Don't Miss!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೆದರಿ ಬೆಂಡಾದ ಸಿತಾರ ದೇವಿ: ಕಿಡ್ನ್ಯಾಪ್ ಆಗಿದ್ದಾಳಾ 'ಅವನಿ'?
ಇಷ್ಟು ವರ್ಷ ಗುಟ್ಟಾಗಿ ಕಾಪಾಡಿಕೊಂಡು ಬಂದಿದ್ದ ಸಿತಾರ ದೇವಿಯ ಸುಳ್ಳಿನ ಸಾಮ್ರಾಜ್ಯ ಇದೀಗ ಕುಸಿದು ಬೀಳುವ ಹಂತಕ್ಕೆ ಬಂದಿದೆ. ಯಾವುದು ಆಗಬಾರದು ಅಂತ ಸಿತಾರ ದೇವಿ ಇಷ್ಟು ದಿನ ಜಾಗರೂಕತೆ ವಹಿಸಿದ್ರೋ, ಅದೀಗ ಘಟಿಸುವ ಸಾಧ್ಯತೆ ಹೆಚ್ಚಾಗಿದೆ.
'ಅವನಿ' ಅನಾರೋಗ್ಯದ ಬಗ್ಗೆ ರಮಣ್ ಅಂಡ್ ಫ್ಯಾಮಿಲಿಗೆ ಸತ್ಯ ಗೊತ್ತಾಗಿದೆ. 'ಅವನಿ' ಚಿಕಿತ್ಸೆ ಪಡೆಯುತ್ತಿರುವ ಪ್ರಕೃತಿ ಆಸ್ಪತ್ರೆಗೆ ರಮಣ್ ಕುಟುಂಬ ಬಂದು ತಲುಪಿದ್ದಾಗಿದೆ.
ಪ್ರಕೃತಿ ಆಸ್ಪತ್ರೆಯಲ್ಲಿ 'ಅವನಿ' ಸ್ಟಾಫ್ ಅಥವಾ ಡಾಕ್ಟರ್ ಆಗಿರಬಹುದು ಎಂದು ರಮಣ್ ಊಹಿಸಿದ್ದರು. ಆದ್ರೆ, ಹಾಸ್ಪಿಟಲ್ ನಲ್ಲಿ 'ಅವನಿ' ಪೇಷೆಂಟ್ ನಂಬರ್ 111 ಎಂಬ ಕಹಿ ಸತ್ಯ ರಮಣ್ ಅರಿವಿಗೆ ಬಂದಿದೆ. ಮುಂದೆ ಓದಿರಿ...
ವೈದ್ಯರಿಗೆ ಏನೂ ಗೊತ್ತಿಲ್ಲ.!
ಪೇಷೆಂಟ್ ನಂಬರ್ 111 ಬಗ್ಗೆ ಪ್ರಕೃತಿ ಆಸ್ಪತ್ರೆಯಲ್ಲಿ ಯಾವುದೇ ದಾಖಲೆ ಇಲ್ಲ. ಆಕೆಯ ಕುಟುಂಬದವರ ಬಗ್ಗೆ ವೈದ್ಯರ ಬಳಿ ಮಾಹಿತಿಯೂ ಇಲ್ಲ. ಆದ್ರೆ, 'ಅವನಿ' ಆಪರೇಶನ್ ಗೆ ಸಮ್ಮತಿ ಸೂಚಿಸಿ, ಒಪ್ಪಿಗೆ ಪತ್ರಕ್ಕೆ ದೀಪಿಕಾ ಸಹಿ ಹಾಕಿದ್ದಳು. ದೀಪಿಕಾ ಯಾರು ಅನ್ನೋದು ಕೂಡ ಆಪರೇಶನ್ ಮಾಡಿದ ವೈದ್ಯರಿಗೆ ಗೊತ್ತಿಲ್ಲ.
ಅಯ್ಯಯ್ಯೋ.. ಸಿತಾರ ದೇವಿಗೆ 'ಅವನಿ' ಆಪರೇಶನ್ ವಿಷಯ ಗೊತ್ತಾಗೋಯ್ತು.!
