twitter
    For Quick Alerts
    ALLOW NOTIFICATIONS  
    For Daily Alerts

    Ramachari Serial: ಹೋದ ಕಣ್ಣು ಚಾರುಲತಾಗೆ ಬಂತಾ? ಮಾನ್ಯತಾ ಕಥೆಯೇನು?

    By ಶೃತಿ ಹರೀಶ್ ಗೌಡ
    |

    ರಾಮಾಚಾರಿ ಚಾರುಲತಾಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾನೆ ಈ ಕಡೆ ಚಾರು ಬಹಳ ಸಂತೋಷದಲ್ಲಿ ಇದ್ದಾಳೆ. ರಾಮಾಚಾರಿ ಜೊತೆಗಿನ ಒಡನಾಟವನ್ನು ನೆನೆಸಿಕೊಂಡು ಚಾರು ಬಹಳ ಪುಳಕಿತಳಾಗಿದ್ದಾಳೆ. ಆಸ್ಪತ್ರೆಗೆ ಹೋದ ರಾಮಾಚಾರಿ ಡಾಕ್ಟರ್ ವಿಲಿಯಂ ಅವರನ್ನು ಭೇಟಿಯಾಗಲು ಅಪಾಯಿಂಟ್ಮೆಂಟ್ ಕೇಳಿದ್ದಾನೆ. ಇದೇ ಸಂದರ್ಭದಲ್ಲಿ ಡಾಕ್ಟರ್ ಅಲ್ಲಿಗೆ ಬಂದು ಇವರೇ ವಿಲಿಯಂ ಎಂದು ಪರಿಚಯ ಮಾಡಿ ಕೊಟ್ಟಿದ್ದಾರೆ.

    "ಈಗ ನೀವೊಬ್ಬರೇ ಭರವಸೆ ಡಾಕ್ಟರ್.. ದಯವಿಟ್ಟು ನೀವು ಕೊಡುವ ಇಂಜೆಕ್ಷನ್‌ನಿಂದ ಚಾರು ಮೇಡಂಗೆ ಕಣ್ಣು ಬಂದರೆ ಅಷ್ಟೇ ಸಾಕು ಎಂದು ರಾಮಾಚಾರಿ ಹೇಳಿದ್ದಾನೆ.ಇದೇ ವೇಳೆ ಚಾರುಲತಾಳನ್ನು ಮತ್ತೊಂದು ಚಕಪ್‌ಕ್ಕಾಗಿ ಆಸ್ಪತ್ರೆಯ ಬೇರೆ ರೂಮಿಗೆ ಕರೆದುಕೊಂಡು ಹೋಗಲಾಗಿದೆ. ಚಾರು ಲತಾಳ ಕಣ್ಣುಗಳ ಪರೀಕ್ಷೆಯನ್ನು ಮತ್ತೆ ಮಾಡಲಾಗಿದೆ.

    ಮತ್ತೊಮ್ಮೆ ರಿಯಾಲಿಟಿ ಶೋವಿನಲ್ಲಿ ಮೋಡಿ ಮಾಡುತ್ತಿರೋ 'ಕಮಲಿ' ನಟಿ ಗೇಬ್ರಿಯೆಲಾ ಸ್ಮಿತ್ಮತ್ತೊಮ್ಮೆ ರಿಯಾಲಿಟಿ ಶೋವಿನಲ್ಲಿ ಮೋಡಿ ಮಾಡುತ್ತಿರೋ 'ಕಮಲಿ' ನಟಿ ಗೇಬ್ರಿಯೆಲಾ ಸ್ಮಿತ್

