Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ವೀಕೆಂಡ್ ವಿತ್ ರಮೇಶ್'ಗೆ ದ್ರಾವಿಡ್ ಬರಬೇಕೆ?, ಹಾಗಾದ್ರೆ ಹೀಗೆ ಮಾಡಿ!
Recommended Video
ಜೀ ಕನ್ನಡ ವಾಹಿನಿಯಲ್ಲಿ 'ವೀಕೆಂಡ್ ವಿತ್ ರಮೇಶ್ ಸೀಸನ್ 4' ಕಾರ್ಯಕ್ರಮ ಶುರುವಾಗುತ್ತಿದೆ. ಇಂದು ಕಾರ್ಯಕ್ರಮದ ಬಗ್ಗೆ ಪ್ರೆಸ್ ಮೀಟ್ ಮಾಡಲಾಗಿದ್ದು, ಕೆಲ ವಿವರಗಳನ್ನು ಹಂಚಿಕೊಳ್ಳಲಾಗಿದೆ.
ಈ ಕಾರ್ಯಕ್ರಮ ಹೈಲೈಟ್ ಅಂದರೆ ಅತಿಥಿಗಳು. ಪ್ರತಿ ಸೀಸನ್ ಶುರು ಆದಾಗಲೂ ಕೆಂಪು ಬಣ್ಣದ ಕುರ್ಚಿ ಮೇಲೆ ಕೂರುವ ಸಾಧಕರು ಯಾರು ಎನ್ನುವ ಕುತೂಹಲ ಇರುತ್ತದೆ. ಮತ್ತೊಂದು ಕಡೆ ವೀಕ್ಷಕರು ತಮ್ಮ ನೆಚ್ಚಿನ ಸಾಧಕರ ಹೆಸರನ್ನು ಸೂಚಿಸುತ್ತಾರೆ.
'ವೀಕೆಂಡ್ ವಿತ್ ರಮೇಶ್'ನಲ್ಲಿ ಅಪ್ಪುಗೆ ಬಹಳ ಇಷ್ಟ ಆಗುವುದಿದು
ಆ ರೀತಿ ಜನರು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ನೋಡಲು ಬಯಸಿದ ಸಾಧಕರಲ್ಲಿ ಪ್ರಮುಖರು ರಾಹುಲ್ ದ್ರಾವಿಡ್. ಭಾರತ ಕ್ರಿಕೆಟ್ ನ ದಂತ ಕತೆಯಾಗಿ ಕರ್ನಾಟಕದ ಕೀರ್ತಿಯನ್ನು ವಿಶ್ವ ಮಟ್ಟಕ್ಕೆ ತೆಗೆದುಕೊಂಡು ಹೋದ ದ್ರಾವಿಡ್ ರನ್ನು ಈ ಕಾರ್ಯಕ್ರಮದಲ್ಲಿ ನೋಡುವ ಆಸೆ ಪ್ರತಿ ಕನ್ನಡಿಗನಿಗೂ ಇದೆ.
ಆದರೆ, ದ್ರಾವಿಡ್ ಈ ವರೆಗೆ ಕಾರ್ಯಕ್ರಮದಲ್ಲಿ ಬರಲು ಸಾಧ್ಯ ಆಗಿಲ್ಲ. ಈ ಬಗ್ಗೆ ಮಾತನಾಡಿರುವ ಜೀ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಅದಕ್ಕೆ ವೀಕ್ಷಕರ ಸಹಕಾರ ಕೇಳಿದ್ದಾರೆ.......
ಮೊದಲ ಸೀಸನ್ ನಿಂದ ಪ್ರಯತ್ನ
'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ರಾಹುಲ್ ದ್ರಾವಿಡ್ ರನ್ನು ಕರೆಸುವ ಪ್ರಯತ್ನ ಮೊದಲ ಸೀಸನ್ ನಿಂದ ನಡೆಯುತ್ತಿದೆಯಂತೆ. ಕಾರ್ಯಕ್ರಮ ಶುರು ಆದಾಗಿನಿಂದ ದ್ರಾವಿಡ್ ರನ್ನು ನೋಡುವ ಬಯಕೆ ವೀಕ್ಷಕರದ್ದಾಗಿದೆ. ಅದೇ ರೀತಿ ಜೀ ಕನ್ನಡ ವಾಹಿನಿ ಕೂಡ ಮೊದಲ ಸೀಸನ್ ನಿಂದಲೂ ದ್ರಾವಿಡ್ ರಿಗೆ ಪತ್ರ ಬರೆಯುತ್ತಿದೆಯಂತೆ.
