Don't Miss!
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಂತೂ ಇಂತೂ 'ಅವನಿ' ಸಿಕ್ಕಳು: ಎಲ್ಲರ ಮೊಗದಲ್ಲೂ ಮೂಡಿದೆ ನಗು.!
Recommended Video
ಕಡೆಗೂ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ' ಧಾರಾವಾಹಿಯಲ್ಲಿ 'ಅವನಿ ಆಗಮನ'ವಾಗಿದೆ.
'ರಾಧಾ ರಮಣ' ಧಾರಾವಾಹಿಯಲ್ಲಿ 'ಅವನಿ ಆಗಮನ' ಎಂಬ ಅಧ್ಯಾಯ ಶುರುವಾಗಿ ವಾರಗಳೇ ಉರುಳಿತ್ತು. ಪ್ರಕೃತಿ ಆಸ್ಪತ್ರೆಯಲ್ಲಿ 'ಅವನಿ'ಗೆ ಆಪರೇಶನ್ ಮಾಡಿಸಿ, ಇನ್ನೇನು ದೀಪಿಕಾ ಮನೆಗೆ ಕರೆದುಕೊಂಡು ಹೋಗಬೇಕು ಎನ್ನುವಷ್ಟರಲ್ಲಿ ವಿನಯ್ ಮರ್ಡರ್ ಆಯ್ತು. ಧುತ್ತೆಂದು ಪ್ರತ್ಯಕ್ಷವಾದ ರುದ್ರ 'ಅವನಿ'ಯನ್ನ ಆಸ್ಪತ್ರೆಯಿಂದಲೇ ಕಿಡ್ನ್ಯಾಪ್ ಮಾಡಿದ.
ಆಂಬ್ಯುಲೆನ್ಸ್ ನ ಚೇಸಿಂಗ್ ಮಾಡಿ, ರಾತ್ರಿ ಪೂರ್ತಿ ಪೊಲೀಸರು ಕಾಡಲ್ಲಿ ಹುಡುಕಾಟ ನಡೆಸಿದ್ಮೇಲೆ, 'ಅವನಿ' ರಮಣ್ ತೆಕ್ಕೆಗೆ ಸಿಕ್ಕಳು. ಇಪ್ಪತ್ತು ವರ್ಷಗಳಿಂದ 'ಅವನಿ'ಯನ್ನು ನೋಡಲು ಹಾತೊರೆಯುತ್ತಿದ್ದ ರಮಣ್ ಹಾಗೂ ತಾಯಿ ಸರಸ್ವತಿ ಮೊಗದಲ್ಲಿ ಮಂದಹಾಸ ಮೂಡಿತು.
ಮತ್ತಿನ್ಯಾವುದೇ ಟ್ವಿಸ್ಟ್ ಕೊಡದೇ, ಕೊನೆಗೂ 'ಅವನಿ' ರಮಣ್ ಕೈಗೆ ಸಿಕ್ಕಿದ್ದಕ್ಕೆ ವೀಕ್ಷಕರು ಕೂಡ ನಿಟ್ಟುಸಿರು ಬಿಟ್ಟಿದ್ದಾರೆ. ಮುಂದೆ ಓದಿರಿ...
ಆಂಬ್ಯುಲೆನ್ಸ್ ಹತ್ತಿದರೂ ಸಿಗಲಿಲ್ಲ.!
ಪ್ರಕೃತಿ ಆಸ್ಪತ್ರೆಯಿಂದ ಆಂಬ್ಯುಲೆನ್ಸ್ ನಲ್ಲಿ 'ಅವನಿ'ಯನ್ನ ಕಿಡ್ನ್ಯಾಪ್ ಮಾಡಿಕೊಂಡು ರುದ್ರ ಹೊರಟಾಗ, ಆಂಬ್ಯುಲೆನ್ಸ್ ಹತ್ತಿ ರುದ್ರನನ್ನ ಹಿಡಿಯಲು ರಮಣ್ ಪ್ರಯತ್ನ ಪಟ್ಟರು. ಆದ್ರೆ, ಅದು ಸಾಧ್ಯ ಆಗಲಿಲ್ಲ.
ರಮಣ್ ಕೈಗೆ 'ಅವನಿ' ಸಿಗಲ್ಲ: ಧಾರಾವಾಹಿ ಮುಗಿಯಲ್ಲ.!
ಕೆಟ್ಟು ನಿಂತ ಆಂಬ್ಯುಲೆನ್ಸ್
ಗಂಟೆಗಳ ಗಟ್ಟಲೆ ಜರ್ನಿ ಮಾಡಿದ ನಂತರ, ದೇವಸ್ಥಾನವೊಂದರ ಮುಂದೆ ಆಂಬ್ಯುಲೆನ್ಸ್ ಕೆಟ್ಟಿ ನಿಲ್ತು. 'ಅವನಿ' ಮ್ಯಾಟರ್ ಪೊಲೀಸ್ ಸ್ಟೇಷನ್ ಮೆಟ್ಟಿಲೇರ್ತು. ರುದ್ರನಿಗಾಗಿ ಹುಡುಕಾಟ ಶುರು ಆಯ್ತು. ಕಡೆಗೆ ದೇವರ ಕೃಪೆಯಿಂದ ಪೊಲೀಸರ ಮುಂದೆ ರುದ್ರ ಪ್ರತ್ಯಕ್ಷ ಆದ.
