Don't Miss!
- News ನಾಲ್ಕು ಗೋಡೆಗಳ ಮಧ್ಯೆ ಆಗಿರುವ ಚರ್ಚೆ ಬಹಿರಂಗವಾಗಿ ಹೇಳೋದಕ್ಕೆ ಆಗಲ್ಲ: ಎಂ.ಪಿ.ರೇಣುಕಾಚಾರ್ಯ ಹೀಗೆ ಹೇಳಿದ್ಯಾಕೆ?
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Automobiles Hyundai Creta: ಜನಪ್ರಿಯ ಹ್ಯುಂಡೈ ಕ್ರೆಟಾ ಕಾರನ್ನು ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು? EMI ಏನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಫ್ಲಾಪ್ ಆಯ್ತು ಸಿತಾರ ದೇವಿ ಪ್ಲಾನ್: ಪೊಲೀಸ್ ಸ್ಟೇಷನ್ ನಲ್ಲಿ ರಮಣ್.!
Recommended Video
ಇಷ್ಟು ದಿನಗಳಲ್ಲಿ ಇದೇ ಮೊದಲ ಬಾರಿಗೆ ಸಿತಾರ ದೇವಿ ಪ್ಲಾನ್ ಫ್ಲಾಪ್ ಆಗಿದೆ. ರಾಣಿ ನಾಟಕ ಡಮ್ಮಿ ಆಗಿದೆ. 'ಮುಖ್ಯವಾದ ಕೆಲಸ'ದ ಕಡೆಗೆ ರಮಣ್ ಗಮನ ಕೊಟ್ಟಿದ್ದಾರೆ. ಅನ್ವಿತಾ ಹಾಗೂ ರಾಧಾ ಸ್ವಲ್ಪ ತಲೆ ಓಡಿಸಿದ್ದಾರೆ.
ಇಲ್ಲಿಯವರೆಗೂ ಆಮೆ ಗತಿಯಲ್ಲಿ ಸಾಗುತ್ತಾ ಬಂದ 'ರಾಧಾ ರಮಣ' ಧಾರಾವಾಹಿಗೆ ಇದೀಗ ದೊಡ್ಡ ತಿರುವು ಸಿಗುವ ಸಾಧ್ಯತೆ ಇದೆ. ರಮಣ್ ಗೆ ಸತ್ಯ ಗೊತ್ತಾಗಬೇಕು ಅಂದ್ರೆ ಮಾದ ಒಬ್ಬನೇ ಬಾಯಿ ಬಿಡಬೇಕು.
ಮಾದ ಸತ್ಯ ಹೇಳುವ ಮನಸ್ಸು ಮಾಡಿದ್ದಾನೆ. ''ರಮಣ್ ಮುಂದೆಯೇ ಸತ್ಯ ಹೇಳುವೆ'' ಎಂದು ಮಾದ ಪೊಲೀಸರಿಗೆ ತಿಳಿಸಿದ್ದಾನೆ. ಕಡೆಗೂ ಪೊಲೀಸ್ ಸ್ಟೇಷನ್ ಒಳಗೆ ರಮಣ್ ಹೋಗಿದ್ದಾರೆ.
ಈಗಲಾದರೂ ಸಿತಾರ ದೇವಿ ಬಣ್ಣ ಬಯಲಾಗಲಿ ಅನ್ನೋದು ವೀಕ್ಷಕರ ಕನವರಿಕೆ. ಆದ್ರೆ, ಅದಕ್ಕೆ ನಿರ್ದೇಶಕರು ತಥಾಸ್ತು ಎನ್ನಬೇಕಲ್ವಾ.? ಇಂದು ರಮಣ್ ಗೆ ಬೇರೆ ಯಾವ ಶಾಕ್ ಕಾದಿದೆಯೋ.?
ಅಂದು ತಲೆ ಓಡಿಸಿದ ಸಿತಾರ ದೇವಿ
''ಮಾದನಿಂದ ಆಗುತ್ತಿರುವ ತೊಂದರೆ ತಪ್ಪಬೇಕು. ಮಾದ ಸತ್ಯ ಬಾಯಿ ಬಿಡಬಾರದು. ಎಲ್ಲರ ದಿಕ್ಕು ತಪ್ಪಿಸಬೇಕು'' ಎಂದು ಪೊಲೀಸರಿಗೆ ಬೇರೆಯವರ ಹೆಸರಿನಲ್ಲಿ ಫೋನ್ ಮಾಡಿ ಆತನ ಬಗ್ಗೆ ಸಿತಾರ ದೇವಿ ಮಾಹಿತಿ ಕೊಟ್ಟಿದ್ದರು. ಹೇಳಿ ಕೇಳಿ ಮಾದ con artist ವಂಚಕ. ಹೀಗಾಗಿ, ಆತನನ್ನ ಬಂಧಿಸಲು ಪೊಲೀಸರು ವಿವಾಹ ವಾರ್ಷಿಕೋತ್ಸವದ ಪಾರ್ಟಿ ನಡೆಯುತ್ತಿದ್ದ ಜಾಗಕ್ಕೆ ಎಂಟ್ರಿಕೊಟ್ಟರು. ಮಾದ ಪೊಲೀಸರ ಅತಿಥಿಯಾದ.
