Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ 'ರಾಣಿ' ದೊಡ್ಡ ಕಳ್ಳಿ: ಮನೆ ಮಂದಿಗೆಲ್ಲ ಕಾಗೆ ಹಾರಿಸಿದ ಸಿತಾರ ದೇವಿ.!
Recommended Video
ಕಡೆಗೂ ವೀಕ್ಷಕರ ಊಹೆ ನಿಜವಾಗಿದೆ. ನೋಡುಗರ ಡೌಟ್ ಗೆ ಕ್ಲಾರಿಟಿ ಸಿಕ್ಕಿದೆ. ಇಷ್ಟು ದಿನ ಆಕೆ ನಿಜವಾದ 'ಅವನಿ'ಯೋ, ಅಲ್ವೋ ಅಂತ ತಲೆಗೆ ಹುಳ ಬಿಟ್ಟುಕೊಂಡವರಿಗೆ ಇದೀಗ ಸ್ಪಷ್ಟನೆ ಸಿಕ್ಕಿದೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ' ಧಾರಾವಾಹಿಯಲ್ಲಿ 'ಅವನಿ ಆಗಮನ' ಅಧ್ಯಾಯ ಶುರುವಾಗಿ ವಾರಗಳೇ ಉರುಳಿದೆ. ಆಶಿತಾ ಚಂದ್ರಪ್ಪ 'ಅವನಿ' ಪಾತ್ರಧಾರಿಯಾಗಿ ಎಂಟ್ರಿಕೊಟ್ಟರು. ಇದೀಗ ಧಾರಾವಾಹಿಯಲ್ಲಿ ಆಶಿತಾ ಚಂದ್ರಪ್ಪ 'ಅವನಿ' ಅಲ್ಲ ಬದಲಾಗಿ 'ದೊಡ್ಡ ಕಳ್ಳಿ' ರಾಣಿ ಪಾತ್ರಧಾರಿ ಎಂಬ ತಿರುವು ಸಿಕ್ಕಿದೆ.
ಸಾಲದಕ್ಕೆ, ಆಕೆ 'ಅವನಿ' ಅಲ್ಲ 'ರಾಣಿ' ಎಂಬ ಸತ್ಯ ಗೊತ್ತಾಗಿರುವುದು ಮಾಸ್ಟರ್ ಮೈಂಡ್ ಸಿತಾರಾ ದೇವಿ ಪುತ್ರಿ ದೀಪಿಕಾಗೆ. ಇಷ್ಟು ದಿನ ಮಗಳಿಂದಲೂ, ಸತ್ಯ ಬಚ್ಚಿಟ್ಟಿದ್ದ ಸಿತಾರಾ ದೇವಿ ಈಗ ಮಗಳ ಕೈಯಲ್ಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಮುಂದೆ ಓದಿರಿ...
ಕೊರವಂಜಿ ನುಡಿದ ಸತ್ಯ
ಅದ್ಯಾಕೋ, ಏನೋ.. ಕೆಲ ಧಾರಾವಾಹಿಗಳಿಗೆ ಸ್ವಾಮೀಜಿ ಹಾಗೂ ಕೊರವಂಜಿಗಳೇ ದಿಕ್ಸೂಚಿಗಳು. ಇದೇ ಫಾರ್ಮುಲಾ 'ರಾಧಾ ರಮಣ' ಸೀರಿಯಲ್ ನಲ್ಲೂ ಅಪ್ಲೈ ಆಗಿದೆ. 'ರಾಧಾ ನಂಬಿರುವುದು ಸತ್ಯ ಅಲ್ಲ. ಆಕೆ ಶತ್ರು ವಿರುದ್ಧ ಗೆದ್ದಿಲ್ಲ' ಎಂದು ಕೊರವಂಜಿ ಹೇಳಿದ್ಮೇಲೆ ರಾಧಾ ತಲೆಯಲ್ಲಿ ಹೆಬ್ಬಾವು ಹರಿದಾಡುತ್ತಿದೆ.
ರುದ್ರ ಬಾಯ್ಬಿಡ್ತಿಲ್ಲ: ಆಕೆ ನಿಜವಾದ 'ಅವನಿ' ಹೌದೋ, ಅಲ್ವೋ ಗೊತ್ತಾಗ್ತಿಲ್ಲ.!
