Don't Miss!
- Finance ಡಾ. ರಾಜ್ಕುಮಾರ್ ಜನ್ಮದಿನದಂದು ಹೊಸ ಉದ್ಯಮ ಆರಂಭಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- News Realme Narzo 70: ಭರ್ಜರಿ ಕ್ಯಾಮೆರಾ ಫೀಚರ್ಗಳೊಂದಿಗೆ ರಿಯಲ್ಮಿ ನಾರ್ಜೊ 70 ಗ್ರ್ಯಾಂಡ್ ಲಾಂಚ್
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದೀಪಿಕಾ ಪ್ಲಾನ್ ತಲೆಕೆಳಗು: ಪ್ರಕೃತಿ ಆಸ್ಪತ್ರೆಯಲ್ಲಿ ಏನಾಗುವುದೋ ಇಂದು.?
Recommended Video
'ಅವನಿ'ಗೆ ಆಪರೇಶನ್ ಮಾಡಿಸಿ, ರಮಣ್ ಕೈಗೆ ಒಪ್ಪಿಸಿದರೆ... ರಮಣ್ ತನಗೆ ಒಲಿಯುತ್ತಾನೆ ಅನ್ನೋದು ದೀಪಿಕಾ ಮಾಸ್ಟರ್ ಪ್ಲಾನ್. ಹೀಗಾಗಿ, ಮನೆಯಲ್ಲಿ ಯಾರಿಗೂ ಹೇಳದೆ, ತಾಯಿ ಸಿತಾರ ದೇವಿಗೂ ಅನುಮಾನ ಬಾರದಂತೆ 'ಅವನಿ'ಗೆ ಆಪರೇಶನ್ ಮಾಡಿಸುತ್ತಿದ್ದಾಳೆ ದೀಪಿಕಾ.
ಆದ್ರೀಗ, 'ಅವನಿ' ಪ್ರಕೃತಿ ಆಸ್ಪತ್ರೆಯಲ್ಲಿರುವ ಸತ್ಯ ರಾಧಾ ಟೀಚರ್ ಗೆ ಗೊತ್ತಾಗಿದೆ. ಕೂಡಲೆ ಮನೆಗೆ ಬಂದ ರಾಧಾ ಟೀಚರ್ ಎಲ್ಲರಿಗೂ ವಿಷಯ ತಲುಪಿಸಿದ್ದೂ ಆಗಿದೆ. ರಮಣ್ ಗೂ ಕೂಡ.! ಅಂದ್ಮೇಲೆ, ಇನ್ಮುಂದೆ ದೀಪಿಕಾ ಪ್ಲಾನ್ ವರ್ಕೌಟ್ ಆಗುವುದು ಕಷ್ಟ ಸಾಧ್ಯ.
'ಅವನಿ' ಮ್ಯಾಟರ್ ಗೊತ್ತಾದ್ಮೇಲೆ, ರಾಧಾ-ರಮಣ್ ಸೇರಿದಂತೆ ಎಲ್ಲರೂ ಪ್ರಕೃತಿ ಆಸ್ಪತ್ರೆ ಕಡೆ ಮುಖ ಮಾಡಿದ್ದಾರೆ. ಪ್ರಕೃತಿ ಆಸ್ಪತ್ರೆಯಲ್ಲಿ ಅಪಾಯ ಕಾದಿದೆ, ಅಲ್ಲಿಗೆ ಹೋಗಬೇಡಿ ಅಂತ ದಿನಕರ್ ಎಷ್ಟೇ ಹೇಳಿದರೂ, ಅದನ್ನ ಕೇಳಲು ಯಾರೂ ತಯಾರಿರಲಿಲ್ಲ.
ಅಯ್ಯಯ್ಯೋ.. ಸಿತಾರ ದೇವಿಗೆ 'ಅವನಿ' ಆಪರೇಶನ್ ವಿಷಯ ಗೊತ್ತಾಗೋಯ್ತು.!
ಇತ್ತ ಪ್ರಕೃತಿ ಆಸ್ಪತ್ರೆಯಲ್ಲಿ ಸಿತಾರ ದೇವಿ ಠಿಕಾಣಿ ಹೂಡಿದ್ದಾರೆ. ಅಮ್ಮನಿಗೆ ಗೊತ್ತಾಗದ ಹಾಗೆ ದೀಪಿಕಾ ಕೂಡ ಆಸ್ಪತ್ರೆಯಲ್ಲೇ ಕದ್ದು ಮುಚ್ಚಿ ಓಡಾಡುತ್ತಿದ್ದಾಳೆ. ಹೀಗಿರುವಾಗ, ಕುಟುಂಬದವರೆಲ್ಲರೂ ಪ್ರಕೃತಿ ಆಸ್ಪತ್ರೆಗೆ ಹೊರಟಿದ್ದಾರೆ. ಇಂದು ಹಾಸ್ಪಿಟಲ್ ನಲ್ಲಿ ಏನಾಗುವುದೋ.? ಎಲ್ಲರೂ ಮುಖಾಮುಖಿ ಆದರೆ ಏನು ಗತಿ.?
ಭಪ್ಪರೇ!! 'ಅವನಿ' ಬದುಕಿರುವ ಗುಟ್ಟು ರಾಧಾ ಮುಂದೆ ರಟ್ಟು!
ಮಾನಸಿಕವಾಗಿ ಬಳಲುತ್ತಿರುವ 'ಅವನಿ' ಆಪರೇಶನ್ ನಿಂದ ಗುಣಮುಖಳಾಗುತ್ತಾಳಾ.? ನಿರ್ದೇಶಕರು ಇವತ್ತಿನ ಸಂಚಿಕೆಯಲ್ಲಿ ಇನ್ನೇನ್ ತಿರುವು ಕೊಡ್ತಾರೋ.?