ದಾರಿ ತಪ್ಪುತ್ತಿದೆ 'ರಾಧಾ ರಮಣ' ಕಥೆ: ವೀಕ್ಷಕರದ್ದು ಬರೀ ವ್ಯಥೆ.!
ಮಾದನ ವಿಚಾರಣೆ
ಮಾದನನ್ನ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ, ''ರಮಣ್ ಮುಂದೆ ಸತ್ಯ ಹೇಳುವೆ'' ಎಂದಿದ್ದಾನೆ. ಹೀಗಾಗಿ, ಪೊಲೀಸ್ ಸ್ಟೇಷನ್ ಗೆ ಕೂಡಲೆ ಬರುವಂತೆ ರಮಣ್ ಗೆ ಪೊಲೀಸರು ಸೂಚಿಸಿದ್ದಾರೆ.
ಅಂದುಕೊಂಡ್ಹಂಗೆ ಆಯ್ತು: ಬಾತ್ ರೂಮ್ ನಿಂದ 'ರಾಣಿ' ವಾಪಸ್ ಬಂದ್ಬಿಟ್ಳು.!
ಸಿತಾರ ದೇವಿಗೆ ಗೊತ್ತಾಯ್ತು.!
ಮಾದ ಸತ್ಯ ಹೇಳ್ತೀನಿ ಅಂತ ಹೇಳಿರೋದು ಹಾಗೂ ರಮಣ್ ಪೊಲೀಸ್ ಸ್ಟೇಷನ್ ಗೆ ಹೊರಟಿರುವ ವಿಷಯ ಸಿತಾರ ದೇವಿ ಹಾಗೂ ರಾಣಿಗೆ ಗೊತ್ತಾಯ್ತು. ಹೀಗಾಗಿ, ಮನೆಯಲ್ಲಿ ಹೊಸ ನಾಟಕ ನಡೆಯಿತು.
ಅನ್ವಿತಾ ಮುಂದೆ ಸಿಕ್ಕಿ ಬಿದ್ದ ರಾಣಿ: ಇಂದು ಅಲ್ಲೋಲ ಕಲ್ಲೋಲ ಗ್ಯಾರೆಂಟಿ.!
ನಾಟಕ ಮಾಡಿದ ರಾಣಿ
ಉಸಿರಾಟದ ಸಮಸ್ಯೆ ಎದುರಾದ ಹಾಗೆ ಅವನಿ (ರಾಣಿ) ನಟಿಸಿದಳು. ಕೂಡಲೆ ವಾಪಸ್ ಬರುವಂತೆ ರಮಣ್ ಗೆ ಸಿತಾರ ದೇವಿ ಕರೆ ಮಾಡಿದರು. ಅಲ್ಲಿಗೆ, ಬೀಸುವ ದೊಣ್ಣೆಯಿಂದ ಪಾರಾದೆ ಅಂತ ಸಿತಾರ ದೇವಿ ಖುಷಿ ಪಡುವಷ್ಟರಲ್ಲಿ ಮತ್ತೊಂದು ಶಾಕ್ ಕಾದಿತ್ತು.
ಪೊಲೀಸ್ ಸ್ಟೇಷನ್ ಗೆ ರಮಣ್ ಎಂಟ್ರಿ
ಪೊಲೀಸ್ ಸ್ಟೇಷನ್ ಗೆ ಸಿತಾರ ದೇವಿ ರೀಚ್ ಆಗುವ ಹೊತ್ತಿಗಾಗಲೇ ರಮಣ್ ಅಲ್ಲಿದ್ದರು. ಇನ್ನೇನು ಪೊಲೀಸ್ ಸ್ಟೇಷನ್ ಒಳಗೆ ರಮಣ್ ಹೋಗಬೇಕು ಅಲ್ಲಿಗೆ ಸಂಚಿಕೆ ಮುಗಿದಿದೆ. ರಮಣ್ ಮುಂದೆ ಮಾದ ಸತ್ಯ ಹೇಳುವಷ್ಟರಲ್ಲಿ ಇನ್ನೇನ್ ತಿರುವು ಕೊಡ್ತಾರೋ, ಆ ನಿರ್ದೇಶಕರು.!