'ರಾಣಿ'ಗೆ ಪುಕ-ಪುಕ
''ಸುಳ್ಳು ಶಾಶ್ವತ ಅಲ್ಲ. ನೀನೂ ಶಾಶ್ವತ ಅಲ್ಲ'' ಅಂತ ಕೊರವಂಜಿ ಹೇಳಿದ್ಮೇಲೆ, ರಾಣಿಗೆ ಹೆದರಿಕೆ ಶುರು ಆಗಿದೆ.
ಈ 'ಅವನಿ' ರಿಯಲ್ಲೋ, ಡ್ಯೂಪ್ಲಿಕೇಟೋ.? ಫೇಸ್ ಬುಕ್ ನಲ್ಲಿ ಫುಲ್ ಡಿಬೇಟು.!
ದೀಪಿಕಾ ಮುಂದೆ ಸತ್ಯ ಅನಾವರಣ
ಇತ್ತ ದೀಪಿಕಾಗೆ ಆಕೆ 'ಅವನಿ' ಅಲ್ಲ 'ರಾಣಿ' ಎಂಬ ಸತ್ಯ ಗೊತ್ತಾಗಿದೆ. ರಾಣಿ ದೊಡ್ಡ ಕಳ್ಳಿ, ಓರ್ವ ಕಾನ್ ಆರ್ಟಿಸ್ಟ್ ಎಂಬ ಸಂಗತಿಯೂ ದೀಪಿಕಾ ಅರಿವಿಗೆ ಬಂದಿದೆ. ತನ್ನ ತಾಯಿ ಸಿತಾರಾ ದೇವಿ ಮಾಡಿರುವ ಮಾಸ್ಟರ್ ಪ್ಲಾನ್ ದೀಪಿಕಾ ಮುಂದೆ ಅನಾವರಣ ಆಗಿದೆ.
ವೀಕ್ಷಕರಿಗೆ ಯಾಕೆ ನಟಿ ಆಶಿತಾ ಮೇಲೆ ಇಷ್ಟೊಂದು ಸಿಟ್ಟು.?
ನಿಜವಾದ 'ಅವನಿ' ಈಕೆ
ಕಡೆಗೂ 'ರಾಧಾ ರಮಣ' ಧಾರಾವಾಹಿಯಲ್ಲಿ ನಿಜವಾದ 'ಅವನಿ'ಯ ದರ್ಶನ ವೀಕ್ಷಕರಿಗೆ ಆಗಿದೆ. ಈಕೆಯೇ ಸೀರಿಯಲ್ ನ ರಿಯಲ್ ಅವನಿ.
ಅಷ್ಟಕ್ಕೂ, 'ಅವನಿ' ಎಕ್ಸ್ ಚೇಂಜ್ ಆಗಿದ್ದು ಎಲ್ಲಿ.?
ಮಧ್ಯರಾತ್ರಿ ಕಾಡಲ್ಲಿ ನಿಜವಾದ 'ಅವನಿ'ಯನ್ನ ಬಿಟ್ಟು, ರಾಣಿಯನ್ನ ಹೊತ್ತುಕೊಂಡು ರುದ್ರ ಸರೆಂಡರ್ ಆದನಂತೆ. ಸದ್ಯ 'ಅವನಿ'ಯನ್ನ ಮೈಸೂರು ಮನೆಯಲ್ಲಿ ಸಿತಾರಾ ದೇವಿ ಕೂಡಿಟ್ಟಿದ್ದಾರೆ.
'ಅವನಿ'ಯನ್ನ ನೋಡ್ತಾಳಾ ದೀಪಿಕಾ.?
ಸತ್ಯವೆಲ್ಲ ಗೊತ್ತಾದ್ಮೇಲೆ, ನಿಜವಾದ 'ಅವನಿ'ಯನ್ನ ನೋಡಬೇಕು ಅಂತ ತಾಯಿ ಸಿತಾರಾ ದೇವಿ ಮುಂದೆ ದೀಪಿಕಾ ಬೇಡಿಕೆ ಇಟ್ಟಿದ್ದಾಳೆ. ಪುತ್ರಿಗೆ 'ಅವನಿ'ಯ ದರ್ಶನ ಭಾಗ್ಯವನ್ನ ಸಿತಾರಾ ದೇವಿ ಕರುಣಿಸುತ್ತಾರಾ.? ಇಂದಿನ ಸಂಚಿಕೆಯಲ್ಲಿ ಇನ್ನೇನು ಆಗುವುದೋ.?