Don't Miss!
- News Heavy Rain: ಭಾರೀ ಗಾಳಿ, ಮಳೆಗೆ ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು: ಸಿಡಿಲು ಬಡಿದು 25 ಮೇಕೆಗಳ ಸಾವು
- Technology ಇಂದು ಸ್ಯಾಮ್ಸಂಗ್ ಗ್ಯಾಲಕ್ಸಿ F15 5G ಫೋನ್ ಸೇಲ್!..ಬೆಲೆ ಎಷ್ಟು?
- Lifestyle ಹೊಟ್ಟೆಯೇ ಇಲ್ಲದೆ ಬದುಕಿದ್ದ ನತಾಶಾ ದಿಡ್ಡಿ ನಿಧನ...! ಈಕೆ ಯಾರು ಗೊತ್ತಾ?
- Finance ಸುಗಮ, ಸುರಕ್ಷಿತ ಸಂಚಾರಕ್ಕಾಗಿ ವಿಶೇಷ ಅಭಿಯಾನ ಆರಂಭಿಸಿದ ಬೆಂಗಳೂರು ಸಂಚಾರಿ ಪೊಲೀಸ್
- Automobiles ಹಲವು ಆಯ್ಕೆಗಳಲ್ಲಿ ಸಿಗಲಿದೆ 5 ಡೋರ್ ಥಾರ್: ಸುದ್ದಿ ತಿಳಿದು ನಿಟ್ಟುಸಿರು ಬಿಟ್ಟ ಮಹೀಂದ್ರಾ ಫ್ಯಾನ್ಸ್!
- Sports ಟಿ20 ವಿಶ್ವಕಪ್ 2024: ಟೀಮ್ ಇಂಡಿಯಾಗೆ ದೊಡ್ಡ ಚಿಂತೆಯಾದ ಈ ಆರಂಭಿಕನ ಫಾರ್ಮ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ರಾಣಿ' ಮುಖವಾಡ 'ರಾಧಾ' ಮುಂದೆ ಕಳಚಿ ಬೀಳುತ್ತಾ.?
ಇಷ್ಟು ದಿನ ರಮಣ್ ಮನೆಯಲ್ಲಿ ರಾಣಿ ಆಡಿದ್ದೇ ಆಟ ಆಗಿತ್ತು. 'ಅವನಿ' ಹೆಸರಿನಲ್ಲಿ ರಮಣ್ ಮನೆಗೆ ಎಂಟ್ರಿಕೊಟ್ಟಿರುವ 'ರಾಣಿ' ತನಗೆ ಬೇಕಾದ ಹಾಗೆ ಎಲ್ಲರನ್ನೂ ಬಳಸಿಕೊಳ್ಳುತ್ತಿದ್ದಾಳೆ. ತನ್ನ ತಾಳಕ್ಕೆ ತಕ್ಕ ಹಾಗೆ ಎಲ್ಲರನ್ನೂ ಕುಣಿಸುತ್ತಿದ್ದಾಳೆ.
ಅತ್ತ 'ರಾಣಿ'ಯೇ ನಿಜವಾದ 'ಅವನಿ' ಅಂತ ರಾಧಾ ಹಾಗೂ ರಮಣ್ ನಂಬಿದ್ದಾರೆ. ಹೀಗಾಗಿ, ರಾಣಿ ಏನೇ ಮಾಡಿದರೂ, ಅವರಿಗೆ ತಪ್ಪು ಕಾಣುತ್ತಿಲ್ಲ.
ಮನೆಯಲ್ಲಿ ಕೂತರೇ ಬೋರು, ಹೊರಗೆ ಹೋಗಬೇಕು ಅಂತ ಪ್ರತಿ ಬಾರಿ ಸುಳ್ಳು ಹೇಳಿ ಆಚೆ ಬರುತ್ತಿದ್ದಾಳೆ ರಾಣಿ. ತನ್ನ ಪ್ರಿಯಕರನನ್ನು ಭೇಟಿ ಮಾಡಲು ದೀಪಿಕಾ ಹೆಸರು ಬಳಸಿ ಶಾಪಿಂಗ್ ಮಾಡುವ ನೆಪದಲ್ಲಿ ರಾಣಿ ಮನೆಯಿಂದ ಹೊರಗೆ ಬಂದಿದ್ದಾಗಿದೆ.
'ರಮಣ್' ಮುಂದೆ ಸತ್ಯ ಹೇಳ್ತಾರಾ ದಿನಕರ್.?
ಶಾಪಿಂಗ್ ಮಾಡಲು ರಮಣ್ ಕಾರ್ಡ್ ಕೊಟ್ಟಿದ್ದರೆ, ಅದನ್ನ ಮನೆಯಲ್ಲೇ ಬೀಳಿಸಿ ರಾಣಿ ಹೊರಬಂದಿದ್ದಳು. ಕಾರ್ಡ್ ಕೊಡಲು ಹೊರಗೆ ಬಂದ ರಾಧಾಗೆ ಈಗ ದೊಡ್ಡ ಶಾಕ್ ಕಾದಿದೆ.
ಪ್ರಿಯತಮನನ್ನು ಮೀಟ್ ಮಾಡಲು ರಾಣಿ ಒಬ್ಬಳೇ ನಡೆದುಕೊಂಡು ಹೋಗುತ್ತಿದ್ದನ್ನ ರಾಧಾ ನೋಡಿದ್ದಾರೆ. ಈಗಲಾದರೂ, ರಾಣಿ ಆಟ ಬಟಾ ಬಯಲಾಗುತ್ತಾ.?
ಮನೆಗೆ ಬಂದ್ಮೇಲೆ ಬಾಂಬ್ ಸಿಡಿಸಿದ ದಿನಕರ್.! ಸಿತಾರ ದೇವಿಗೆ ಶಾಕ್.!
'ಅವನಿ' ಹೆಸರಿಗೆ ಆಸ್ತಿ ಬರೆಯಲು ರಮಣ್ ಮನಸ್ಸು ಮಾಡಿದ್ದಾರೆ. ಇನ್ನೂ, ಸಿತಾರ ದೇವಿ ಹೆಸರಿನಲ್ಲಿಯೂ ಕೆಲ ಪ್ರಾಜೆಕ್ಟ್ ಬರೆಯಲು ರಮಣ್ ತೀರ್ಮಾನ ಮಾಡಿದ್ದಾರೆ. ಇದನ್ನೆಲ್ಲ ಬಹಿರಂಗಗೊಳಿಸುವ ಮುನ್ನ ರಾಣಿ ಮುಖವಾಡ ಕಳಚಿ ಬೀಳುತ್ತಾ.?
'ಅವನಿ'ಯನ್ನ ಇಷ್ಟು ದಿನ ಕೂಡಿ ಹಾಕಿ ಚಿತ್ರಹಿಂಸೆ ಕೊಟ್ಟಿದ್ದು ಸಿತಾರ ಎಂಬ ಸತ್ಯ ಯಾವಾಗ ಹೊರಬೀಳುತ್ತೋ.? ನಿರ್ದೇಶಕರೇ ಹೇಳಬೇಕು. ಅದಕ್ಕೂ ಮುನ್ನ 'ರಾಣಿ' ಯಾರು ಅಂತ 'ರಾಧಾ'ಗೆ ಗೊತ್ತಾಗಬೇಕು. ಇವತ್ತಿನ ಸಂಚಿಕೆಯಲ್ಲಿ ಅದಾಗುತ್ತಾ.? ನೋಡೋಣ.!