Don't Miss!
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Automobiles ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- News Annamalai: ಒಂದು ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಕಾಣೆಯಾಗಿದೆ: ಅಣ್ಣಾಮಲೈ ಆರೋಪ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಹಂಬಲ್ ಪೊಲಿಟಿಷಿಯನ್ ನಾಗರಾಜ್' ಚೆನ್ನಾಗಿಲ್ಲ ಅಂತಲ್ಲ. ಆದ್ರೆ...
Recommended Video
ಡ್ಯಾನಿಶ್ ಸೇಠ್ ನಟನೆಯ 'ಹಂಬಲ್ ಪೊಲಿಟಿಷಿಯನ್ ನಾಗರಾಜ್' ಸಿನಿಮಾ ಬಿಡುಗಡೆಗೂ ಮುನ್ನ ಸಿಕ್ಕಾಪಟ್ಟೆ ಕುತೂಹಲ ಸೃಷ್ಟಿಸಿತ್ತು. ಟ್ರೈಲರ್ ಮಾತ್ರದಿಂದಲೇ ಗಾಂಧಿನಗರದ ತುಂಬೆಲ್ಲ ಸದ್ದು ಮಾಡಿದ 'ಹಂಬಲ್ ಪೊಲಿಟಿಷಿಯನ್ ನಾಗರಾಜ್' ರಿಲೀಸ್ ಆದ್ಮೇಲೆ ಮಂಕಾಯಿತು.
ನಿರೀಕ್ಷಿಸಿದ ಮಟ್ಟಿಗೆ 'ಹಂಬಲ್ ಪೊಲಿಟಿಷಿಯನ್ ನಾಗರಾಜ್' ಸಿನಿಮಾ ಯಶಸ್ವಿ ಆಗಲಿಲ್ಲ. ಉತ್ತಮ ಓಪನ್ನಿಂಗ್ ಪಡೆದುಕೊಂಡರೂ ಕ್ರಮೇಣ ಬಾಕ್ಸ್ ಆಫೀಸ್ ನಲ್ಲಿ 'ಹಂಬಲ್ ಪೊಲಿಟಿಷಿಯನ್ ನಾಗರಾಜ್' ಕಲೆಕ್ಷನ್ ಡಲ್ ಆಯ್ತು.
ವಿಮರ್ಶಕರಿಂದಲೂ 'ಹಂಬಲ್ ಪೊಲಿಟಿಷಿಯನ್ ನಾಗರಾಜ್' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ರಾಜಕಾರಣಿಗಳನ್ನು ವಿಡಂಬನೆ ಮಾಡುವ ಈ ಚಿತ್ರದಲ್ಲಿ ಅಷ್ಟೇನೂ ನಗು ತರಿಸುವುದಿಲ್ಲ ಎಂದು ಹಲವರು ಕಾಮೆಂಟ್ ಮಾಡಿದ್ದರು.
ಅಸಲಿಗೆ, ಮೂರು ತಿಂಗಳ ಹಿಂದೆ ಅಂದ್ರೆ ಜನವರಿಯಲ್ಲಿ ಬಿಡುಗಡೆ ಆದ 'ಹಂಬಲ್ ಪೊಲಿಟಿಷಿಯನ್ ನಾಗರಾಜ್' ಚಿತ್ರದ ಬಗ್ಗೆ ನಾವು ಇಷ್ಟೆಲ್ಲ ಮಾತನಾಡಲು ಕಾರಣ ನಟ, ನಿರ್ದೇಶಕ ರಮೇಶ್ ಅರವಿಂದ್. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹವಾ ಕ್ರಿಯೇಟ್ ಮಾಡಿದ್ದ 'ಹಂಬಲ್ ಪೊಲಿಟಿಷಿಯನ್ ನಾಗರಾಜ್' ಬಗ್ಗೆ ರಮೇಶ್ ಅರವಿಂದ್ ಒಂದೆರಡು ಮಾತುಗಳನ್ನಾಡಿದ್ದಾರೆ. ಅದೇನು ಅಂತ ತಿಳಿಯಲು ಮುಂದೆ ಓದಿರಿ...
ಕೆಟ್ಟ ಸಿನಿಮಾ ಅಲ್ಲ.!
''ಹಂಬಲ್ ಪೊಲಿಟಿಷಿಯನ್ ನಾಗರಾಜ್' ಕೆಟ್ಟ ಸಿನಿಮಾ ಅಂತ ನಾನು ಹೇಳಲ್ಲ. ಆದ್ರೆ, ನಾನು ನಿರೀಕ್ಷೆ ಮಾಡಿದ ಲೆವೆಲ್ ಗೆ ಇರಲಿಲ್ಲ'' ಎಂದು ನಟ, ನಿರ್ದೇಶಕ ರಮೇಶ್ ಅರವಿಂದ್ ಹೇಳಿದ್ದಾರೆ. ಅದು ಶಿವಣ್ಣ ನಿರೂಪಣೆಯ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ.
