Don't Miss!
- News ಲೋಕಸಭಾ ಚುನಾವಣೆ: ಮೈಸೂರು ಜಿಲ್ಲೆಯಲ್ಲಿ ಭದ್ರತೆಗೆ 5 ಸಾವಿರ ಪೊಲೀಸರ ನಿಯೋಜನೆ
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬಾಹುಬಲಿ' ರೀತಿಯ ಒಂದು ಸಿನಿಮಾ ಮಾಡಬೇಕು ಎನ್ನುವುದು ರಮೇಶ್ ಕನಸು
ಇತ್ತೀಚಿಗಷ್ಟೆ ಸ್ಟಾರ್ ಸುವರ್ಣ ವಾಹಿನಿಯ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ರಮೇಶ್ ಬಂದಿದ್ದರು. ಈ ವೇಳೆ ರಮೇಶ್ ತಮ್ಮ ಅನೇಕ ವಿಷಯಗಳನ್ನು ಹಂಚಿಕೊಂಡರು. ಜೊತೆಗೆ ತಮ್ಮ ಕನಸುಗಳ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಿವಣ್ಣ ''ರಮೇಶ್ ನಿಮಗೆ ಇನ್ನೂ ಈಡೇರದ ಕನಸು ಯಾವುದು? ಎಂದು ಪ್ರಶ್ನೆ ಕೇಳಿದರು.
ಶಂಕರ್ ನಾಗ್ ಕನಸುಗಳು ಆಕಾಶದ ಆಚೆಗೆ ಇತ್ತು ಎಂದರು ರಮೇಶ್
ಶಿವಣ್ಣನ ಪ್ರಶ್ನೆಗೆ ಉತ್ತರಿಸಿದ ರಮೇಶ್, ''ನನಗೆ ಏನು ಸಾಮರ್ಥ್ಯ ಇದೆ ಅದೆಲ್ಲವನ್ನು ಮಾಡಬೇಕು ಅಂತ ಇದ್ದೇನೆ. ನನಗೆ ಸಿಕ್ಕ ಕೆಲಸವನ್ನು ಎಷ್ಟು ಚೆನ್ನಾಗಿ ಆಗುತ್ತದೆಯೋ ಅಷ್ಟು ಚೆನ್ನಾಗಿ ಮಾಡಬೇಕು ಎಂಬ ಆಸೆ ಇದೆ. ನನಗೆ ಅದು ಬೇಕು ಇದು ಬೇಕು ಎನ್ನುವ ಆಸೆ ಹೆಚ್ಚು ಇಲ್ಲ. ನನ್ನ ಕೈಗೆ ಸಿಕ್ಕಿದನ್ನು ಫರ್ಫೆಕ್ಟ್ ಆಗಿ ಮಾಡುತ್ತೇನೆ. ಆದರೆ ಜೀವದಲ್ಲಿ ಮಾಡಬೇಕು ಎನ್ನುವ ವಿಷಯ ಹಲವು ಇದೆ.''
''ಒಂದು ಸ್ಟಾಂಡಪ್ ಕಾಮಿಡಿ ಮಾಡಬೇಕು ಅಂತ ಇದ್ದೇನೆ, ಲಯನ್ ಕಿಂಗ್ ರೀತಿಯ ಒಂದು ದೊಡ್ಡ ಮ್ಯಾಸಿಕ್ ಕಾರ್ಯಕ್ರಮವನ್ನು ಡೈರೆಕ್ಟ್ ಮಾಡಬೇಕು. ಅದು ಬಿಟ್ಟರೆ, ನ್ಯಾಷನಲ್ ಲೆವೆಲ್ ನಲ್ಲಿ ಸುದ್ದಿ ಮಾಡುವ ಒಂದು ಸಿನಿಮಾ ಮಾಡಬೇಕು ಅಂತ ಇದ್ದೇ. ನಾವು 'ಬಾಹುಬಲಿ' ಸಿನಿಮಾವನ್ನು ಮ್ಯಾಚ್ ಮಾಡಬೇಕು. ಆ ಮಟ್ಟದ ಒಂದು ಸಿನಿಮಾವನ್ನು ಕನ್ನಡದಲ್ಲಿ ನಾವು ಮಾಡೋಣ ಶಿವು.'' ಎಂದರು ರಮೇಶ್.
ಆಗ ಶಿವಣ್ಣ ''ನನ್ನನ್ನು ಆ ಸಿನಿಮಾದಲ್ಲಿ ಹಾಕಿಕೊಳ್ಳಿ, ಮಹಾಭಾರತ ಮಾಡಿದರೆ ನಾನು ಯಾವ ಪಾತ್ರ ಮಾಡಬಹುದು'' ಎಂದು ಕೇಳಿದರು. ''ನೀವು ಕರ್ಣ ಪಾತ್ರ ಮಾಡಬೇಕು. ನೀವು ಒಬ್ಬ ಸ್ನೇಹಿತ, ನೀವು ಸ್ನೇಹವನ್ನು ಪ್ರತಿನಿಧಿಸುತ್ತೀರಾ'' ಎಂಬ ಉತ್ತರ ರಮೇಶ್ ಕಡೆಯಿಂದ ಬಂತು.