Don't Miss!
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- News ಬೆಂಗಳೂರಿನಲ್ಲಿ ಮೋದಿ ಮತಬೇಟೆ; ರಾಜ್ಯಕ್ಕೆ ಪ್ರಧಾನಿ ಮೋದಿಯ ಕೊಡುಗೆ ಏನಿದೆ?: ಡಾ.ಜಿ ಪರಮೇಶ್ವರ್
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮನೆಯಿಂದ ಮತ್ತೆ ಎಸ್ಕೇಪ್ ಆದ ರಾಣಿ: ಈಗ ಇನ್ನೇನು ಆಗುತ್ತೋ.?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ' ಧಾರಾವಾಹಿಯಲ್ಲಿ ಅದಾಗಲೇ ಒಂದು ಬಾರಿ ಗಂಟು-ಮೂಟೆ ಕಟ್ಟಿಕೊಂಡು ಮನೆಯಿಂದ ಆಚೆ ಕಾಲಿಟ್ಟು, ಕೊನೆಗೆ ಸಿಕ್ಕಿಬಿದ್ದು 'ತಪ್ಪಾಯ್ತು' ಎಂದು ಸಿತಾರ ದೇವಿಯ ಕಾಲಿಗೆ ಬಿದ್ದಿದ್ದಳು ರಾಣಿ.
''ಇನ್ನೊಮ್ಮೆ ಹೀಗೆ ಮಾಡಲ್ಲ'' ಅಂತ ಸಿತಾರ ದೇವಿ ಮುಂದೆ ರಾಣಿ ಗೋಗರೆದಿದ್ದಳು. ಕೊನೆಗೆ ರಾಣಿಯನ್ನ ಮನೆಗೆ ವಾಪಸ್ ಕರೆದುಕೊಂಡು ಬಂದಳು ಸಿತಾರ ದೇವಿ.
ಹಾಗೂ ಹೀಗೂ ಮಾದನನ್ನ ಸಿತಾರ ದೇವಿ ಕಪಿಮುಷ್ಟಿಯಿಂದ ಬಿಡಿಸುವಲ್ಲಿ ರಾಣಿ ಯಶಸ್ವಿ ಆದಳು. ಈಗ ಮತ್ತೊಂದು ಬಾರಿಗೆ ಮನೆಯಿಂದ ರಾಣಿ ಎಸ್ಕೇಪ್ ಆಗಿದ್ದಾಳೆ.
ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ, ಬಟ್ಟೆ ಪ್ಯಾಕ್ ಮಾಡಿಕೊಳ್ಳದೇ, ಮುಖ್ಯವಾದ ವಸ್ತುಗಳನ್ನ ಮಾತ್ರ ತೆಗೆದುಕೊಂಡು ರಾಣಿ ಹೊರಬಂದಿದ್ದಾಳೆ. ಈಗ ಇನ್ನೇನು ತಿರುವು ಕಾದಿದೆಯೋ.?
ಗಣೇಶ ಹಬ್ಬದ ಸಂಭ್ರಮ
'ರಾಧಾ ರಮಣ' ಧಾರಾವಾಹಿಯಲ್ಲಿ ತಡವಾಗಿ ಗಣೇಶ ಹಬ್ಬದ ಸಂಭ್ರಮ ಶುರುವಾಗಿದೆ. ಹಬ್ಬದ ಪ್ರಯುಕ್ತ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬರಲು ಎಲ್ಲರೂ ಹೊರಟಿದ್ದಾರೆ. ಸರಸ್ವತಿ ಎಷ್ಟೇ ಕರೆದರೂ, ''ಪೂಜೆಗೆ ಬರಲ್ಲ'' ಅಂತ ರಾಣಿ (ಅವನಿ) ಹಠ ಹಿಡಿದಳು.
ರಾಣಿ ಪ್ಲಾನ್ ನಡೆಯಲಿಲ್ಲ: ವಾಪಸ್ ಮನೆಗೆ ಬಂದ್ಬಿಟ್ರಲ್ಲ.!
ಮನೆಯಲ್ಲಿ ದೀಪಿಕಾ ಬಿಟ್ಟರೆ ಇನ್ಯಾರೂ ಇಲ್ಲ.!
ಎಲ್ಲರೂ ದೇವಸ್ಥಾನಕ್ಕೆ ಹೊರಟಿರುವ ಕಾರಣ, ಮನೆಯಲ್ಲಿ ದೀಪಿಕಾ ಬಿಟ್ಟರೆ ಇನ್ಯಾರೂ ಇಲ್ಲ ಎಂಬ ಸತ್ಯ ರಾಣಿಗೆ ಗೊತ್ತಾಯ್ತು. ಎಸ್ಕೇಪ್ ಆಗಲು ಇದೇ ಸರಿಯಾದ ಸಮಯ ಅಂತ ರಾಣಿ ಹೊರಟು ನಿಂತಳು.
ಕಣ್ಣಿಗೆ ಮಣ್ಣೆರಚಿ ಓಡಿ ಬಂದರೂ ಸಿತಾರ ದೇವಿಯಿಂದ ರಾಣಿ ತಪ್ಪಿಸಿಕೊಳ್ಳಲು ಆಗಲಿಲ್ಲ.!
ಕಳುಹಿಸಿ ಕೊಟ್ಟ ದೀಪಿಕಾ.!
ರಾಣಿಯನ್ನ ಮನೆಯಿಂದ ಆಚೆ ಹಾಕಬೇಕು ಅಂತ ದೀಪಿಕಾ ಕಾಯ್ತಿದ್ಲು. ಈಗ ರಾಣಿಯೇ ಮನೆಯಿಂದ ಹೊರಟಿರುವ ಕಾರಣ, ಆಕೆಯನ್ನ ತಡೆಯಲು ದೀಪಿಕಾ ಹೋಗಲಿಲ್ಲ. ಸಿತಾರ ದೇವಿಗೂ ವಿಷಯ ತಿಳಿಸದೆ, ರಾಣಿಯನ್ನ ದೀಪಿಕಾ ಕಳುಹಿಸಿಕೊಟ್ಟಳು.
ರೀ ಡೈರೆಕ್ಟರೇ.. ಇವತ್ತಾದ್ರೂ 'ರಾಧಾ ರಮಣ'ನ ಬಾಯಿ ಬಿಡ್ಸಿ, ಒಂದು ಮಾಡ್ಸಿ.. ಪ್ಲೀಸ್.!
ಮುಂದೇನಾಗುತ್ತೆ.?
ರಾಣಿ ಮತ್ತೆ ಎಸ್ಕೇಪ್ ಆಗಿ ಬಂದಿರುವುದನ್ನು ನೋಡಿ ಮಾದನಿಗೆ ಶಾಕ್ ಆಗಿದೆ. ಇತ್ತ ತವರು ಮನೆಗೆ ರಾಧಾ ಹೋಗಿದ್ದಾಗಿದೆ. ರಮಣ್ ಗಾಗಿ ರಾಧಾ ಕಾಯುತ್ತಿದ್ದಾಳೆ. ಮುಂದೇನಾಗುತ್ತೆ ಅನ್ನೋದೇ ಸದ್ಯದ ಕುತೂಹಲ.