ಕಾರಣಾಂತರಗಳಿಂದ ಆದು ಸಾಧ್ಯ ಆಗುತಿಲ್ಲ
ಈ ಬಗ್ಗೆ ಇಂದಿನ ಪ್ರೆಸ್ ಮೀಟ್ ನಲ್ಲಿ ಜೀ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಮಾತನಾಡಿದರು. ''ದ್ರಾವಿಡ್ ಅವರು ಕೆಲವು ಕಾರಣಗಳಿಂದ ಬರಲು ಆಗುತ್ತಿಲ್ಲ. ವೀರೆಂದ್ರ ಹೆಗ್ಡೆ ರವರಿಗೆ ಸಹ ಮೊದಲ ಸೀಸನ್ ನಿಂದ ಪ್ರಯತ್ನ ಮಾಡುತ್ತಿದ್ದೆವು. ಆ ಸಮಯ ಈಗ ಕೂಡಿ ಬಂದಿದೆ'' ಎಂದರು.
ಅತ್ತ ರಮೇಶ್, ಇತ್ತ ಪುನೀತ್ : ಪೈಪೋಟಿ ಜೊತೆ ಮನರಂಜನೆ
ದ್ರಾವಿಡ್ ಬೇಕು ಅಂದರೆ ಹೀಗೆ ಮಾಡಿ
'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ದ್ರಾವಿಡ್ ಬರಬೇಕು ಅಂದರೆ ಏನು ಮಾಡಬೇಕು ಎನ್ನುವುದನ್ನು ಸಹ ರಾಘವೇಂದ್ರ ಹುಣಸೂರು ತಿಳಿಸಿದರು. ''ಪತ್ರದ ಮೂಲಕ ಪ್ರಯತ್ನ ಮಾಡಿದ್ದು ಆಗಿದೆ. ಈಗ ಟ್ವಿಟ್ಟರ್ ನ ಮೂಲಕ ಪ್ರಯತ್ನ ಮಾಡೋಣ ಎಂದಿರುವ ಅವರು ಒಂದು ಹ್ಯಾಗ್ ಟ್ಯಾಗ್ ಬಳಸಿ ದ್ರಾವಿಡ್ ಅವರಿಗೆ ತಲುಪಿಸೋಣ ಎಂಬ ಸಲಹೆ ನೀಡಿದರು.
#WWRDravid ಎಂಬ ಹ್ಯಾಶ್ ಟ್ಯಾಗ್
ರಾಹುಲ್ ದ್ರಾವಿಡ್ ಅವರ ಜೊತೆಗೆ ಪತ್ರದ ಚಳುವಳಿ ಮೂಲಕ ಪ್ರಯತ್ನ ಮಾಡಿದ್ದೇವೆ. ಈಗ #WWRDravid ಎಂಬ ಹ್ಯಾಶ್ ಟ್ಯಾಗ್ ಬಳಸಿ ಟ್ವಿಟ್ಟರ್ ಚಳುವಳಿ ಮಾಡಬೇಕಿದೆ. ಈ ಹ್ಯಾಶ್ ಟ್ಯಾಗ್ ಟ್ರೆಂಡ್ ಮಾಡಿ, ಅದು ರಾಹುಲ್ ದ್ರಾವಿಡ್ ಅವರಿಗೆ ತಲುಪಿಸಿ ಎಂದು ರಾಘವೇಂದ್ರ ಹುಣಸೂರು ವೀಕ್ಷಕರ ಸಹಾಯವನ್ನು ಕೇಳಿದರು.
ವೀಕೆಂಡ್ ವಿತ್ ರಮೇಶ್-4 ಮೊದಲ ಅತಿಥಿಯ ಹೆಸರು ಬಹಿರಂಗ.!
ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್
ದ್ರಾವಿಡ್ ಮಾತ್ರವಲ್ಲದೆ ಭಾರತ ಕ್ರಿಕೆಟ್ ತಂಡದ ಇತರ ಶ್ರೇಷ್ಠ ಆಟಗಾರರಾದ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಅವರನ್ನು ಸಹ ಕರೆ ತರುವ ಪ್ರಯತ್ನ ನಡೆದಿದೆಯಂತೆ. ''ಅವರ ಬಗ್ಗೆ ರಿಸರ್ಚ್ ಶುರು ಮಾಡಿದ್ದೇವೆ. ಅವರು ಕಾರ್ಯಕ್ರಮಕ್ಕೆ ಬಂದರೆ ಒಂದು ಅದ್ಬುತ ಶೋ ನೀಡುವ ಭರವಸೆಯನ್ನು ನೀಡುತ್ತೇವೆ.'' ಎಂದು ಈ ಮೂಲಕ ರಾಘವೇಂದ್ರ ಹುಣಸೂರು ತಿಳಿಸಿದರು.