Don't Miss!
- News Gold Price: ಇಂದು ಮತ್ತಷ್ಟು ಹೆಚ್ಚಾದ ಬಂಗಾರದ ಬೆಲೆ: ಬೆಳ್ಳಿಯೂ ಬಲು ದುಬಾರಿ
- Technology AI Camera: ಎಐ ಕ್ಯಾಮೆರಾ ಆಯ್ಕೆ ಇರುವ ಅತ್ಯುತ್ತಮ ಸ್ಮಾರ್ಟ್ಫೋನ್ಗಳಿವು! ಬೆಲೆ ಎಷ್ಟು ?
- Sports IPL 2024: RCB vs KKR ಹೆಡ್-ಟು-ಹೆಡ್ ದಾಖಲೆ, ಪಿಚ್ ವರದಿ; ಚಿನ್ನಸ್ವಾಮಿಯಲ್ಲಿ ಗೆಲುವು ಯಾರಿಗೆ?
- Finance ವಿವಿಧ ರಾಜ್ಯಗಳ ನರೇಗಾ ಕಾರ್ಮಿಕರ ವೇತನ ದರ ಪರಿಷ್ಕರಣೆ, ವಿವರ
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೋಟ್ಯಾಧಿಪತಿಯಲ್ಲಿ ರವಿಚಂದ್ರನ್ ಅಂತರಂಗ ಬಹಿರಂಗ
ಚಿರಂಜೀವಿ ಅವರಿಗೆ ಫೋನ್ ಮಾಡಿ ಚಿತ್ರದಲ್ಲಿ ಅತಿಥಿ ಪಾತ್ರ ಮಾಡುವಂತೆ ಕೇಳಿದರಂತೆ. ಅದಕ್ಕೆ ಕೂಡಲೆ ಒಪ್ಪಿದ ಚಿರು ಎಷ್ಟು ದಿನ ಬೇಕು ಎಂದರಂತೆ. ಹದಿನೈದು ದಿನ ಕಾಲ್ಶೀಟ್ ಬೇಕು ಎಂದ ರವಿಗೆ ಅತಿಥಿ ಪಾತ್ರ ಎಂದರೆ ಮೂರು ದಿನ ಅಷ್ಟೇ ಅಲ್ವಾ. ಇಷ್ಟೊಂದು ಟೈಮ್ ಯಾಕೆ ಎಂದರಂತೆ. ಅಷ್ಟು ದಿನ ಬೇಕೆ ಬೇಕು ಸಾರ್ ನನಗೆ ಎಂದರಂತೆ.
ಸರಿ ಆಯ್ತು ಬರ್ತೀನಿ ಎಂದ ಚಿರಂಜೀವಿ ಅವರ ಸಂಭಾವನೆ ಕೇಳಿದರಂತೆ. ಅದಕ್ಕೆ ಚಿರು, ನೀನು ಎಷ್ಟು ಕೊಟ್ಟರೂ ತೆಗೆದುಕೊಳ್ಳುತ್ತೇನೆ ಎಂದರಂತೆ. ಬಳಿಕ ಒಮ್ಮೆ ರಜನಿಕಾಂತ್ ಅವರು ರವಿಚಂದ್ರನ್ ಅವರ ಮನೆಗೆ ಬಂದು ನೀನು ಸಂಗೀತ ನಿರ್ದೇಶನ ಮಾಡುವುದು ಸರಿಯಿಲ್ಲ. ಬಿಟ್ ಬಿಡೋ ನಿನಗೆ ಇದೆಲ್ಲಾ ಬೇಡ ಎಂದರಂತೆ.
ಇಲ್ಲಾ ಸಾರ್ ನಾನು ಯಾವುದೇ ಕಾರಣಕ್ಕೂ ಬಿಡಲ್ಲ. ಈ ದಾರಿಯಲ್ಲಿ ತುಂಬಾ ದೂರ ಬಂದಿದ್ದೇನೆ. ಈಗೀಗ ಇದು ಏನು ಎಂದು ಅರ್ಥವಾಗ ತೊಡಗಿದೆ. ಈಗ ಬಿಟ್ಟುಬಿಡು ಎಂದರೆ ಸಾಧ್ಯವಿಲ್ಲ ಎಂದರಂತೆ. ನಿನ್ನ ಸಂಗೀತವನ್ನು ಜನ ಇಷ್ಟಪಡ್ತಾ ಇಲ್ವೋ ಅದಕ್ಕೆ ಹೇಳ್ತಾ ಇದ್ದೀನಿ ಎಂದು ರಜನಿ ವಿನಂತಿಸಿಕೊಂಡರಂತೆ.
