Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ರಾಧಾ ರಮಣ' ಧಾರಾವಾಹಿಯಲ್ಲಿ ರಾಣಿ ಅಧ್ಯಾಯ ಮುಗೀತು.?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ' ಧಾರಾವಾಹಿ ಕುತೂಹಲಕರ ಘಟ್ಟ ತಲುಪಿದೆ.
ಇಷ್ಟು ದಿನ 'ಅವನಿ' ಎಂಬ ಹೆಸರಿನಲ್ಲಿ ನಾಟಕ ಆಡುತ್ತಾ, ರಮಣ್ ಮನೆಯಲ್ಲಿ ಜಾಗ ಪಡೆದಿದ್ದ ರಾಣಿ ಕಥೆ ಇಲ್ಲಿಗೆ ಮುಗಿದ ಹಾಗೆ ಕಾಣುತ್ತಿದೆ. ಸಿತಾರ ದೇವಿ ಹೇಳಿದ ಹಾಗೆ ಕೇಳಿಕೊಂಡು ಇದ್ದಿದ್ದರೆ, ರಾಣಿ ಪ್ರಾಣಕ್ಕೆ ಯಾವುದೇ ತೊಂದರೆ ಆಗುತ್ತಿರಲಿಲ್ಲ.
ಆದ್ರೆ, ಮಾದನ ಮಾತನ್ನು ಕಟ್ಟಿಕೊಂಡು ಸಿತಾರ ದೇವಿ ಎದುರು ತೊಡೆ ತಟ್ಟಿದ ರಾಣಿ ಜೀವಕ್ಕೆ ಇದೀಗ ಕಂಟಕ ಎದುರಾಗಿದೆ. ರಾಣಿ ಮತ್ತು ಅವನಿ... ಈ ಎರಡು ಕ್ಯಾರೆಕ್ಟರ್ ಗಳನ್ನ ಒಟ್ಟಿಗೆ ಮುಗಿಸಲು ಸಿತಾರ ದೇವಿ ಸ್ಕೆಚ್ ಹಾಕಿದ್ದರು. ಸಿತಾರ ದೇವಿ ಪ್ಲಾನ್ ಪ್ರಕಾರ ಸದ್ಯ ಎಲ್ಲವೂ ನೆರವೇರಿದೆ. ಮುಂದೆ ಧಾರಾವಾಹಿಗೆ ಇನ್ಯಾವ ತಿರುವು ಸಿಗುತ್ತದೋ..?!
ಪ್ಲಾನ್ ಒಂದು - ರಾಣಿ ಕಿಡ್ನ್ಯಾಪ್
ಮನೆಯಲ್ಲಿ ತಾನೇ ಪವರ್ ಫುಲ್ ಎಂದು ಬೀಗುತ್ತಿದ್ದ ರಾಣಿಯನ್ನ ಮಟ್ಟ ಹಾಕಲು ಸಿತಾರ ದೇವಿ ಸಂಚು ರೂಪಿಸಿದ್ದರು. ಸಿತಾರ ದೇವಿ ಪ್ಲಾನ್ ಪ್ರಕಾರ, ರಾಣಿ (ಅವನಿ), ಮಾನಸಿ, ಸರಸ್ವತಿ, ದಿನಕರ್ ಮತ್ತು ಹೇಮಾ ಪಿಕ್ ನಿಕ್ ಗೆ ಹೊರಟರು. ಅಲ್ಲಿ ಪಾನಿಪೂರಿ ತಿನ್ನಲು ಮುಂದಾದ ರಾಣಿಯನ್ನ ಕಿಡ್ನ್ಯಾಪ್ ಮಾಡಲಾಯಿತು.
ಸಿಕ್ಕಿಬಿದ್ದ ಸಿತಾರ ದೇವಿ: ಸಿಡಿಮಿಡಿಗೊಂಡ ರಮಣ್.!
ಪ್ಲಾನ್ ಎರಡು - ರಾಣಿ ಕೊಲೆ
ಕಿಡ್ನ್ಯಾಪ್ ಆದ ರಾಣಿಯನ್ನ ಮೂಟೆಯೊಳಗೆ ಕಟ್ಟಿ, ನದಿಗೆ ಹಾಕಲಾಗಿದೆ. ರಾಣಿ ಕಿಡ್ನ್ಯಾಪ್ ಮತ್ತು ಕೊಲೆಯ ಕ್ಷಣ ಕ್ಷಣದ ಮಾಹಿತಿ ಪಡೆದ ಸಿತಾರ ದೇವಿ ಸಂಭ್ರಮಿಸಿದ್ದಾರೆ. ''ಇಲ್ಲಿಗೆ ಅವನಿ ಮತ್ತು ರಾಣಿ ಕಥೆ ಮುಗಿದ ಹಾಗೆ. ಇನ್ನೂ ನನಗೆ ಯಾವುದೇ ಭಯ ಇಲ್ಲ'' ಅಂತ ಗೆಲುವಿನ ನಗೆ ಬೀರಿದ್ದಾರೆ ಸಿತಾರ ದೇವಿ.
ಅಂತೂ ಇಂತೂ ರಾಧಾ ರಮಣ್ ಒಂದಾದರು: ಇನ್ಮೇಲಿದೆ ಹೊಸ ತಿರುವು.!
ಅವನಿಯನ್ನ ಹುಡುಕುವಲ್ಲಿ ಮನೆಯವರು ತಲ್ಲೀನ
ಅತ್ತ ಅವನಿ ಎಲ್ಲೂ ಕಾಣುತ್ತಿಲ್ಲ ಅಂತ ಮಾನಸಿ, ದಿನಕರ್, ಹೇಮ ಮತ್ತು ಸರಸ್ವತಿ ಹುಡುಕಾಟದಲ್ಲಿ ತೊಡಗಿದ್ದಾರೆ. ಮಗಳು ಕಾಣೆಯಾಗಿದ್ದಾಳೆ ಅಂತ ಸರಸ್ವತಿ ಕಣ್ಣೀರು ಸುರಿಸಿದ್ದಾರೆ.
ದೀಪಿಕಾ ಪ್ಲಾನ್ ಫ್ಲಾಪ್ ಆಯ್ತು: 'ರಾಧಾ ರಮಣ' ಸಂಬಂಧ ಗಟ್ಟಿ ಆಯ್ತು.!
ರಾಧಾ-ರಮಣ್ ಗೆ ವಿಷಯ ಗೊತ್ತಿಲ್ಲ.!
ಎಲ್ಲರೂ ಪಿಕ್ ನಿಕ್ ಗೆ ಹೋಗಿದ್ದರೆ, ರಾಧಾ-ರಮಣ್ ಮಾತ್ರ ಮನೆಯಲ್ಲಿ ರೋಮ್ಯಾಂಟಿಕ್ ಮೂಡ್ ನಲ್ಲಿದ್ದಾರೆ. ಅವನಿ (ರಾಣಿ) ಕಾಣೆಯಾಗಿರುವ ವಿಷಯ ರಾಧಾ-ರಮಣ್ ಗೆ ಇನ್ನೂ ಗೊತ್ತಾಗಿಲ್ಲ. ಗೊತ್ತಾದರೆ ಏನಾಗುತ್ತೋ.? ರಾಣಿ ಕೊಲೆ ಕೇಸ್ ನಲ್ಲಾದರೂ ಸಿತಾರ ದೇವಿ ಸಿಕ್ಕಿ ಬೀಳ್ತಾರಾ, ನೋಡಬೇಕು.