗೆ ಫುಲ್ ಶಾಕ್
ರಾಧಾ ಮತ್ತು ರಮಣ್ ಮಧ್ಯೆ ಕೆಲ ಗೊಂದಲಗಳು ಮೂಡಲು ದೀಪಿಕಾ ಕಾರಣ. ಇದೀಗ ರಾಧಾ-ರಮಣ್ ಒಂದಾಗಿರುವುದನ್ನು ನೋಡಿ ದೀಪಿಕಾಗೆ ಶಾಕ್ ಆಗಿದೆ. ''ಇನ್ಮುಂದೆ ರಮಣ್ ನನಗೆ ಸಿಗಲ್ಲ'' ಅಂತ ಸಾಯಲು ಹೊರಟಿದ್ದ ದೀಪಿಕಾ ಕೊನೆಗೆ ಯು-ಟರ್ನ್ ತೆಗೆದುಕೊಂಡು ರಾಧಾ-ರಮಣ್ ರನ್ನ ದೂರ ಮಾಡಲು ಪಣ ತೊಟ್ಟಿದ್ದಾಳೆ. ಇದರಲ್ಲಿ ದೀಪಿಕಾ ಯಶಸ್ವಿ ಆಗುತ್ತಾಳಾ.? ಮುಂದೆ ಇನ್ಯಾವ ತಿರುವು ಕಾದಿದೆಯೋ.?