Don't Miss!
- News Poornachandra Tejaswi: ವಿಸ್ಮಯಲೋಕವನ್ನೇ ತೆರೆದಿಡುವ ತೇಜಸ್ವಿಯವರ ಪುಸ್ತಕಗಳು
- Lifestyle ಗ್ರಹಣ ಕಾಲದಲ್ಲಿ ಆಹಾರ ಸೇವಿಸಬಾರದೇಕೆ.? ಹಿರಿಯರ ವಾದವೇನು..?
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
''ನನ್ನ ಆಯಸ್ಸನ್ನೂ ಅವನಿಗೆ ನೀಡಲಿ'' ಎಂದ ಶಿವಣ್ಣ : ಭಾವುಕರಾದ ರಾಘಣ್ಣ ದಂಪತಿ
Recommended Video
''ವಿಧಿ ಇವರ ಜೀವನದಲ್ಲಿ ವಿಧ ವಿಧವಾಗಿ ಆಟ ಆಡಿದರೂ, ಯಾವುದಕ್ಕೂ ಜಗ್ಗದೆ, ಯಾವುದಕ್ಕೂ ಕುಗ್ಗದೆ, ಮುನ್ನುಗುತ್ತಿರುವ ಹಸನ್ಮುಖಿ ರಾಘವೇಂದ್ರ ರಾಜ್ ಕುಮಾರ್.''
ಈ ರೀತಿ ರಮೇಶ್ ಅರವಿಂದ್ ತಮ್ಮ 'ವಿಕೇಂಡ್ ವಿತ್ ರಮೇಶ್ ಸೀಸನ್ 4'ರ ಎರಡನೇ ಸಂಚಿಕೆಯನ್ನು ಶುರು ಮಾಡಿದ್ದಾರೆ. ಈ ಸಂಚಿಕೆಯಲ್ಲಿ ನಟ ರಾಘವೇಂದ್ರ ರಾಜ್ ಕುಮಾರ್ ಅತಿಥಿಯಾಗಿದ್ದಾರೆ. ಈ ಕಾರ್ಯಕ್ರಮದ ಪ್ರೊಮೋ ಸದ್ಯ ಹೊರಬಂದಿದೆ.
'ವೀಕೆಂಡ್ ವಿತ್ ರಮೇಶ್'ಗೆ ಅತಿಥಿಯಾದ ದೊಡ್ಮನೆ ಮಗ ರಾಘಣ್ಣ.?
ಸಿನಿಮಾ ಸಾಧನೆ ಮಾತ್ರವಲ್ಲದೆ, ತಮ್ಮ ಅನಾರೋಗ್ಯಕ್ಕೆ ಸೆಡ್ಡು ಹೊಡೆದ ರಾಘವೇಂದ್ರ ರಾಜ್ ಕುಮಾರ್ ಜೀವನ ಸಾಕಷ್ಟು ಸ್ಫೂರ್ತಿ ನೀಡಲಿದೆ. ಇದೇ ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್ ಪ್ರೀತಿಯ ಸಹೋದರನ ಬಗ್ಗೆ ಭಾವುಕ ಮಾತುಗಳನ್ನು ಆಡಿದ್ದಾರೆ.
ಅಂದಹಾಗೆ, 'ವಿಕೇಂಡ್ ವಿತ್ ರಮೇಶ್ ಸೀಸನ್ 4'ರ ಎರಡನೇ ಸಂಚಿಕೆ ಪ್ರೊಮೋದ ವಿಶೇಷಗಳು ಹೀಗಿವೆ.