ರಮಣ್ ಗೆ ಸತ್ಯ ಗೊತ್ತಾಗಿಲ್ಲ.!
ರಮಣ್ ಅಂಡ್ ಫ್ಯಾಮಿಲಿ ಡಾಕ್ಟರ್ ಬಳಿ ಮಾತನಾಡುವಾಗ, ದೀಪಿಕಾ ಸಹಿ ಮಾಡಿದ್ದ ಒಪ್ಪಿಗೆ ಪತ್ರ ಹರಿದು ಹೋಗಿತ್ತು. ಹೀಗಾಗಿ, 'ಅವನಿ'ಗೆ ಆಪರೇಶನ್ ಮಾಡಿಸಿದ್ದು ದೀಪಿಕಾ ಅಂತ ರಮಣ್ ಗೆ ಇನ್ನೂ ಗೊತ್ತಾಗಿಲ್ಲ.
ದೀಪಿಕಾ ಪ್ಲಾನ್ ತಲೆಕೆಳಗು: ಪ್ರಕೃತಿ ಆಸ್ಪತ್ರೆಯಲ್ಲಿ ಏನಾಗುವುದೋ ಇಂದು.?
ಮುಖಾಮುಖಿಯಾದ ಅಮ್ಮ-ಮಗಳು
ಇತ್ತ ಪ್ರಕೃತಿ ಆಸ್ಪತ್ರೆಯಲ್ಲಿ ದೀಪಿಕಾ ಹಾಗೂ ತಾಯಿ ಸಿತಾರ ಮುಖಾಮುಖಿ ಆಗಿದ್ದಾರೆ. ರಮಣ್ ಆಸ್ಪತ್ರೆಯೊಳಗೆ ಕಾಲಿಟ್ಮೇಲೆ, ಸಿತಾರಗೆ ನಡುಕ ಶುರುವಾಗಿದೆ. ತಾನು ಎಲ್ಲಿ ಸಿಕ್ಕಿ ಹಾಕಿಕೊಳ್ತೀನೋ ಅಂತ ಸಿತಾರ ದೇವಿ ಬೆದರಿ ಬೆಂಡಾಗಿದ್ದಾರೆ. ತಾಯಿಗೆ ಧೈರ್ಯ ಹೇಳುತ್ತಿರುವ ದೀಪಿಕಾ ತಲೆಯಲ್ಲಿ 'ಅವನಿ'ಯನ್ನ ಕಿಡ್ನ್ಯಾಪ್ ಮಾಡುವ ಪ್ಲಾನ್ ಕೂಡ ಇದೆ.
ಭಪ್ಪರೇ!! 'ಅವನಿ' ಬದುಕಿರುವ ಗುಟ್ಟು ರಾಧಾ ಮುಂದೆ ರಟ್ಟು!
ಇವತ್ತು ಇನ್ನೇನ್ ಟ್ವಿಸ್ಟ್ ಇದೆಯೋ.?
ಪ್ರಕೃತಿ ಆಸ್ಪತ್ರೆಯಿಂದ 'ಅವನಿ'ಯನ್ನ ಕಿಡ್ನ್ಯಾಪ್ ಮಾಡುವಲ್ಲಿ ದೀಪಿಕಾ ಮತ್ತು ವಿನಯ್ ಯಶಸ್ವಿ ಆಗ್ತಾರಾ.? ಇಲ್ಲ, 'ಅವನಿ'ಯನ್ನ ರಮಣ್ ಕಣ್ಣಾರೆ ನೋಡ್ತಾರಾ.? ಇವತ್ತು ಸಂಚಿಕೆಯಲ್ಲಿ ಗೊತ್ತಾಗಲಿದೆ.
'ರಾಧಾ ರಮಣ' ಧಾರಾವಾಹಿಯಲ್ಲಿ ಇಂದು ರೋಚಕ ತಿರುವು: 'ಅವನಿ'ಗೆ ಏನಾಗುತ್ತೋ, ಏನೋ?