ಅತ್ತ ವಿನಯ್ ಕೊಲೆ, ಇತ್ತ 'ಅವನಿ' ಕಾಣೆ: ಅಯ್ಯೋ ದೇವರೇ.!
ರಾತ್ರಿ ಪೂರ್ತಿ ಕಾಡಲ್ಲಿ ಹುಡುಕಾಟ
ಎಸ್ಕೇಪ್ ಆಗಲು ರುದ್ರ ಶತಪ್ರಯತ್ನ ಪಟ್ಟರೂ ಸಾಧ್ಯ ಆಗಲಿಲ್ಲ. ಹೆಗಲ ಮೇಲೆ 'ಅವನಿ'ಯನ್ನ ಹಾಕೊಂಡು ಕಾಡಲ್ಲಿ ರಾತ್ರಿ ಪೂರ್ತಿ ಕಳೆದರೂ, ರುದ್ರನ ಪ್ಲಾನ್ ಸಕ್ಸಸ್ ಆಗಲಿಲ್ಲ. ರುದ್ರನ ಕಾಲಿಗೆ ಗುಂಡೇಟು ಬಿದ್ದಿದ್ರಿಂದ, ಬೆಳಕಾಗುವ ಹೊತ್ತಿಗೆ 'ಅವನಿ' ರಮಣ್ ಕೈಸೇರಿದಳು.
ದೀಪಿಕಾ ಪ್ಲಾನ್ ತಲೆಕೆಳಗು: ಪ್ರಕೃತಿ ಆಸ್ಪತ್ರೆಯಲ್ಲಿ ಏನಾಗುವುದೋ ಇಂದು.?
ಸಿಕ್ಕಿಬಿದ್ದ ರುದ್ರ
ಇಷ್ಟು ವರ್ಷಗಳ ಕಾಲ 'ಅವನಿ'ಗೆ ಕೇರ್ ಟೇಕರ್ ಆಗಿದ್ದ ರುದ್ರ, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ರುದ್ರನಿಗೆ ಪೊಲೀಸ್ ಸ್ಟೇಷನ್ ನಲ್ಲಿ ಪೊಲೀಸರು ಬೆಂಡೆತ್ತಿ ಬ್ರೇಕ್ ಹಾಕುತ್ತಿದ್ದಾರೆ.
ಭಪ್ಪರೇ!! 'ಅವನಿ' ಬದುಕಿರುವ ಗುಟ್ಟು ರಾಧಾ ಮುಂದೆ ರಟ್ಟು!
ಸಿತಾರ ನಾಪತ್ತೆ
ಇಷ್ಟೆಲ್ಲ ಬೆಳವಣಿಗೆ ಆದರೂ ಸಿತಾರ ಮಾತ್ರ ಪತ್ತೆ ಆಗಿಲ್ಲ. ಫೋನ್ ಸ್ವಿಚ್ ಆಫ್ ಮಾಡಿಕೊಂಡು ಎಲ್ಲೋ ಹೋಗ್ಬಿಟ್ಟಿದ್ದಾರೆ. ರುದ್ರ ಪೊಲೀಸರಿಗೆ ಸಿಕ್ಕಿ ಬಿದ್ದಿರೋದು, 'ಅವನಿ' ರಮಣ್ ಗೆ ಸಿಕ್ಕಿರೋದು ಸಿತಾರಗೆ ಗೊತ್ತಿಲ್ಲ. ಹೀಗಾಗಿ ದೀಪಿಕಾಗೂ 'ಪುಕ ಪುಕ' ಶುರುವಾಗಿದೆ.
ಬೆದರಿ ಬೆಂಡಾದ ಸಿತಾರ ದೇವಿ: ಕಿಡ್ನ್ಯಾಪ್ ಆಗಿದ್ದಾಳಾ 'ಅವನಿ'?
ರಮಣ್ ಮೊಗದಲ್ಲಿ ಮಂದಹಾಸ
ಕಡೆಗೂ 'ಅವನಿ' ಮುಖ ನೋಡಿದ್ದಕ್ಕೆ ರಮಣ್ ಹಾಗೂ ತಾಯಿ ಸರಸ್ವತಿ ಫುಲ್ ಖುಷಿಯಾಗಿದ್ದಾರೆ. ಖುಷಿ ಕುಟುಂಬವನ್ನು ನೋಡಿ ವೀಕ್ಷಕರು ಕೂಡ ಸಂತಸ ಪಟ್ಟಿದ್ದಾರೆ.