Don't Miss!
- News Soumya Reddy in Tirupati:ಸೌಮ್ಯ ರೆಡ್ಡಿ ಫೋಟೋ ಹಿಡಿದು ತಿರುಪತಿ ದೇವಸ್ಥಾನದ ಮುಂದೆ ಫೋಸ್ ಕೊಟ್ಟ ಭಕ್ತ!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Automobiles ಬೈಕಿನಂತೆ ಮೈಲೇಜ್ ಕೊಡೋದ್ರಿಂದ ಈ ಹ್ಯುಂಡೈ ಕಾರಿನ ಮಾಲೀಕರು ಫುಲ್ ಖುಷ್
- Sports LSG vs CSK IPL 2024: ಐಪಿಎಲ್ನಲ್ಲಿ ಇತಿಹಾಸ ಸೃಷ್ಟಿಸಿದ ಎಂಎಸ್ ಧೋನಿ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಂತೂ ರಾಧಾ ಮಿಸ್ ಗೆ ಒಂದು ಸತ್ಯ ಗೊತ್ತಾಯಿತು.!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ' ಧಾರಾವಾಹಿಯಲ್ಲಿ ಕಡೆಗೂ ರಾಧಾ ಮಿಸ್ ಗೆ ಒಂದು ಸತ್ಯ ಗೊತ್ತಾಗಿದೆ.
ರಾಧಾ ಮೇಲೆ ಇಟ್ಟಿರುವ ಪ್ರೀತಿಯನ್ನ ಮನಸ್ಸು ಬಿಚ್ಚಿ ಹೇಳಲು ಸಾಧ್ಯ ಆಗದೆ, ಆನಿವರ್ಸರಿ ದಿನ ರಮಣ್ ಒಂದು ಪತ್ರ ಬರೆದಿದ್ದರು. ಆ ಪತ್ರ ರಾಧಾ ಕೈಸೇರದೆ, ದೀಪಿಕಾ ಪಾಲಾಯಿತು.
ಮೊದಲೇ ದೀಪಿಕಾಗೂ ರಾಧಾಗೂ ಆಗ್ಬರಲ್ಲ. ರಾಧಾ-ರಮಣ್ ನ ದೂರ ಮಾಡಬೇಕು ಅಂತ ಸ್ಕೆಚ್ ಹಾಕುತ್ತಲೇ ಇರುವ ದೀಪಿಕಾ, ರಮಣ್ ಹೆಸರಲ್ಲಿ ಬೇರೆ ಪತ್ರ ಬರೆದಳು. ಅದನ್ನ ಓದಿ ರಾಧಾ ಆಘಾತಗೊಂಡರು.
''ರಮಣ್ ಗೆ ನನ್ನ ಮೇಲೆ ಪ್ರೀತಿ ಇಲ್ಲ. ಈ ಮನೆಯಲ್ಲಿ ಇರುವ ಹಕ್ಕು ನನಗೆ ಇಲ್ಲ'' ಎಂದು ಗಣೇಶ ಹಬ್ಬದ ನೆಪ ಇಟ್ಟುಕೊಂಡು ರಾಧಾ ತವರು ಮನೆ ಸೇರಿದ್ದಾಳೆ. ದೆಹಲಿಗೆ ಹೋದಾಗಿನಿಂದಲೂ, ರಮಣ್ ಒಮ್ಮೆ ಕೂಡ ಫೋನ್ ಮಾಡಿಲ್ಲ ಎಂಬ ಚಿಂತೆ ಬೇರೆ ಆಕೆಯನ್ನ ಕಾಡುತ್ತಿದೆ. ಅಷ್ಟಕ್ಕೂ, ಇದಕ್ಕೆ ಕಾರಣ ಏನು ಎಂಬ ಸತ್ಯ ರಾಧಾ ಅರಿವಿಗೆ ಬಂದಿದೆ. ಮುಂದೆ ಓದಿರಿ...
