Don't Miss!
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- News Darshan: ಡಿ.ಕೆ. ಸುರೇಶ್ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದಿನಕರ್ ಗೆ ಸಿಕ್ತು 'ಅವನಿ' ಸುಳಿವು: ಅಪಘಾತಕ್ಕೀಡಾದ ರಮಣ್.!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ' ಧಾರಾವಾಹಿಯಲ್ಲಿ ದೊಡ್ಡ ತಿರುವು ಸಿಗುವ ಸೂಚನೆ ಸಿಕ್ಕಿದೆ. ರಮಣ್ ಮನೆಗೆ ನಿಜವಾದ ಅವನಿ ಎಂಟ್ರಿಕೊಡುವ ಸಾಧ್ಯತೆ ಇದೆ.
ನಿಜವಾದ ಅವನಿ, ಸಿತಾರ ದೇವಿ ಗೃಹಬಂಧನದಲ್ಲಿರುವುದು ನಿಮಗೆಲ್ಲ ಗೊತ್ತೇ ಇದೆ. ಅವನಿಯನ್ನ ಸಿತಾರ ದೇವಿ ಬಚ್ಚಿಟ್ಟಿರುವ ಜಾಗವನ್ನ ತಿಳಿದುಕೊಳ್ಳುವಲ್ಲಿ ದಿನಕರ್ ಯಶಸ್ವಿ ಆಗಿದ್ದಾರೆ.
ಅತ್ತ ಅವನಿಯನ್ನ ಕರೆದುಕೊಂಡು ಬರಲು ದಿನಕರ್ ಹೊರಟಿದ್ದರೆ, ಇತ್ತ ಅವನಿ ವಿಚಾರವಾಗಿ ಯಾರೋ ರಮಣ್ ಗೆ ಫೋನ್ ಮಾಡಿದ್ದಾರೆ. ಫೋನ್ ನಲ್ಲಿ ಮಾತನಾಡುತ್ತ ಡ್ರೈವ್ ಮಾಡುತ್ತಿದ್ದ ಕಾರಣ, ರಮಣ್ ಪ್ರಯಾಣ ಮಾಡುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಮುಂದೆ ಓದಿರಿ...
ಅವನಿ ಇರುವ ಜಾಗ ಗೊತ್ತಾಯ್ತು
ಅವನಿ ಇರುವ ಜಾಗ ದಿನಕರ್ ಗೆ ಗೊತ್ತಾಗಿದೆ. ನಿಜವಾದ ಅವನಿಯನ್ನ ಸಿತಾರ ದೇವಿ ಕಪಿಮುಷ್ಟಿಯಿಂದ ಬಿಡಿಸಿಕೊಳ್ಳಲು ದಿನಕರ್ ಹರಸಾಹಸ ಪಡುತ್ತಿದ್ದಾರೆ. ಅವನಿಯನ್ನ ಗೃಹಬಂಧನದಿಂದ ಪಾರು ಮಾಡುವಲ್ಲಿ ದಿನಕರ್ ಯಶಸ್ವಿ ಆಗ್ತಾರಾ.?
'ರಾಧಾ ರಮಣ'ನ ಮುಂದೆ ರಾಣಿ-ಮಾದ ಸಿಕ್ಕಿಬೀಳೋದೊಂದೇ ಬಾಕಿ.!
ಸಿತಾರ ದೇವಿ ತಲೆಯಲ್ಲಿ ಹೊಸ ಪ್ಲಾನ್
ಮಾದನನ್ನು ಕಿಡ್ನ್ಯಾಪ್ ಮಾಡಲು ಹೋಗಿ ಸಿತಾರ ದೇವಿ, ರಮಣ್ ಕೈಯಲ್ಲಿ ಸಿಕ್ಕಿಬಿದ್ದಿದ್ದರು. ಮನೆಯಲ್ಲಿ ಅವಮಾನ ಎದುರಿಸಿದ ಮೇಲೆ ಮಾನಸಿಕವಾಗಿ ಕುಗ್ಗಿದ ಸಿತಾರ ದೇವಿ ಇದೀಗ ಬ್ಯಾಕ್ ಇನ್ ಆಕ್ಷನ್. ಸಿತಾರ ದೇವಿ ತಲೆಯಲ್ಲೀಗ ಹೊಸ ಪ್ಲಾನ್ ಹುಟ್ಟಿದೆ. ರಾಣಿ ಕಥೆಯನ್ನ ಫಿನಿಶ್ ಮಾಡಲು ಸಿತಾರ ದೇವಿ ಸ್ಕೆಚ್ ಹಾಕಿದ್ದಾರೆ.
ಸಿತಾರ ದೇವಿ, ದೀಪಿಕಾ ಜುಟ್ಟು ರಾಣಿ ಕೈಯಲ್ಲಿ: ಇನ್ಮೇಲಿದೆ ಹಬ್ಬ.!
ರಾಧಾಗೆ ಸಂಭ್ರಮ
''ನನ್ನ ಹಾಗೂ ರಮಣ್ ಮಧ್ಯೆ ಇರುವ ಎಲ್ಲಾ ಕನ್ ಫ್ಯೂಶನ್ ಗಳು ಕ್ಲಿಯರ್ ಆಗಬೇಕು. ರಮಣ್ ಮುಂದೆ ನನ್ನ ಪ್ರೀತಿಯನ್ನ ಮನಸ್ಸು ಬಿಚ್ಚಿ ಹೇಳಿಕೊಳ್ಳಬೇಕು'' ಅಂತ ರಾಧಾ ಸಕಲ ತಯಾರಿ ಮಾಡಿಕೊಂಡಿದ್ದಾರೆ. ಹೀಗಿರುವಾಗಲೇ ಅವರಿಗೆ ಆಘಾತದ ಸುದ್ದಿ ಸಿಕ್ಕಿದೆ.
ಸಿಕ್ಕಿಬಿದ್ದ ಸಿತಾರ ದೇವಿ: ಸಿಡಿಮಿಡಿಗೊಂಡ ರಮಣ್.!
ಅಪಘಾತಕ್ಕೀಡಾದ ರಮಣ್
ರಮಣ್ ಪ್ರಯಾಣ ಮಾಡುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಅತ್ತ ರಮಣ್ ಗಾಗಿ ಕಾಯುತ್ತ ಸರ್ ಪ್ರೈಸ್ ಪ್ಲಾನ್ ಮಾಡಿದ್ದ ರಾಧಾಗೆ ಶಾಕಿಂಗ್ ನ್ಯೂಸ್ ಸಿಕ್ಕಿದೆ. ರಮಣ್ ಪ್ರಾಣಕ್ಕೆ ಏನಾದರೂ ಅಪಾಯ ಆಗಿದ್ಯಾ.? ಧಾರಾವಾಹಿಗೆ ಇನ್ಯಾವ ತಿರುವು ಸಿಗುತ್ತೋ, ನೋಡಬೇಕು.