Don't Miss!
- News ಹಿರಿಯೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಆಟೋ ಪಲ್ಟಿ: NHAIನ ಆ ಒಂದು ಯಡವಟ್ಟಿನ ವಿರುದ್ಧ ಭುಗಿಲೆದ್ದ ಆಕ್ರೋಶ
- Technology Poco: ಹೊಸದಾಗಿ ಲಾಂಚ್ ಆದ ಪೊಕೊ X6 ಪ್ರೊ 5G ಸ್ಮಾರ್ಟ್ಫೋನ್ಗೆ 17% ರಿಯಾಯಿತಿ!8 GB RAM
- Finance ಜಗತ್ತಿಗೆ ಭಾರತವೇ ಬಾಸ್, ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದ್ದು ಏನು?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಂಟು-ಮೂಟೆ ಕಟ್ಟಿಕೊಂಡು ಮನೆಯಿಂದ ಆಚೆ ಕಾಲಿಟ್ಟ 'ಕಳ್ಳಿ' ರಾಣಿ.!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ' ಧಾರಾವಾಹಿಯಲ್ಲಿ ಕಡೆಗೂ ಒಂದು ದೊಡ್ಡ ತಿರುವು ಸಿಗುವ ಸೂಚನೆ ಸಿಕ್ಕಿದೆ. ಇಷ್ಟು ದಿನ ರಮಣ್ ಮನೆಯಲ್ಲಿ ಠಿಕಾಣಿ ಹೂಡಿದ್ದ 'ಕಳ್ಳಿ' ರಾಣಿ ಇದೀಗ ಮನೆಯಿಂದ ಆಚೆ ಕಾಲಿಟ್ಟಿದ್ದಾಳೆ.
ಒಡವೆ, ವಸ್ತ್ರ, ಕ್ರೆಡಿಟ್ ಕಾರ್ಡ್ ಹಾಗೂ ಚೆಕ್ ಬುಕ್ ಅನ್ನೆಲ್ಲಾ ಪ್ಯಾಕ್ ಮಾಡಿಕೊಂಡು ರಾಣಿ ಹೊರಟ್ಟಿದ್ದಾಳೆ. ಸಿತಾರ ದೇವಿ ಕೊಡುವ ಜುಜುಬಿ ಕಾಸಿನ ಬದಲು ರಮಣ್ ಕೊಟ್ಟಿರುವ ಕ್ರೆಡಿಟ್ ಕಾರ್ಡ್ ಹಾಗೂ ಕೋಟ್ಯಾಂತರ ರೂಪಾಯಿ ಆಸ್ತಿ ಪತ್ರವನ್ನ ಇಟ್ಟುಕೊಂಡು 'ಕಳ್ಳಿ' ರಾಣಿ ಎಸ್ಕೇಪ್ ಆಗಲು ಪ್ಲಾನ್ ಮಾಡಿದ್ದಾಳೆ.
''ಸಿತಾರ ದೇವಿಯ ಸಹವಾಸ ಸಾಕು, ಈ ನಾಟಕ ಸಾಕು'' ಅಂತ ರಾಣಿಗೆ ಅನಿಸಿದೆ. ಹೀಗಾಗಿ, ಇದ್ದಕ್ಕಿದ್ದಂತೆ ಪರಾರಿ ಆಗಲು ರಾಣಿ ನಿರ್ಧಾರ ಮಾಡಿದ್ದಾಳೆ. ರಾಧಾ, ಅನ್ವಿತಾ, ಸಿತಾರ ದೇವಿ ಕಣ್ತಪ್ಪಿಸಿ ಕಾಲ್ಕೀಳಲು ರಾಣಿ ಸಕಲ ಸಿದ್ಧತೆ ಮಾಡಿಕೊಂಡಿದ್ದಾಳೆ.
ಈ ಬಾರಿ ರಾಣಿಯ ಪ್ಲಾನ್ ಸಕ್ಸಸ್ ಆಗುತ್ತಾ.? ರಾಣಿ ಎಸ್ಕೇಪ್ ಆಗುವವರೆಗೂ ಸಿತಾರ ದೇವಿ ಸುಮ್ಮನೆ ಇರ್ತಾರಾ.? ಮುಂದೇನಾಗಬಹುದು.?
ಸಿತಾರ ದೇವಿ ಕಪಿಮುಷ್ಟಿಯಿಂದ ಹೊರಗೆ ಬರಬೇಕು.!
''ಸಿತಾರ ದೇವಿ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡ್ತಾರೆ. ನನಗೆ ದುಡ್ಡು ಕೊಡದೆ ಪ್ರಾಣ ತೆಗೆಯುವುದಕ್ಕೂ ಹೇಸಲ್ಲ'' ಎಂಬ ಸತ್ಯ ರಾಣಿಗೆ ಅರಿವಾಗಿದೆ. ಹೀಗಾಗಿ, ಸಿತಾರ ದೇವಿ ಕಪಿಮುಷ್ಟಿಯಿಂದ ಹೊರಗೆ ಬರಲು ರಾಣಿ ನಿರ್ಧಾರ ಮಾಡಿದ್ದಾಳೆ.
