Don't Miss!
- Automobiles ಹೊಸ ಸುಜುಕಿ V-Strom 800 DE ಬೈಕ್ ಬಿಡುಗಡೆ: ಬೆಲೆ ರೂ.10.30 ಲಕ್ಷ
- Lifestyle ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು..? ಹಿರಿಯರು ಈ ರೀತಿ ಹೇಳೋದೇಕೆ.?
- Sports RCB vs KKR: ಗೇಮ್ ಚೇಂಜರ್ ಆಗಬಹುದು ಈ ಪ್ಲೇಯರ್ಸ್; ಈ ಆಟಗಾರರ ಮೇಲೆ ಕಣ್ಣು
- News Acid Attack: ಆಸ್ತಿ ವಿವಾದ: ಮಗನ ಮೇಲೆ 'ಆಸಿಡ್' ಎರಚಿದ ತಂದೆ
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಷ್ಣು - ಅಂಬಿ ಮಾಡಬೇಕಿದ್ದ ಈ ಸಿನಿಮಾ ಕನಸಾಗಿಯೇ ಉಳಿದಿದೆ
Recommended Video
ಸಿನಿಮಾ ಮಾಡುವುದಲ್ಲ... ಆಗುವುದು... ಎಂಬ ಮಾತಿದೆ. ಒಂದು ಸಿನಿಮಾ ಆಗಬೇಕು ಅಂದ್ರೆ ಅದೇ ಆಗುತ್ತದೆ. ಯಾರು ಏನೇ ಪ್ರಯತ್ನ ಮಾಡಿದರೂ, ಸಿನಿಮಾ ಆಗುವ ಕಾಲ ಕೂಡಿ ಬರಬೇಕು.
ಅದಕ್ಕೆ ಏನೋ ಎಷ್ಟು ಸಿನಿಮಾಗಳು ಮಾಡಬೇಕು ಅಂದರೂ ಆಗುವುದಿಲ್ಲ. ಒಂದಲ್ಲ ಒಂದು ಕಾರಣಕ್ಕೆ ನಿಲ್ಲುವ ಆ ಸಿನಿಮಾಗಳು ಕನಸಾಗಿಯೇ ಉಳಿಯುತ್ತದೆ. ಅದೇ ರೀತಿ ನಟ ವಿಷ್ಣುವರ್ಧನ್ ಹಾಗೂ ಅಂಬರೀಶ್ ಇಬ್ಬರು ಒಂದು ಸಿನಿಮಾ ಮಾಡಬೇಕಿತ್ತು. ಆದರೆ, ಕೊನೆಗೂ ಆ ಸಿನಿಮಾ ನಿರ್ಮಾಣ ಆಗಲೇ ಇಲ್ಲ.
ಡಾ.ವಿಷ್ಣು ಸಾವಿನ ದಿನ ಅಂಬಿ ಆಡಿದ ಮಾತನ್ನ ಮರೆಯದ ಸಾಧುಕೋಕಿಲಾ
ಈ ಸಿನಿಮಾದ ಬಗ್ಗೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ. ಮುಂದೆ ಓದಿ...
ರಾಜೇಂದ್ರ ಸಿಂಗ್ ಬಾಬು ಕನಸು
'ನಾಗರಹೊಳೆ' ಸಿನಿಮಾವನ್ನು ವಿಷ್ಣುವರ್ಧನ್ ಹಾಗೂ ಅಂಬರೀಶ್ ಜೊತೆಗೆ ರಾಜೇಂದ್ರ ಸಿಂಗ್ ಬಾಬು ಮಾಡಿದ್ದರು. ಆ ನಂತರ ಒಂದು ಮಹತ್ವದ ಸಿನಿಮಾವನ್ನು ಇಬ್ಬರು ನಟರನ್ನು ಸೇರಿಸಿ ಮಾಡುವ ತಯಾರಿ ನಡೆದಿತ್ತು. ವಿಷ್ಣು ಹಾಗೂ ಅಂಬಿಯ ಸ್ನೇಹಕ್ಕೆ ತಕ್ಕ ಹಾಗೆ ಒಂದು ಕಥೆ ಸಿದ್ಧ ಮಾಡಿಕೊಂಡಿದ್ದರು.