    ಮಗಳ ಫೋಟೊ ನೋಡಿ ಚಾರುಗೆ ಶಾಕ್

    ಮಗಳ ಫೋಟೊ ನೋಡಿ ಚಾರುಗೆ ಶಾಕ್

    ಚಾರುಲತಾ ರಾಮಾಚಾರಿಯ ಬೈಕಿನಲ್ಲಿ ಹೋಗುವುದನ್ನು ಚಾರು ಸ್ನೇಹಿತೆ ನೋಡಿದ್ದಾಳೆ. ಇದನ್ನು ಮಾನ್ಯತಾಳಿಗೆ ಫೋನ್ ಮಾಡಿ ತಿಳಿಸಿದ್ದಾಳೆ. ಈ ವೇಳೆ ಮಾನ್ಯತಾಗೆ ನಂಬಿಕೆ ಬರಲಿಲ್ಲ. ಇದೇ ವೇಳೆ ವಾಟ್ಸಪ್ ಮುಖಾಂತರ ಮಾನ್ಯತಾ ಸ್ನೇಹಿತ ಫೋಟೋ ಕಳುಹಿಸಿದ್ದಾಳೆ. ನಿನ್ನ ಶತ್ರು ರಾಮಾಚಾರಿಯ ಜೊತೆ ನಿನ್ನ ಮಗಳು ಹೋಗುತ್ತಿದ್ದಾಳೆ ನೋಡು ಎಂದು ಹೇಳಿದ್ದಾಳೆ. ರಾಮಾಚಾರಿ ಜೊತೆಗೆ ಚಾರು ಹೋಗುವುದನ್ನು ನೋಡಿ ಮಾನ್ಯತಾಗೆ ಶಾಕ್ ಆಗಿದೆ.

    ದೇವರಲ್ಲಿ ಪ್ರಾರ್ಥನೆ

    ದೇವರಲ್ಲಿ ಪ್ರಾರ್ಥನೆ

    ಈ ಕಡೆ ಶೈಲೂ ರೂಪದಲ್ಲಿರುವ ಚಾರುಗೆ ರಾಮಾಚಾರಿ ಆಸ್ಪತ್ರೆಯಿಂದಲೇ ಕರೆ ಮಾಡಿದ್ದಾನೆ. ಇದೇ ವೇಳೆ ಮಾತನಾಡುತ್ತಿರುವ ರಾಮಾಚಾರಿ ಚಾರುಲತಾ ಕಣ್ಣು ಬಂದರಷ್ಟೇ ಸಾಕು ಎಂದು ಶೈಲೂ ಬಳಿ ಹೇಳಿದ್ದಾನೆ. ಆಗ ಶೈಲೂ ಒಳ್ಳೆಯ ಮನಸ್ಸಿನಿಂದ ಬೇಡಿದರೆ ದೇವರು ಖಂಡಿತ ಒಳ್ಳೆಯದು ಮಾಡುತ್ತಾನೆ ಎಂದು ರಾಮಾಚಾರಿಗೆ ಧೈರ್ಯ ತುಂಬಿದ್ದಾಳೆ. ರಾಮಾಚಾರಿ ಚಾರುಲತಾಗೆ ಕಣ್ಣು ಬರಲಿ ಎಂದು ನೀವು ಪ್ರಾರ್ಥನೆ ಮಾಡಿಕೊಳ್ಳಿ ಎಂದು ಶೈಲು ಬಳಿ ಹೇಳಿ ಫೋನ್ ಕಟ್ ಮಾಡಿದ್ದಾನೆ.

