Don't Miss!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- News Mangalsutra Row: ಸಾಧನೆ ಹೇಳಿ ಮತ ಕೇಳಲು ಮುಖವಿಲ್ಲದ ಪ್ರಧಾನಿ: ಕಾಂಗ್ರೆಸ್
- Technology OnePlus: ಒನ್ಪ್ಲಸ್ 13 ಸ್ಮಾರ್ಟ್ಫೋನ್ ಡಿಸ್ಪ್ಲೇ, ವಿನ್ಯಾಸ ಲೀಕ್!..ಯಾವಾಗ ಲಾಂಚ್?
- Automobiles ಭೂಮಿಯ ಸ್ವರ್ಗ: 1.50 ಕೋಟಿಯ ಟೊಯೊಟಾ ವೆಲ್ಫೈರ್ಗೆ ಮನಸೋತ ಖ್ಯಾತ ನಟ.. ಈ ಕಾರಿನಲ್ಲಿ ಏನಿದೆ?
- Sports RCB: ಯುಜ್ವೇಂದ್ರ ಚಹಾಲ್ ಮರಳಿ ಬರುವಂತೆ ಬೇಡಿಕೊಳ್ಳಿ; ಆರ್ಸಿಬಿಗೆ ಸಲಹೆ ನೀಡಿದ ರಾಬಿನ್ ಉತ್ತಪ್ಪ
- Lifestyle ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ವಿಷ್ಯಕ್ಕೆ ರಾಘಣ್ಣನ ಮೇಲೆ ಪತ್ನಿ ಮಂಗಳ ಅವರಿಗೆ ಬೇಸರವಿದೆಯಂತೆ.!
ರಾಘವೇಂದ್ರ ರಾಜ್ ಕುಮಾರ್ ವಿರುದ್ಧ ಪತ್ನಿ ಮಂಗಳ ಅವರಿಗೆ ಕೆಲವೊಂದು ವಿಷ್ಯದಲ್ಲಿ ಬೇಸರವಿದೆ. ಮದುವೆ ಆದಾಗನಿಂದ ಇಲ್ಲಿಯವರೆಗೂ ಹೊರಗೆ ಎಲ್ಲಿಯೂ ಕರೆದುಕೊಂಡು ಹೋಗಿಲ್ಲ ಎಂಬ ಮುನಿಸಿದೆಯಂತೆ.
ಈ ಬಗ್ಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಮಾತನಾಡಿದ ಮಂಗಳ ಅವರು, ''ನನ್ನನ್ನ ಎಲ್ಲೂ ಕರೆದುಕೊಂಡು ಹೋಗಿಲ್ಲ, ಐ ಲವ್ ಯೂ ಹೇಳಿಲ್ಲ. ಬೀಚ್ ಗೆ ಕರೆದುಕೊಂಡು ಹೋಗಿಲ್ಲ' ಎಂಬ ದೂರನ್ನ ವೀಕೆಂಡ್ ಟೆಂಟ್ ನಲ್ಲಿ ಹೇಳಿದರು.
ಮಹಿಳೆ ಕಾಲಿಗೆ ನಮಸ್ಕರಿಸಿದ ರಾಘಣ್ಣ: ರಾಜ್ ಪುತ್ರನ ಪಾಲಿಗೆ ಈಕೆ ದೇವತೆ.!
ರಾಘವೇಂದ್ರ ರಾಜ್ ಕುಮಾರ್ ವೃತ್ತಿ ಜೀವನದಲ್ಲಿ ಅತಿ ದೊಡ್ಡ ಸಕ್ಸಸ್ ತಂದುಕೊಟ್ಟ 'ನಂಜುಂಡಿ ಕಲ್ಯಾಣ' ಚಿತ್ರ ನನಗೆ ಇಷ್ಟವಿಲ್ಲ ಎಂದು ಹೇಳಿ ಅಚ್ಚರಿ ಮೂಡಿಸಿದರು. ಎಲ್ಲ ರೀತಿ ದೃಶ್ಯಗಳು ಇದ್ದವು, ಹೀರೋಯಿನ್ ಜೊತೆ ರೋಮ್ಯಾನ್ಸ್ ಸೀನ್ ಇತ್ತು, ನನಗೆ ಇಷ್ಟ ಆಗಿಲ್ಲ' ಎಂದು ಮಂಗಳ ಅವರು ಹೇಳಿಕೊಂಡರು.
ಅಂದ್ಹಾಗೆ, ರಾಘಣ್ಣ ಪತ್ನಿ ಮಂಗಳ ಮತ್ತು ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಅವರು ಸಂಬಂಧಿಕರು. ಶಿವಣ್ಣ ಅವರನ್ನ ಮದುವೆ ಆಗಿದ್ದ ಗೀತಾ ಅವರು ''ನಿನ್ನನ್ನ ನನ್ನ ಮೈದುನನಿಗೆ ಮದುವೆ ಮಾಡಿಕೊಳ್ಳುತ್ತೇನೆ'' ಎಂದು ಮಾತಿಗೆ ಹೇಳುತ್ತಿದ್ದರಂತೆ. ಆದ್ರೆ, ಅದು ಕೊನೆಗೂ ನಿಜ ಆಗೋಯ್ತು.
ರಾಘಣ್ಣ ಆ ಅವಕಾಶ ಒಪ್ಪಿಕೊಂಡಿದ್ದರೇ ಅವರ ಜೀವನವೇ ಬದಲಾಗ್ತಿತ್ತು.!
ಅತ್ತಿಗೆ ಮೂಲಕವೇ ಪರಿಚಯವಾದ ಮಂಗಳ ಮೇಲೆ ರಾಘಣ್ಣ ಅವರಿಗೆ ಮೊದಲ ನೋಟದಲ್ಲಿ ಪ್ರೀತಿ ಆಯಿತಂತೆ. ನಂತರ ಈ ವಿಷ್ಯವನ್ನ ಖುದ್ದು ಅವರೇ ಅಣ್ಣಾವ್ರ ಬಳಿದರಂತೆ. ರಾಜ್ ದಂಪತಿಗಳು ಕೂಡ ಒಪ್ಪಿಗೆ ಸೂಚಿಸಿ ಮದುವೆ ಮಾಡಿಸಿದರಂತೆ.