Don't Miss!
- News ಹಾಸನದ ಬೀದಿಗಳಲ್ಲಿ ಚೆಲ್ಲಾಡುತ್ತಿರುವ ಪೆನ್ಡ್ರೈವ್ ಬಗ್ಗೆ ಹೇಳಿ? ಹೆಚ್ಡಿ ಕುಮಾರಸ್ವಾಮಿಗೆ ಕಾಂಗ್ರೆಸ್ ಪ್ರಶ್ನೆ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿತಾರ ದೇವಿ ಕುತಂತ್ರ: ದಿನಕರ್ ಗೆ ಕಾದಿದೆ ಗಂಡಾಂತರ.!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ' ಧಾರಾವಾಹಿಯ ಕಥಾನಕದಲ್ಲಿ ದಿನಕರ್ ಒಂಥರಾ ಹಲ್ಲು ಕಿತ್ತ ಹಾವಿನಂತೆ. ಆಗಾಗ ಸಿತಾರ ದೇವಿ ವಿರುದ್ಧ ಬುಸುಗುಡುವ ದಿನಕರ್, ಕಚ್ಚಲು ಮಾತ್ರ ಯಾವತ್ತೂ ಮನಸ್ಸು ಮಾಡಿಲ್ಲ. ಇದೇ ದಿನಕರ್ ಗೆ ಸದ್ಯ ದೊಡ್ಡ ಶಾಪವಾಗಿ ಪರಿಣಮಿಸಿರುವ ಹಾಗಿದೆ.
ಸಿತಾರ ದೇವಿ ಹೆಣೆದಿರುವ ವ್ಯೂಹದಲ್ಲಿ ದಿನಕರ್ ಸಿಲುಕಿದ್ದಾರೆ. ಯಾವುದೇ ತಪ್ಪು ಮಾಡದಿದ್ದರೂ, ದಿನಕರ್ ಮೇಲೆ ದೊಡ್ಡ ಅಪವಾದ ಹೊರಿಸಲಾಗಿದೆ. ಸಿತಾರ ದೇವಿಗೆ ಚೆಲ್ಲಾಟವಾಗಿದ್ದರೆ, ದಿನಕರ್ ಗೆ ಪ್ರಾಣ ಸಂಕಟ ಎದುರಾಗಿದೆ.
ನೇರವಾಗಿ ದಿನಕರ್ ಟಾರ್ಗೆಟ್ ಆಗಿದ್ದರೂ, ಅದರ ಅಡ್ಡ ಪರಿಣಾಮ ರಾಧಾ-ರಮಣ್ ಸಂಸಾರದ ಮೇಲೆ ಬೀಳುವ ಹಾಗೆ ಮಾಡುವುದು ಸಿತಾರ ದೇವಿ ಸ್ಕೆಚ್ ಆಗಿರಬಹುದು. ಮುಂದೆ ಓದಿರಿ...
ಸಿತಾರ ದೇವಿ ಮೇಲೆ ಅಟ್ಯಾಕ್
ಸಿತಾರ ದೇವಿ ಮೇಲೆ ಪುಡಿ ರೌಡಿಗಳು ಅಟ್ಯಾಕ್ ಮಾಡಿದ್ದಾರೆ. ಈ ಅಟ್ಯಾಕ್ ಹಿಂದೆ ಬೇರೆ ಯಾರ ಕೈವಾಡವೂ ಇಲ್ಲ. ಅಷ್ಟಕ್ಕೂ, ಸಿತಾರ ದೇವಿ ಪ್ಲಾನ್ ಪ್ರಕಾರ, ಈ ನಾಟಕದ ಅಟ್ಯಾಕ್ ನಡೆದಿದ್ದು, ದಿನಕರ್ ಮೇಲೆ ಅಪವಾದ ಬರುವ ಹಾಗೆ ನೋಡಿಕೊಳ್ಳಲಾಗಿದೆ.
ದೀಪಿಕಾ ಪ್ಲಾನ್ ಮತ್ತೆ ಫ್ಲಾಪ್ ಆಯ್ತು: ರಮಣ್ ಗೆ ದೊಡ್ಡ ಶಾಕ್ ಸಿಕ್ತು.!
ಎಲ್ಲರಿಗೂ ದೊಡ್ಡ ಶಾಕ್
ಸಿತಾರ ದೇವಿ ಮೇಲೆ ನಡೆದ ಅಟ್ಯಾಕ್ ಹಿಂದೆ ದಿನಕರ್ ಇದ್ದಾರೆ ಎಂದು ಪೊಲೀಸರು ಹೇಳಿದ ಕೂಡಲೆ ಮನೆಯವರೆಲ್ಲರಿಗೂ ದೊಡ್ಡ ಆಘಾತ ಆಗಿದೆ. ಮೊದಲೇ ರಮಣ್ ಗೆ ದಿನಕರ್ ಕಂಡ್ರೆ ಆಗಲ್ಲ. ಈಗ ದಿನಕರ್ ಮೇಲೆ ಈ ಆರೋಪ ಬಂದಿರುವ ಕಾರಣ ರಮಣ್ ಗೆ ಇನ್ನಷ್ಟು ಕೋಪ ಬರುವುದರಲ್ಲಿ ಡೌಟೇ ಬೇಡ.
ರಾಣಿ ಸಾಯಲ್ಲ, ಅವನಿ ಸಿಗಲ್ಲ, 'ರಾಧಾ ರಮಣ' ಧಾರಾವಾಹಿ ಮುಗಿಯಲ್ಲ.!
ದಿನಕರ್ ಮೇಲೆ ರಾಧಾಗೆ ನಂಬಿಕೆ
ದಿನಕರ್ ಮೇಲೆ ಪುತ್ರಿ ಅನ್ವಿತಾ ಮತ್ತು ಸೊಸೆ ರಾಧಾಗೆ ಅಪಾರ ನಂಬಿಕೆ. ಆದ್ರೆ, ಈ ಆರೋಪದ ಬಗ್ಗೆ ಇವರಿಬ್ಬರು ಹೇಗೆ ಪ್ರತಿಕ್ರಿಯಿಸುತ್ತಾರೆ ಅನ್ನೋದು ಸದ್ಯಕ್ಕೆ ಸಸ್ಪೆನ್ಸ್.
ದೀಪಿಕಾ ಪ್ಲಾನ್ ಫ್ಲಾಪ್ ಆಯ್ತು: 'ರಾಧಾ ರಮಣ' ಸಂಬಂಧ ಗಟ್ಟಿ ಆಯ್ತು.!
ದೂರವಾಗುತ್ತಾರಾ ರಾಧಾ-ರಮಣ್.?
ಸಿತಾರ ದೇವಿ, ದೀಪಿಕಾ ಮತ್ತು ರಾಣಿ.. ಈ ಮೂವರ ಅಜೆಂಡಾ ಒಂದೇ. ಅದೇ 'ರಾಧಾ ಮತ್ತು ರಮಣ್' ಸಂಸಾರ ಒಡೆಯುವುದು. ದಿನಕರ್ ಮೇಲೆ ಬಂದಿರುವ ಅಪವಾದದಿಂದ ರಾಧಾ ಮತ್ತು ರಮಣ್ ದೂರ ಆಗುತ್ತಾರಾ.? ಕಾದು ನೋಡಬೇಕು.