'ಹಂಬಲ್ ಪೊಲಿಟಿಷಿಯನ್'ಗೆ ವಿಮರ್ಶಕರು ಕೊಟ್ಟ ಮತ ಎಷ್ಟು?
ರಮೇಶ್ ಗೆ ಶಿವಣ್ಣ ಕೇಳಿದ ಪ್ರಶ್ನೆ ಏನು?
'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ನಟ, ನಿರ್ದೇಶಕ ರಮೇಶ್ ಅರವಿಂದ್ ಅತಿಥಿಯಾಗಿ ಬಂದಿದ್ದರು. ಕಾರ್ಯಕ್ರಮದ ಮೊದಲನೇ ಸೆಗ್ಮೆಂಟ್ ನಲ್ಲಿ (ಸತ್ಯ ಅಥವಾ ಧೈರ್ಯ) ರಮೇಶ್ ಅರವಿಂದ್ ಸತ್ಯವನ್ನ ಆಯ್ಕೆ ಮಾಡಿಕೊಂಡರು. ಆಗ ಶಿವಣ್ಣ, ''ಯಾವುದಾದರೂ ಸಿನಿಮಾಗೆ ಹೋಗಿ, ಅರ್ಧದಲ್ಲೇ ಎದ್ದು ಬಂದಿರೋದು ಇದ್ಯಾ.?'' ಅಂತ ಪ್ರಶ್ನೆ ಮಾಡಿದರು.
'ಹಂಬಲ್ ಪೊಲಿಟಿಷಿಯನ್ ನಾಗರಾಜ್' ಚಿತ್ರದ ಟ್ರೇಲರ್ ಈಗ ಯೂ ಟ್ಯೂಬ್ ನಲ್ಲಿ ನಂ1
ರಮೇಶ್ ಕೊಟ್ಟ ಉತ್ತರ ಏನು.?
''ಎಷ್ಟೋ ಸಿನಿಮಾಗಳಿಗೆ ಹೋಗಿ ಅರ್ಧದಲ್ಲೇ ಎದ್ದು ಬಂದಿರೋದು ಇದೆ. ಅದರಲ್ಲೂ ಅಮಿತಾಬ್ ಬಚ್ಚನ್ ಅಭಿನಯದ 'ಝೂಮ್ ಬರಾಬರ್ ಝೂಮ್' ಚಿತ್ರಕ್ಕೆ ಹೋಗಿ ಅರ್ಧಕ್ಕೆ ಎದ್ದು ಬಂದೆ'' ಎಂದು ರಮೇಶ್ ಉತ್ತರಿಸಿದರು. ಆಗ ''ಕನ್ನಡದಲ್ಲಿ.?'' ಎಂದು ಶಿವಣ್ಣ ಮರು ಪ್ರಶ್ನಿಸಿದರು. ಆಗ ರಮೇಶ್ ಕೊಟ್ಟ ಉತ್ತರ....
ರಮೇಶ್ ಕೊಟ್ಟ ಉತ್ತರ ಏನು.?
''ನಾನು 'ಹಂಬಲ್ ಪೊಲಿಟಿಷಿಯನ್ ನಾಗರಾಜ್' ಚಿತ್ರ ನೋಡಿದೆ. ಆ ಸಿನಿಮಾದಲ್ಲಿ ತಪ್ಪೇನೂ ಇಲ್ಲ. ಚಿತ್ರ ಚೆನ್ನಾಗಿಲ್ಲ ಅಂತ ಹೇಳ್ತಿಲ್ಲ. ಆದ್ರೆ, ಅವರ ಸ್ಕ್ರಿಪ್ಟ್ ಕೇಳಿದಾಗ ಬಹಳ ಚೆನ್ನಾಗಿತ್ತು. ಆದ್ರೆ ತೆರೆಗೆ ತರುವಾಗ ಅದು ಎಲ್ಲೋ ಮಿಸ್ ಆಗಿದೆ ಅನಿಸ್ತು. 'ಹಂಬಲ್ ಪೊಲಿಟಿಷಿಯನ್ ನಾಗರಾಜ್' ಕೆಟ್ಟ ಸಿನಿಮಾ ಅಂತ ಹೇಳಲ್ಲ. ಆದ್ರೆ, ನಾನು ನಿರೀಕ್ಷೆ ಮಾಡಿದ ಲೆವೆಲ್ ಗೆ ಇಲ್ಲ ಅಂತ ಅನಿಸ್ತು'' ಎಂದರು ರಮೇಶ್ ಅರವಿಂದ್.