ದಾರಿ ತಪ್ಪುತ್ತಿದೆ 'ರಾಧಾ ರಮಣ' ಕಥೆ: ವೀಕ್ಷಕರದ್ದು ಬರೀ ವ್ಯಥೆ.!
ಸಿತಾರ ಬೆದರಿಕೆಗೆ ಬಗ್ಗಲಿಲ್ಲ.!
ಸಿತಾರ ದೇವಿ ಹಾಕಿದ ಬೆದರಿಕೆಗೆ ರಾಣಿ ಬಗ್ಗಲಿಲ್ಲ. ಸಿತಾರ ದೇವಿ ತಂದಿದ್ದ ಆಸ್ತಿ ಪತ್ರಕ್ಕೆ ರಾಣಿ ಸಹಿ ಹಾಕಲಿಲ್ಲ. ಸಿತಾರ ದೇವಿ ಕೊಡುವ ದುಡ್ಡಿನ ಬದಲು, ರಮಣ್ ಕೊಟ್ಟಿರುವ ಆಸ್ತಿ ಪತ್ರ ಹಾಗೂ ಕ್ರೆಡಿಟ್ ಕಾರ್ಡ್ ನ ತಗೊಂಡು ರಾಣಿ ಪರಾರಿ ಆಗಲು ಸ್ಕೆಚ್ ಹಾಕಿದ್ದಾಳೆ.
ಉಲ್ಟಾ ಹೊಡೆದ ರಾಣಿ: ಸಿತಾರ ದೇವಿಗೆ ಹೀಗೇ ಆಗಬೇಕು.!
ಮನೆಯಲ್ಲಿ ರಮಣ್ ಇಲ್ಲ
ಮೀಟಿಂಗ್ ಇರುವ ಕಾರಣಕ್ಕೆ ರಮಣ್ ದೆಹಲಿಗೆ ತೆರಳಿದ್ದಾರೆ. ರಮಣ್ ಮನೆಯಲ್ಲಿ ಇಲ್ಲದಿರುವ ಕಾರಣ, ಎಸ್ಕೇಪ್ ಆಗಲು ಇದೇ ಸರಿಯಾದ ಸಮಯ ಅಂತ ರಾಣಿ ಪ್ಲಾನ್ ಮಾಡಿದ್ದಾಳೆ. ಹಾಗೂ ಹೀಗೂ ಮನೆಯಿಂದ ರಾಣಿ ಹೊರಗೆ ಬಂದಿದ್ದಾಳೆ.
ಸಿತಾರ ದೇವಿ ಆಸೆ ನುಚ್ಚುನೂರು: ಅವನಿ ಹೆಸರಿಗೆ ಕೋಟ್ಯಾಂತರ ರೂಪಾಯಿ ಆಸ್ತಿ.!
ದೀಪಿಕಾ ಕಣ್ಣು ರಾಧಾ ಮೇಲೆ.!
ಇಷ್ಟು ದಿನ ರಾಣಿಯನ್ನ ಮನೆಯಿಂದ ಆಚೆ ಹಾಕಬೇಕು ಅಂತಿದ್ದ ದೀಪಿಕಾ ಇದೀಗ ರಾಧಾ ವಿರುದ್ಧ ತಿರುಗಿ ಬಿದ್ದಿದ್ದಾಳೆ. ರಾಧಾ-ರಮಣ್ ದಂಪತಿಯನ್ನ ದೂರ ಮಾಡಲು ದೀಪಿಕಾ ಪ್ರಯತ್ನ ಪಡುತ್ತಿದ್ದಾಳೆ.
ಸಿತಾರ ದೇವಿ ತಲೆಯಲ್ಲೂ ಪ್ಲಾನ್
ರಮಣ್ ವಾಪಸ್ ಬರುವಷ್ಟರಲ್ಲಿ ರಾಣಿಗೆ ಒಂದು ಗತಿ ಕಾಣಿಸಬೇಕು ಎಂಬ ಪ್ಲಾನ್ ಸಿತಾರ ದೇವಿ ತಲೆಯಲ್ಲೂ ಇದೆ. ಸಿತಾರ ದೇವಿ ಮಾಡಿರುವ ಪ್ಲಾನ್ ಏನು.? ರಾಣಿ ಎಸ್ಕೇಪ್ ಆಗುವಲ್ಲಿ ಯಶಸ್ವಿ ಆಗ್ತಾಳಾ.? ಕಾದು ನೋಡಬೇಕು.