    ರಾಮಾಚಾರಿಗೆ ಮಾನ್ಯತಾ ಕರೆ

    ರಾಮಾಚಾರಿಗೆ ಮಾನ್ಯತಾ ಕರೆ

    ಈ ಕಡೆ ರಾಮಾಚಾರಿಗೆ ಮಾನ್ಯತಾ ಕರೆ ಮಾಡಿ ಚಾರು ಎಲ್ಲಿದ್ದಾಳೆ ಇನ್ನೂ ಕೊಲ್ಕತ್ತಾದಿಂದ ಬರಲಿಲ್ಲವೇ. ನೀನು ಎಲ್ಲಿದ್ದೀಯ ಎಂದಿಲ್ಲ ಪ್ರಶ್ನೆ ಮಾಡಿದ್ದಾಳೆ. ಅದಕ್ಕೆ ರಾಮಾಚಾರಿ, ಚಾರುಲತಾ ಮೇಡಂ ಕೊಲ್ಕತ್ತಾದಲ್ಲಿ ಇದ್ದಾರೆ ಅವರಿಗೆ ಪ್ರಮೋಷನ್ ಆಗುವ ಸಂಭವವಿದೆ ಎಂದು ಹೇಗೋ ಮ್ಯಾನೇಜ್ ಮಾಡುತ್ತಾನೆ. ಆದರೆ ರಾಮಾಚಾರಿಗೆ ಮಾನ್ಯತಾ ಮಾತನಾಡುವ ರೀತಿಯಿಂದ ಅವರಿಗೆ ಅಲ್ಪಸ್ವಲ್ಪ ವಿಷಯ ಗೊತ್ತಾಗಿದೆ ಎಂದು ಎಣಿಸಿ ಸರಿ ಮೇಡಂ ನಾನು ನಂತರ ಕರೆ ಮಾಡುವೆ ಬ್ಯುಸಿ ಇದ್ದೇನೆ ಎಂದು ಫೋನ್ ಕಟ್ ಮಾಡಿದ್ದಾನೆ.

    ದೀಪಾ ಹರಕೆ

    ದೀಪಾ ಹರಕೆ

    ಚಾರು ನನಗೆ ಕಣ್ಣು ಬಂದರೆ ರಾಮಾಚಾರಿಗೆ ಐ ಲವ್ ಯು ಎಂದು ಹೇಳುತ್ತೇನೆ ಎಂದು ಕೇಳಿದ ದೀಪ ಚಾರುಲತಾ ಗೆ ಕಣ್ಣು ಬಾರದಂತೆ ಹರಕೆಯನ್ನ ಹೊತ್ತುಕೊಂಡಿದ್ದಾಳೆ. ದೇವರೇ ಪರಮೆಂಟಾಗಿ ಚಾರುಲತಾ ಗೆ ಕಣ್ಣು ಬಾರದಂತೆ ಮಾಡು ಎಂದು ದೇವರ ಬಡಿ ಬೇಡಿಕೊಂಡಿದ್ದಾಳೆ‌.

    ಚಾರುಲತಾಗೆ ಕಣ್ಣು ಬರುತ್ತಾ?

    ಚಾರುಲತಾಗೆ ಕಣ್ಣು ಬರುತ್ತಾ?

    ಈ ಕಡೆ ರಾಮಾಚಾರಿಯನ್ನು ನೋಡುವ ಸಂಭ್ರಮದಲ್ಲಿ ಚಾರುಲತಾ ಇದ್ದಾಳೆ. ಡಾಕ್ಟರ್ ಚಾರುಲತಾಗೆ ಇಂಜೆಕ್ಷನ್ ಕೊಟ್ಟು ಕಣ್ಣಿಗೆ ಬ್ಯಾಂಡೇಜ್‌ನ್ನು ಸುತ್ತಿದ್ದಾರೆ. ಇದೇ ವೇಳೆ ರಾಮಾಚಾರಿ ಬಳಿ ಬಂದ ಡಾಕ್ಟರ್‌ಗಳು ರಾಮಾಚಾರಿಗೆ ಬೈಯುತ್ತಿದ್ದಾರೆ. ಆ ಹುಡುಗಿಗೆ ಶೀತ ಆಗಬಾರದು ತಲೆಯ ಮೇಲೆ ನೀರು ಬೀಳಬಾರದು ಎಂದು ಹೇಳಿದರು ಸಹ ನೀವು ಎಡವಟ್ಟು ಮಾಡಿದ್ದೀರಾ ಇದರಿಂದ ಏನಾದರೂ ತೊಂದರೆಯಾದರೆ ಏನು ಮಾಡುವುದು ಎಂದು ಕೇಳುತ್ತಿದ್ದಾರೆ.

    English summary
    Ramachari Serial Written Update on January 20th Episode. Here is the details.
    Saturday, January 21, 2023, 20:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X