ಸರಿ ಈಗ ಒಂದು ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದೇನೆ ಕೇಳು. ನಿನಗೆ ಇಷ್ಟವಿಲ್ಲ ಎಂದರೆ ಈಗಲೇ ಬಿಟ್ಟು ಬಿಡ್ತೇನೆ ಎಂದರಂತೆ ರವಿ. ಸರಿ ನಡಿ ಎಂದು ಹಾಡು ಕೇಳಿ ರಜನಿ ಎದ್ದು ಹೊರಟು ಬಿಟ್ಟರಂತೆ. ಬಳಿಕ ಯಾರದೋ ಕೈಯಲ್ಲಿ ಹೇಳಿಕಳಿಸಿದರಂತೆ. ಅವನ ಹಾಡು, ಸಂಗೀತ ತುಂಬಾ ಚೆನ್ನಾಗಿತ್ತು. ಚೆನ್ನಾಗಿಲ್ಲ ಎಂದು ಹೇಗೆ ಹೇಳಲಿ ಎಂದರಂತೆ.
ಬಳಿಕ ರವಿಚಂದ್ರನ್ ಮಾತನಾಡುತ್ತಾ ಇದುವರೆಗೂ ನಾನು ಕಣ್ಣೀರಿಟ್ಟಿದ್ದು ಎರಡೇ ವಿಷಯಕ್ಕೆ. ಒಂದು 'ಏಕಾಂಗಿ' ಚಿತ್ರದ ಸೋಲು. ಆ ಚಿತ್ರ ಯಾಕೆ ಸೋತಿತು ಎಂದು ಅರ್ಥ ಮಾಡಿಕೊಳ್ಳಲು ನಾನು ಆರು ತಿಂಗಳು ಮನೆ ಬಿಟ್ಟು ಕದಲಲಿಲ್ಲ. ಯಾಕೆ ಎಂದು ಅರ್ಥವಾಗಲಿಲ್ಲ.
ಈಗಲೂ ಅಷ್ಟೇ ನಮ್ಮ ಮನೆಯಲ್ಲಿ ಏಕಾಂಗಿ ಚಿತ್ರದ ಸಿಡಿ, ಹಾಡಾಗಲಿ ಏನೂ ಹಾಕುವುದಿಲ್ಲ. ಅಷ್ಟೊಂದು ಕೆಟ್ಟ ಪ್ರಭಾವ ಬೀರಿದೆ ಆ ಸಿನಿಮಾ ನನ್ನ ಜೀವನದಲ್ಲಿ ಎಂದರು. ಬಳಿಕ ಕಣ್ಣೀರಿಟ್ಟದ್ದು ಆಗಿನ ಕಾಲದಲ್ಲೇ ನಾಲ್ಕುವರೆ ಕೋಟಿ ಖರ್ಚು ಮಾಡಿದ್ದ 'ಶಾಂತಿ ಕ್ರಾಂತಿ' ಚಿತ್ರದ ಸೋಲು ಎಂದರು.
ಇದೇ ಸಂದರ್ಭದಲ್ಲಿ 'ಮಂಜಿನ ಹನಿ' ಚಿತ್ರದ ಬಗ್ಗೆಯೂ ಮಾತನಾಡಿದರು. 'ಮಂಜಿನ ಹನಿ' ಚಿತ್ರದ ಟ್ರೇಲರ್ನ್ನೂ ಶೋನಲ್ಲಿ ತೋರಿಸಲಾಯಿತು. ಇದೊಂದು ಪಕ್ಕಾ ಮಾಸ್ ಸಿನಿಮಾ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಇಲ್ಲೂ ರವಿಚಂದ್ರನ್ ಉದ್ದಕ್ಕೆ ಕೂದಲು ಬಿಟ್ಟುಕೊಂಡಿರುವುದು ಅವರ ಅಭಿಮಾನಿಗಳಿಗೆ ಮತ್ತೆ ನಿರಾಶೆ ಮೂಡಿಸಿತು.
ಈ ಬಗ್ಗೆ ಮಾತನಾಡಿದ ರವಿಚಂದ್ರನ್, ಚಿತ್ರದ ಟೈಟಲ್ 'ಮಂಜಿನ ಹನಿ' ಎಂದರೆ ಎಲ್ಲರೂ ಇದೊಂದು ಪಕ್ಕಾ ಪ್ರೇಮ ಕತೆ ಎಂದು ತಿಳಿದುಕೊಳ್ಳುತ್ತಾರೆ. ಆದರೆ ಮಂಜಿನಹನಿ ಎಂದರೆ ಮರಗಟ್ಟಿದ ಹೃದಯಗಳು ಮಂಜಿನಂತೆ ಕರಗಿ ನೀರಾಗಲಿ ಎಂಬುದು ಎಂದು ವಿವರಣೆ ನೀಡಿದರು. ಅಂದಹಾಗೆ ಈ ಶೋನಲ್ಲಿ ಗೆದ್ದ ಅಷ್ಟೂ ಹಣವನ್ನು ರವಿಚಂದ್ರನ್ ದಾನವಾಗಿ ನೀಡಲಿದ್ದಾರೆ. (ಒನ್ಇಂಡಿಯಾ ಕನ್ನಡ)