Don't Miss!
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- News Mukhtar Ansari: ಗ್ಯಾಂಗ್ಸ್ಟರ್-ರಾಜಕಾರಣಿ ಮುಖ್ತಾರ್ ಅನ್ಸಾರಿ ಸಾವು
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮನೆಯಿಂದ ಮತ್ತೆ ಎಸ್ಕೇಪ್ ಆದ ರಾಣಿ: ಈಗ ಇನ್ನೇನು ಆಗುತ್ತೋ.?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ' ಧಾರಾವಾಹಿಯಲ್ಲಿ ಅದಾಗಲೇ ಒಂದು ಬಾರಿ ಗಂಟು-ಮೂಟೆ ಕಟ್ಟಿಕೊಂಡು ಮನೆಯಿಂದ ಆಚೆ ಕಾಲಿಟ್ಟು, ಕೊನೆಗೆ ಸಿಕ್ಕಿಬಿದ್ದು 'ತಪ್ಪಾಯ್ತು' ಎಂದು ಸಿತಾರ ದೇವಿಯ ಕಾಲಿಗೆ ಬಿದ್ದಿದ್ದಳು ರಾಣಿ.
''ಇನ್ನೊಮ್ಮೆ ಹೀಗೆ ಮಾಡಲ್ಲ'' ಅಂತ ಸಿತಾರ ದೇವಿ ಮುಂದೆ ರಾಣಿ ಗೋಗರೆದಿದ್ದಳು. ಕೊನೆಗೆ ರಾಣಿಯನ್ನ ಮನೆಗೆ ವಾಪಸ್ ಕರೆದುಕೊಂಡು ಬಂದಳು ಸಿತಾರ ದೇವಿ.
ಹಾಗೂ ಹೀಗೂ ಮಾದನನ್ನ ಸಿತಾರ ದೇವಿ ಕಪಿಮುಷ್ಟಿಯಿಂದ ಬಿಡಿಸುವಲ್ಲಿ ರಾಣಿ ಯಶಸ್ವಿ ಆದಳು. ಈಗ ಮತ್ತೊಂದು ಬಾರಿಗೆ ಮನೆಯಿಂದ ರಾಣಿ ಎಸ್ಕೇಪ್ ಆಗಿದ್ದಾಳೆ.
ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ, ಬಟ್ಟೆ ಪ್ಯಾಕ್ ಮಾಡಿಕೊಳ್ಳದೇ, ಮುಖ್ಯವಾದ ವಸ್ತುಗಳನ್ನ ಮಾತ್ರ ತೆಗೆದುಕೊಂಡು ರಾಣಿ ಹೊರಬಂದಿದ್ದಾಳೆ. ಈಗ ಇನ್ನೇನು ತಿರುವು ಕಾದಿದೆಯೋ.?
ಗಣೇಶ ಹಬ್ಬದ ಸಂಭ್ರಮ
'ರಾಧಾ ರಮಣ' ಧಾರಾವಾಹಿಯಲ್ಲಿ ತಡವಾಗಿ ಗಣೇಶ ಹಬ್ಬದ ಸಂಭ್ರಮ ಶುರುವಾಗಿದೆ. ಹಬ್ಬದ ಪ್ರಯುಕ್ತ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬರಲು ಎಲ್ಲರೂ ಹೊರಟಿದ್ದಾರೆ. ಸರಸ್ವತಿ ಎಷ್ಟೇ ಕರೆದರೂ, ''ಪೂಜೆಗೆ ಬರಲ್ಲ'' ಅಂತ ರಾಣಿ (ಅವನಿ) ಹಠ ಹಿಡಿದಳು.
ರಾಣಿ ಪ್ಲಾನ್ ನಡೆಯಲಿಲ್ಲ: ವಾಪಸ್ ಮನೆಗೆ ಬಂದ್ಬಿಟ್ರಲ್ಲ.!
ಮನೆಯಲ್ಲಿ ದೀಪಿಕಾ ಬಿಟ್ಟರೆ ಇನ್ಯಾರೂ ಇಲ್ಲ.!
ಎಲ್ಲರೂ ದೇವಸ್ಥಾನಕ್ಕೆ ಹೊರಟಿರುವ ಕಾರಣ, ಮನೆಯಲ್ಲಿ ದೀಪಿಕಾ ಬಿಟ್ಟರೆ ಇನ್ಯಾರೂ ಇಲ್ಲ ಎಂಬ ಸತ್ಯ ರಾಣಿಗೆ ಗೊತ್ತಾಯ್ತು. ಎಸ್ಕೇಪ್ ಆಗಲು ಇದೇ ಸರಿಯಾದ ಸಮಯ ಅಂತ ರಾಣಿ ಹೊರಟು ನಿಂತಳು.
ಕಣ್ಣಿಗೆ ಮಣ್ಣೆರಚಿ ಓಡಿ ಬಂದರೂ ಸಿತಾರ ದೇವಿಯಿಂದ ರಾಣಿ ತಪ್ಪಿಸಿಕೊಳ್ಳಲು ಆಗಲಿಲ್ಲ.!
ಕಳುಹಿಸಿ ಕೊಟ್ಟ ದೀಪಿಕಾ.!
ರಾಣಿಯನ್ನ ಮನೆಯಿಂದ ಆಚೆ ಹಾಕಬೇಕು ಅಂತ ದೀಪಿಕಾ ಕಾಯ್ತಿದ್ಲು. ಈಗ ರಾಣಿಯೇ ಮನೆಯಿಂದ ಹೊರಟಿರುವ ಕಾರಣ, ಆಕೆಯನ್ನ ತಡೆಯಲು ದೀಪಿಕಾ ಹೋಗಲಿಲ್ಲ. ಸಿತಾರ ದೇವಿಗೂ ವಿಷಯ ತಿಳಿಸದೆ, ರಾಣಿಯನ್ನ ದೀಪಿಕಾ ಕಳುಹಿಸಿಕೊಟ್ಟಳು.
ರೀ ಡೈರೆಕ್ಟರೇ.. ಇವತ್ತಾದ್ರೂ 'ರಾಧಾ ರಮಣ'ನ ಬಾಯಿ ಬಿಡ್ಸಿ, ಒಂದು ಮಾಡ್ಸಿ.. ಪ್ಲೀಸ್.!
ಮುಂದೇನಾಗುತ್ತೆ.?
ರಾಣಿ ಮತ್ತೆ ಎಸ್ಕೇಪ್ ಆಗಿ ಬಂದಿರುವುದನ್ನು ನೋಡಿ ಮಾದನಿಗೆ ಶಾಕ್ ಆಗಿದೆ. ಇತ್ತ ತವರು ಮನೆಗೆ ರಾಧಾ ಹೋಗಿದ್ದಾಗಿದೆ. ರಮಣ್ ಗಾಗಿ ರಾಧಾ ಕಾಯುತ್ತಿದ್ದಾಳೆ. ಮುಂದೇನಾಗುತ್ತೆ ಅನ್ನೋದೇ ಸದ್ಯದ ಕುತೂಹಲ.