ರಮಣ್ ನಂಬರ್ ಬ್ಲಾಕ್ ಆಗಿದೆ
ಮೀಟಿಂಗ್ ಇರುವ ಕಾರಣಕ್ಕೆ ಇದ್ದಕ್ಕಿದ್ದ ಹಾಗೆ ರಮಣ್ ದೆಹಲಿಗೆ ಹೊರಟರು. ದೆಹಲಿಗೆ ಹೊರಡುವ ಮುನ್ನ ರಾಧಾಗೆ ಒಂದು ಮೆಸೇಜ್ ಕಳುಹಿಸಿದ್ದರು. ಆ ಮೆಸೇಜ್ ನ ರಾಧಾ ನೋಡುವ ಮುನ್ನ ದೀಪಿಕಾ ನೋಡಿಬಿಟ್ಟಳು. ಪರಿಣಾಮ, ರಾಧಾ ಫೋನ್ ನಲ್ಲಿ ರಮಣ್ ನಂಬರ್ ಬ್ಲಾಕ್ ಆಯ್ತು.
ರೀ ಡೈರೆಕ್ಟರೇ.. ಇವತ್ತಾದ್ರೂ 'ರಾಧಾ ರಮಣ'ನ ಬಾಯಿ ಬಿಡ್ಸಿ, ಒಂದು ಮಾಡ್ಸಿ.. ಪ್ಲೀಸ್.!
ರಾಧಾಗೆ ಈಗ ಗೊತ್ತಾಯಿತು.!
ದೆಹಲಿಗೆ ಹೋದ್ಮೇಲೆ, ರಮಣ್ ಫೋನ್ ಮಾಡಿಲ್ಲ ಎಂದು ಕೊರಗುತ್ತಿದ್ದ ರಾಧಾಗೆ ತಮ್ಮ ಫೋನ್ ನಲ್ಲಿ ರಮಣ್ ನಂಬರ್ ಬ್ಲಾಕ್ ಆಗಿರುವ ಸಂಗತಿ ಇದೀಗ ಗೊತ್ತಾಗಿದೆ. ಆದ್ರೆ, ರಮಣ್ ನಂಬರ್ ನ ಬ್ಲಾಕ್ ಮಾಡಿದ್ದು ಯಾರು ಅನ್ನೋದು ಆಕೆಗಿನ್ನೂ ತಿಳಿದು ಬಂದಿಲ್ಲ.
ಸಿತಾರ ದೇವಿ ಆಸೆ ನುಚ್ಚುನೂರು: ಅವನಿ ಹೆಸರಿಗೆ ಕೋಟ್ಯಾಂತರ ರೂಪಾಯಿ ಆಸ್ತಿ.!
ಯಾರೋ ಮಾಡಿರುವ ಪ್ಲಾನ್ ಇದು.!
ರಾಧಾ-ರಮಣ್ ನ ದೂರ ಮಾಡೋಕೆ ಯಾರೋ ಹೀಗೆಲ್ಲ ಮಾಡುತ್ತಿದ್ದಾರೆ ಎಂಬ ಅನುಮಾನ ರಾಧಾ ತಂದೆಗೆ ಬಂದಿದೆ. ಈಗಲಾದರೂ, ರಮಣ್ ಪ್ರೀತಿ ರಾಧಾಗೆ ಅರ್ಥ ಆದರೆ ಖುಷಿ ವೀಕ್ಷಕರಿಗೆ.!
ಮನೆಯಿಂದ ಮತ್ತೆ ಎಸ್ಕೇಪ್ ಆದ ರಾಣಿ: ಈಗ ಇನ್ನೇನು ಆಗುತ್ತೋ.?
ಮನೆಗೆ ವಾಪಸ್ ಬರ್ತಿದ್ದಾಳೆ ರಾಣಿ
ಊರು ಬಿಟ್ಟು ಓಡಿ ಹೋಗದೆ, ಮನೆಯಲ್ಲೇ ಇದ್ದು 'ಅವನಿ'ಯಾಗಿ ಸಿತಾರ ದೇವಿಯನ್ನ ಬಗ್ಗುಬಡಿಯಲು ರಾಣಿಗೆ ಮಾದ ಸೂಚನೆ ನೀಡಿದ್ದಾನೆ. ಮಾದನ ಅಣತಿಯಂತೆ ಮತ್ತೆ ರಾಣಿ ಮನೆಗೆ ಬರ್ತಾಳೆ. ರಾಣಿ ಹಾಗೆ ರಾಧಾ ಯಾವಾಗ ರಮಣ್ ಮನೆ ಕಡೆ ಮುಖ ಮಾಡ್ತಾರೋ.?