ವಿಷ್ಣು ಕಪಾಳಕ್ಕೆ ಸುಹಾಸಿನಿ ಹೊಡೆದ ದೃಶ್ಯ ಬಾಬು ಎಂದಿಗೂ ಮರೆಯೊಲ್ಲ!
ಜನರಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ
ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ 'ಮುತ್ತಿನಹಾರ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಆ ಬಳಿಕ ಮತ್ತೆ ಯೋಧರ ಬಗ್ಗೆ ಒಂದು ಸಿನಿಮಾ ಮಾಡುವ ಪ್ಲಾನ್ ಬಂತು. ಜನರಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರ ಬಗ್ಗೆ ಸಿನಿಮಾ ಮಾಡಲು ಸಿದ್ಧವಾದರು. ಆ ಚಿತ್ರಕ್ಕೆ ವಿಷ್ಣು ಮತ್ತು ಅಂಬಿ ನಾಯಕರಾಗಬೇಕಿತ್ತು.
ಆ ಸಿನಿಮಾ ಮಾಡಲು ಬೇರೆ ಯಾವ ನಟರು ಇಲ್ಲ
ಜನರಲ್ ಕಾರ್ಯಪ್ಪ ಪಾತ್ರದಲ್ಲಿ ವಿಷ್ಣುವರ್ಧನ್ ಹಾಗೂ ಜನರಲ್ ತಿಮ್ಮಯ್ಯ ಪಾತ್ರದಲ್ಲಿ ಅಂಬರೀಶ್ ರನ್ನು ಇಟ್ಟುಕೊಂಡು ಸಿನಿಮಾ ಮಾಡುವ ಕನಸು ರಾಜೇಂದ್ರ ಸಿಂಗ್ ಬಾಬು ಅವರದ್ದಾಗಿತು. ಆದರೆ, ಕೊನೆಗೂ ಆ ಆಸೆ ಈಡೇರಲೇ ಇಲ್ಲ. ಆ ಇಬ್ಬರು ನಟರು ಬಿಟ್ಟರೆ ಬೇರೆ ಯಾವ ನಟರ ಜೊತೆಗೆ ಆ ಸಿನಿಮಾ ಮಾಡಲು ಸಾಧ್ಯ ಇಲ್ಲ ಎಂದು ಬಾಬು ನೋವು ಹಂಚಿಕೊಂಡರು.
ಕುಚ್ಚಿಕ್ಕು ಗೆಳೆಯ ವಿಷ್ಣು ನೆನೆದು ಭಾವುಕರಾದ ಅಂಬರೀಶ್
ವಿಷ್ಣುವರ್ಧನ್ - ಅಂಬರೀಶ್ ಚಿತ್ರಗಳು
ಈವರಗೆ 'ನಾಗರಹೊಳೆ', 'ಸ್ನೇಹ ಸೇಡು', 'ನಾಗರಹಾವು' 'ಅವಳ ಹೆಜ್ಜೆ', 'ಹಬ್ಬ', 'ದಿಗ್ಗಜರು' ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ವಿಷ್ಣುವರ್ಧನ್ ಹಾಗೂ ಅಂಬರೀಶ್ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದರೆ, ಜನರಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಆಗಿ ಅವರು ನಟಿಸುವ ಸಿನಿಮಾ ಆಗಲೇ ಇಲ್ಲ.
ಗೆಳೆಯರನ್ನು ನೆನೆದು ಬಾಬು ಕಣ್ಣೀರು
ವಿಷ್ಣುವರ್ಧನ್ ಮತ್ತು ಅಂಬರೀಶ್ ಇಬ್ಬರಿಗೂ ರಾಜೇಂದ್ರ ಸಿಂಗ್ ಬಾಬು ಆಪ್ತ ಗೆಳೆಯರು. ಈ ಇಬ್ಬರು ನಟರಿಗೆ ಅವರ ಕೆರಿಯರ್ ನ ಬೆಸ್ಟ್ ಸಿನಿಮಾಗಳನ್ನು ಬಾಬು ನೀಡಿದ್ದಾರೆ. ಇಂತಹ ಒಳ್ಳೆಯ ಗೆಳೆಯರನ್ನು ನೆನೆದು ಕಾರ್ಯಕ್ರಮದಲ್ಲಿ ರಾಜೇಂದ್ರ ಸಿಂಗ್ ಬಾಬು ಕಣ್ಣೀರು ಹಾಕಿದ್ದಾರೆ.