Don't Miss!
- News karnataka Rain: ಇಂದಿನಿಂದ ರಾಜ್ಯದಲ್ಲಿ ಜೋರು ಮಳೆ: ಬೆಂಗಳೂರಿನಲ್ಲಿ ಕೆಲವೆಡೆ ಮಾತ್ರ ವರಣ ಕೃಪೆ ತೋರುವ ಸಾಧ್ಯತೆ- ಐಎಂಡಿ ಅಲರ್ಟ್
- Finance ಮೊಮೊಸ್ ಮಾರುವ ಶಾಪ್ನಿಂದ ಜಾಬ್ ಆಫರ್ ಸಖತ್ ವೈರಲ್! ವೇತನವೆಷ್ಟು ಗೊತ್ತಾ?
- Lifestyle ಬೆಂಗಳೂರಲ್ಲಿ ಮರ ತಬ್ಬಿಕೊಳ್ಳಲು ₹1,500 ಶುಲ್ಕ..! ಇದೇನಿದು ಕಬ್ಬನ್ ಪಾರ್ಕ್ ನಡಿಗೆ..?
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ರಾಣಿ' ಮುಖವಾಡ 'ರಾಧಾ' ಮುಂದೆ ಕಳಚಿ ಬೀಳುತ್ತಾ.?
ಇಷ್ಟು ದಿನ ರಮಣ್ ಮನೆಯಲ್ಲಿ ರಾಣಿ ಆಡಿದ್ದೇ ಆಟ ಆಗಿತ್ತು. 'ಅವನಿ' ಹೆಸರಿನಲ್ಲಿ ರಮಣ್ ಮನೆಗೆ ಎಂಟ್ರಿಕೊಟ್ಟಿರುವ 'ರಾಣಿ' ತನಗೆ ಬೇಕಾದ ಹಾಗೆ ಎಲ್ಲರನ್ನೂ ಬಳಸಿಕೊಳ್ಳುತ್ತಿದ್ದಾಳೆ. ತನ್ನ ತಾಳಕ್ಕೆ ತಕ್ಕ ಹಾಗೆ ಎಲ್ಲರನ್ನೂ ಕುಣಿಸುತ್ತಿದ್ದಾಳೆ.
ಅತ್ತ 'ರಾಣಿ'ಯೇ ನಿಜವಾದ 'ಅವನಿ' ಅಂತ ರಾಧಾ ಹಾಗೂ ರಮಣ್ ನಂಬಿದ್ದಾರೆ. ಹೀಗಾಗಿ, ರಾಣಿ ಏನೇ ಮಾಡಿದರೂ, ಅವರಿಗೆ ತಪ್ಪು ಕಾಣುತ್ತಿಲ್ಲ.
ಮನೆಯಲ್ಲಿ ಕೂತರೇ ಬೋರು, ಹೊರಗೆ ಹೋಗಬೇಕು ಅಂತ ಪ್ರತಿ ಬಾರಿ ಸುಳ್ಳು ಹೇಳಿ ಆಚೆ ಬರುತ್ತಿದ್ದಾಳೆ ರಾಣಿ. ತನ್ನ ಪ್ರಿಯಕರನನ್ನು ಭೇಟಿ ಮಾಡಲು ದೀಪಿಕಾ ಹೆಸರು ಬಳಸಿ ಶಾಪಿಂಗ್ ಮಾಡುವ ನೆಪದಲ್ಲಿ ರಾಣಿ ಮನೆಯಿಂದ ಹೊರಗೆ ಬಂದಿದ್ದಾಗಿದೆ.
'ರಮಣ್' ಮುಂದೆ ಸತ್ಯ ಹೇಳ್ತಾರಾ ದಿನಕರ್.?
ಶಾಪಿಂಗ್ ಮಾಡಲು ರಮಣ್ ಕಾರ್ಡ್ ಕೊಟ್ಟಿದ್ದರೆ, ಅದನ್ನ ಮನೆಯಲ್ಲೇ ಬೀಳಿಸಿ ರಾಣಿ ಹೊರಬಂದಿದ್ದಳು. ಕಾರ್ಡ್ ಕೊಡಲು ಹೊರಗೆ ಬಂದ ರಾಧಾಗೆ ಈಗ ದೊಡ್ಡ ಶಾಕ್ ಕಾದಿದೆ.
ಪ್ರಿಯತಮನನ್ನು ಮೀಟ್ ಮಾಡಲು ರಾಣಿ ಒಬ್ಬಳೇ ನಡೆದುಕೊಂಡು ಹೋಗುತ್ತಿದ್ದನ್ನ ರಾಧಾ ನೋಡಿದ್ದಾರೆ. ಈಗಲಾದರೂ, ರಾಣಿ ಆಟ ಬಟಾ ಬಯಲಾಗುತ್ತಾ.?
ಮನೆಗೆ ಬಂದ್ಮೇಲೆ ಬಾಂಬ್ ಸಿಡಿಸಿದ ದಿನಕರ್.! ಸಿತಾರ ದೇವಿಗೆ ಶಾಕ್.!
'ಅವನಿ' ಹೆಸರಿಗೆ ಆಸ್ತಿ ಬರೆಯಲು ರಮಣ್ ಮನಸ್ಸು ಮಾಡಿದ್ದಾರೆ. ಇನ್ನೂ, ಸಿತಾರ ದೇವಿ ಹೆಸರಿನಲ್ಲಿಯೂ ಕೆಲ ಪ್ರಾಜೆಕ್ಟ್ ಬರೆಯಲು ರಮಣ್ ತೀರ್ಮಾನ ಮಾಡಿದ್ದಾರೆ. ಇದನ್ನೆಲ್ಲ ಬಹಿರಂಗಗೊಳಿಸುವ ಮುನ್ನ ರಾಣಿ ಮುಖವಾಡ ಕಳಚಿ ಬೀಳುತ್ತಾ.?
'ಅವನಿ'ಯನ್ನ ಇಷ್ಟು ದಿನ ಕೂಡಿ ಹಾಕಿ ಚಿತ್ರಹಿಂಸೆ ಕೊಟ್ಟಿದ್ದು ಸಿತಾರ ಎಂಬ ಸತ್ಯ ಯಾವಾಗ ಹೊರಬೀಳುತ್ತೋ.? ನಿರ್ದೇಶಕರೇ ಹೇಳಬೇಕು. ಅದಕ್ಕೂ ಮುನ್ನ 'ರಾಣಿ' ಯಾರು ಅಂತ 'ರಾಧಾ'ಗೆ ಗೊತ್ತಾಗಬೇಕು. ಇವತ್ತಿನ ಸಂಚಿಕೆಯಲ್ಲಿ ಅದಾಗುತ್ತಾ.? ನೋಡೋಣ.!