Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ವಿಷ್ಯಕ್ಕೆ ರಾಘಣ್ಣನ ಮೇಲೆ ಪತ್ನಿ ಮಂಗಳ ಅವರಿಗೆ ಬೇಸರವಿದೆಯಂತೆ.!
ರಾಘವೇಂದ್ರ ರಾಜ್ ಕುಮಾರ್ ವಿರುದ್ಧ ಪತ್ನಿ ಮಂಗಳ ಅವರಿಗೆ ಕೆಲವೊಂದು ವಿಷ್ಯದಲ್ಲಿ ಬೇಸರವಿದೆ. ಮದುವೆ ಆದಾಗನಿಂದ ಇಲ್ಲಿಯವರೆಗೂ ಹೊರಗೆ ಎಲ್ಲಿಯೂ ಕರೆದುಕೊಂಡು ಹೋಗಿಲ್ಲ ಎಂಬ ಮುನಿಸಿದೆಯಂತೆ.
ಈ ಬಗ್ಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಮಾತನಾಡಿದ ಮಂಗಳ ಅವರು, ''ನನ್ನನ್ನ ಎಲ್ಲೂ ಕರೆದುಕೊಂಡು ಹೋಗಿಲ್ಲ, ಐ ಲವ್ ಯೂ ಹೇಳಿಲ್ಲ. ಬೀಚ್ ಗೆ ಕರೆದುಕೊಂಡು ಹೋಗಿಲ್ಲ' ಎಂಬ ದೂರನ್ನ ವೀಕೆಂಡ್ ಟೆಂಟ್ ನಲ್ಲಿ ಹೇಳಿದರು.
ಮಹಿಳೆ ಕಾಲಿಗೆ ನಮಸ್ಕರಿಸಿದ ರಾಘಣ್ಣ: ರಾಜ್ ಪುತ್ರನ ಪಾಲಿಗೆ ಈಕೆ ದೇವತೆ.!
ರಾಘವೇಂದ್ರ ರಾಜ್ ಕುಮಾರ್ ವೃತ್ತಿ ಜೀವನದಲ್ಲಿ ಅತಿ ದೊಡ್ಡ ಸಕ್ಸಸ್ ತಂದುಕೊಟ್ಟ 'ನಂಜುಂಡಿ ಕಲ್ಯಾಣ' ಚಿತ್ರ ನನಗೆ ಇಷ್ಟವಿಲ್ಲ ಎಂದು ಹೇಳಿ ಅಚ್ಚರಿ ಮೂಡಿಸಿದರು. ಎಲ್ಲ ರೀತಿ ದೃಶ್ಯಗಳು ಇದ್ದವು, ಹೀರೋಯಿನ್ ಜೊತೆ ರೋಮ್ಯಾನ್ಸ್ ಸೀನ್ ಇತ್ತು, ನನಗೆ ಇಷ್ಟ ಆಗಿಲ್ಲ' ಎಂದು ಮಂಗಳ ಅವರು ಹೇಳಿಕೊಂಡರು.
ಅಂದ್ಹಾಗೆ, ರಾಘಣ್ಣ ಪತ್ನಿ ಮಂಗಳ ಮತ್ತು ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಅವರು ಸಂಬಂಧಿಕರು. ಶಿವಣ್ಣ ಅವರನ್ನ ಮದುವೆ ಆಗಿದ್ದ ಗೀತಾ ಅವರು ''ನಿನ್ನನ್ನ ನನ್ನ ಮೈದುನನಿಗೆ ಮದುವೆ ಮಾಡಿಕೊಳ್ಳುತ್ತೇನೆ'' ಎಂದು ಮಾತಿಗೆ ಹೇಳುತ್ತಿದ್ದರಂತೆ. ಆದ್ರೆ, ಅದು ಕೊನೆಗೂ ನಿಜ ಆಗೋಯ್ತು.
ರಾಘಣ್ಣ ಆ ಅವಕಾಶ ಒಪ್ಪಿಕೊಂಡಿದ್ದರೇ ಅವರ ಜೀವನವೇ ಬದಲಾಗ್ತಿತ್ತು.!
ಅತ್ತಿಗೆ ಮೂಲಕವೇ ಪರಿಚಯವಾದ ಮಂಗಳ ಮೇಲೆ ರಾಘಣ್ಣ ಅವರಿಗೆ ಮೊದಲ ನೋಟದಲ್ಲಿ ಪ್ರೀತಿ ಆಯಿತಂತೆ. ನಂತರ ಈ ವಿಷ್ಯವನ್ನ ಖುದ್ದು ಅವರೇ ಅಣ್ಣಾವ್ರ ಬಳಿದರಂತೆ. ರಾಜ್ ದಂಪತಿಗಳು ಕೂಡ ಒಪ್ಪಿಗೆ ಸೂಚಿಸಿ ಮದುವೆ ಮಾಡಿಸಿದರಂತೆ.