Don't Miss!
- News ಏಪ್ರಿಲ್ 28ಕ್ಕೆ ಬೆಣ್ಣೆನಗರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ: ಸಿದ್ಧತೆ ಹೇಗಿದೆ? ಮಾಹಿತಿ
- Automobiles Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Sports ಟಿ20 ವಿಶ್ವಕಪ್ಗೆ 15 ಸದಸ್ಯರ ಭಾರತ ತಂಡದ ಆಯ್ಕೆ ಮಾಡಿದ ಇರ್ಫಾನ್ ಪಠಾಣ್; ಸಂಜು, ರಾಹುಲ್ಗೆ ಸ್ಥಾನವಿಲ್ಲ!
- Lifestyle 3ನೇ ಬಾರಿ ಬಾಹ್ಯಾಕಾಶಕ್ಕೆ ಹಾರಲು ಮುಂದಾದ ಸುನೀತಾ ವಿಲಿಯಮ್ಸ್..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈಗ ರಾಣಿ ಸುಳ್ಳು ಹೇಳಿ ತಪ್ಪಿಸಿಕೊಳ್ಳುವುದು ಕಷ್ಟ ಕಷ್ಟ.!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ' ಧಾರಾವಾಹಿಯಲ್ಲಿ ದೊಡ್ಡ ತಿರುವು ಸಿಗುವ ಸೂಚನೆ ಸಿಕ್ಕಿದೆ. ಇಷ್ಟು ದಿನ ರಮಣ್ ಮನೆಯಲ್ಲಿ ಸಿತಾರ ದೇವಿ ಆಜ್ಞೆ ಮೇರೆಗೆ 'ಅವನಿ' ಅಂತ ಹೇಳಿಕೊಂಡು ಡ್ರಾಮಾ ಮಾಡ್ತಿದ್ದ ರಾಣಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬೀಳುವ ಸಮಯ ಹತ್ತಿರಕ್ಕೆ ಬಂದಿದೆ.
''ಮನೆಯಲ್ಲಿ ನಾನೇ ಪವರ್ ಫುಲ್'' ಅಂತ ತೋರಿಸಿಕೊಳ್ಳಲು ರಾಣಿ ಮಾಡುತ್ತಿದ್ದ ನಾಟಕ ದೀಪಿಕಾಗೆ ಇಷ್ಟ ಆಗಲಿಲ್ಲ. ಅದ್ರಲ್ಲೂ, ದೀಪಿಕಾ ಕಪಾಳಕ್ಕೆ ರಾಣಿ ಹೊಡೆದ ಮೇಲೆ ಸೇಡು ತೀರಿಸಿಕೊಳ್ಳಲು ದೀಪಿಕಾ ಸಜ್ಜಾದಳು.
ಹೇಗಾದರೂ ಮಾಡಿ ರಾಣಿಯನ್ನ ಮನೆಯಿಂದ ಹೊರಗೆ ಹಾಕಬೇಕು ಅಂತ ಸಂಚು ರೂಪಿಸಿ ರಾಣಿಯೂ ಸೇರಿದಂತೆ ಹೆಣ್ಮಕ್ಕಳ ಗ್ಯಾಂಗ್ ನ ದೀಪಿಕಾ ಪಾರ್ಕ್ ಗೆ ಕರೆದುಕೊಂಡು ಬಂದಳು.
ಜಿದ್ದಿಗೆ ಬಿದ್ದ ದೀಪು: ಇವತ್ತಾದರೂ ರಾಣಿ ಬಂಡವಾಳ ಬಯಲು.?
ರಾಣಿ ಬಾಯ್ ಫ್ರೆಂಡ್ 'ಮಾದ'ನನ್ನೂ ಪಾರ್ಕ್ ಗೆ ಬರುವ ಹಾಗೆ ದೀಪಿಕಾ ನೋಡಿಕೊಂಡಳು. ಇಷ್ಟೆಲ್ಲ ಆದ್ಮೇಲೆ, ರಾಣಿ-ಮಾದ ಪಾರ್ಕ್ ನಲ್ಲಿ ಭೇಟಿ ಆದರು. ರಾಣಿ-ಮಾದ ಮಾತನಾಡುತ್ತಿದ್ದನ್ನ ನೋಡಿ ರಾಧಾ ಹಾಗೂ ಅನ್ವಿತಾ ಶಾಕ್ ಆಗಿದ್ದಾರೆ.
ಮಾದನ ಜೊತೆಗೆ ರಾಣಿ ಕಾಣಿಸಿಕೊಂಡಿರುವುದು ಇದು ಎರಡನೇ ಬಾರಿ. ಆದ್ದರಿಂದ, ಈಗ ಸುಳ್ಳು ಹೇಳಿ ತಪ್ಪಿಸಿಕೊಳ್ಳುವುದು ರಾಣಿಗೆ ಕಷ್ಟಕಷ್ಟ.
'ರಾಣಿ' ಮುಖವಾಡ 'ರಾಧಾ' ಮುಂದೆ ಕಳಚಿ ಬೀಳುತ್ತಾ.?
ಕೆಲ ಆಸ್ತಿಗಳನ್ನ 'ಅವನಿ' ಹೆಸರಿಗೆ ರಮಣ್ ಬರೆಯುವ ಮುನ್ನ ರಾಣಿ ಮುಖವಾಡ ಕಳಚಿ ಬೀಳಬೇಕು. ಇದಕ್ಕಾಗಿ ದಿನಕರ್ ಕೂಡ ಹರಸಾಹಸ ಮಾಡುತ್ತಿದ್ದಾರೆ. ಇನ್ನೂ ದೀಪಿಕಾ ಕೂಡ ರಾಣಿ ವಿರುದ್ದ ತಿರುಗಿ ಬಿದ್ದಿರುವುದರಿಂದ ರಾಣಿ ಎಸ್ಕೇಪ್ ಆಗುವುದು ಆಲ್ಮೋಸ್ಟ್ ಡೌಟೇ.!
ಈಗಲಾದರೂ, ರಾಣಿ ಸಿಕ್ಕಿಬಿದ್ದು ನಿಜವಾದ 'ಅವನಿ' ಮನೆ ಸೇರಿದರೆ ಮನೆ ಮಂದಿಗಿಂತ ವೀಕ್ಷಕರಿಗೆ ಹೆಚ್ಚು ಖುಷಿ ಅಲ್ಲವೇ.?!