ಶಿವಣ್ಣ, ರಾಘಣ್ಣರ ಭಾವುಕ ಮಾತುಗಳು
ಕಾರ್ಯಕ್ರಮದಲ್ಲಿ ತಮ್ಮನ ಬಗ್ಗೆ ಶಿವರಾಜ್ ಕುಮಾರ್ ಮಾತನಾಡಿದ್ದಾರೆ. ಅನಾರೋಗ್ಯದಿಂದ ಬಳಲಿದ್ದ ರಾಘವೇಂದ್ರ ರಾಜ್ ಕುಮಾರ್ ರಿಗೆ ತನ್ನ ಆಯಸ್ಸುನನ್ನು ದೇವರು ನೀಡಲಿ ಎಂದು ಕೇಳಿಕೊಂಡಿದ್ದಾರೆ. ''ನನಗೆ ಈ ರೀತಿಯ ಸಹೋದರನನ್ನು ನೋಡಲು ತುಂಬ ಖುಷಿ ಆಗುತ್ತದೆ. ದೇವರು ನನ್ನ ಆಯಸ್ಸುನ್ನೂ ಅವನಿಗೆ ನೀಡಲಿ'' ಎಂದು ಭಾವುಕ ಮಾತುಗಳನ್ನು ಆಡಿದ್ದಾರೆ.
ನನಗೆ ಅವನು ಅಣ್ಣ ಅಲ್ಲ.. ತಂದೆ
ಶಿವರಾಜ್ ಕುಮಾರ್ ನೀಡಿರುವ ಪ್ರೀತಿ ಬಗ್ಗೆ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್ ''ಅವನು ನನಗೆ ಅಣ್ಣ ಅಲ್ಲ.. ತಂದೆ. ನನಗೆ ಹುಷಾರಿಲ್ಲದೆ ಇರುವಾಗ ನನ್ನನ್ನು ಮಗುತರ ಒಂದು ತಿಂಗಳು ನೋಡಿಕೊಂಡಿದ್ದಾನೆ. ಇನ್ನೊಬ್ಬ ತಮ್ಮ ಪುನೀತ್ ನನ್ನ ಮನೆ ಕಟ್ಟಿಸಿಕೊಟ್ಟಿದ್ದಾನೆ.'' ಎಂದು ಸಹೋದರರ ಬಗ್ಗೆ ಮಾತನಾಡಿದ್ದಾರೆ.
ಅಬ್ಬಬ್ಬಾ..1 ದಿನಕ್ಕೆ ಧರ್ಮಸ್ಥಳದಲ್ಲಿ ಊಟ ಮಾಡುವ ಭಕ್ತರ ಸಂಖ್ಯೆ ಕೇಳಿದ್ರೆ ಅಚ್ಚರಿ ಆಗುತ್ತೆ!
ಮಂಗಳಾ ರಾಘವೇಂದ್ರ ರಾಜ್ ಕುಮಾರ್ ಕಣ್ಣೀರು
ಪತಿಯ ಬಗ್ಗೆ ಮಾತನಾಡಿದ ಮಂಗಳಾ ರಾಘವೇಂದ್ರ ರಾಜ್ ಕುಮಾರ್ ಇಡೀ ಕುಟುಂಬದ ಸಹಾಯ ನೆನೆದು ಕಣ್ಣೀರು ಹಾಕಿದರು. ಉಳಿದಂತೆ, ಕಾರ್ಯಕ್ರಮದಲ್ಲಿ ನಿರ್ದೇಶಕ ಭಗವಾನ್, ಚಿನ್ನೆಗೌಡ, ರಾಘಣ್ಣನ ತಂಗಿಯರು, ಅಜ್ಜಿ, ಗೆಳೆಯರು ಹಾಗೂ ಮಗ ಯುವ ರಾಜ್ ಕುಮಾರ್ ಭಾಗಿಯಾಗಿದ್ದರು.
ಪ್ರೊಮೋ ಸೂಪರ್, ಎಪಿಸೋಡ್ ಗೆ ವೈಟಿಂಗ್
ರಾಘವೇಂದ್ರ ರಾಜ್ ಕುಮಾರ್ ಅವರ ಸಂಚಿಕೆಯ ಪ್ರೊಮೋ ಸೂಪರ್ ಆಗಿದೆ. ತಮಾಷೆ, ಭಾವುಕತೆ, ಸ್ಫೂರ್ತಿಯ ಕಥೆ, ನಗು, ಖುಷಿ ಹೀಗೆ ಎಲ್ಲವೂ ಸೇರಿದ ಈ ಸಂಚಿಕೆಯನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಇದೇ ಶನಿವಾರ ರಾತ್ರಿ 9.30ಕ್ಕೆ ಪ್ರಸಾರ ಆಗಲಿದೆ.