Don't Miss!
- Sports SRH vs MI IPL Match: ಹೈಲೈಟ್ಸ್ ನಂತೆ ಕಂಡ ಲೈವ್ ಮ್ಯಾಚ್: ಮುತ್ತಿನ ನಗರಿಯಲ್ಲಿ ಆರ್ಭಟಿಸಿ ಇತಿಹಾಸದ ಪುಟ ಸೇರಿದ SRH
- Lifestyle ಬೆಂಗಳೂರಿಗರೇ... ನೀರಿನ ಕೊರತೆ ತಪ್ಪಿಸಲು ಈ ಟ್ರಿಕ್ಸ್ ಹಾಗೂ ಟಿಪ್ಸ್ ತುಂಬಾನೇ ಪ್ರಯೋಜನಕಾರಿಯಾಗಿದೆ ನೋಡಿ
- News Chitradurga Lok Sabha Constituency: ಚಿತ್ರದುರ್ಗ ಬಿಜೆಪಿ ಅಭ್ಯರ್ಥಿ ರಾಜಕೀಯ ಹಿನ್ನೆಲೆ ತಿಳಿಯಿರಿ-ಮಾಹಿತಿ, ವಿವರ
- Finance ಐಟಿಆರ್ ಸಲ್ಲಿಸಿದ್ದರೂ, ಆದಾಯ ತೆರಿಗೆ ಇಲಾಖೆಯಿಂದ ನಿಮಗೆ ಇಮೇಲ್ ಬಂದಿದೆಯೇ?
- Automobiles ಜಿಮ್ನಿಗೆ ಸೆಡ್ಡು ಹೊಡೆಯಲು ಎಂಜಿ ಮಾಸ್ಟರ್ ಪ್ಲಾನ್: ಸದ್ಯದಲ್ಲೇ ಕಾಮೆಟ್ ಆಧರಿಸಿ 5 ಡೋರ್ ಕಾರು ಭಾರತಕ್ಕೆ?
- Technology ರೆಡ್ಮಿಯ ಈ ಮೊಬೈಲ್ಗೆ ಇರುವ ಬಿಗ್ ಆಫರ್ ತಿಳಿದ್ರೆ, ಖಂಡಿತಾ ವಾವ್ ಅಂತೀರಾ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡಾ ರಾಜ್ ಎರಡನೇ ಪುತ್ರನಿಗೆ 'ರಾಘವೇಂದ್ರ' ಎಂದು ಹೆಸರಿಡಲು ಕಾರಣವೇನು?
Recommended Video
ಡಾ ರಾಜ್ ಕುಮಾರ್ ಮೂವರು ಮಕ್ಕಳಲ್ಲಿ ಎರಡನೇಯವರು ರಾಘವೇಂದ್ರ ರಾಜ್ ಕುಮಾರ್. ಮೊದಲನೇ ಮಗ ಶಿವರಾಜ್ ಕುಮಾರ್ ಹಾಗೂ ಕೊನೆಯ ಪುತ್ರ ಪುನೀತ್ ರಾಜ್ ಕುಮಾರ್. ಲಕ್ಷ್ಮಿ ಮತ್ತು ಪೂರ್ಣಿಮಾ ಎಂಬ ಹೆಣ್ಣು ಮಕ್ಕಳು ಇದ್ದಾರೆ.
ದ್ವಿತೀಯ ಪುತ್ರನಿಗೆ ರಾಘವೇಂದ್ರ ರಾಜ್ ಕುಮಾರ್ ಎಂದು ಹೆಸರಿಡಲಾಗಿದೆ. ಇವರನ್ನ ಪ್ರೀತಿಯಿಂದ ಎಲ್ಲರೂ ರಾಘಣ್ಣ ಎಂದು ಕರೆಯುತ್ತಾರೆ. ರಾಘಣ್ಣ ಅವರಿಗೆ ರಾಘವೇಂದ್ರ ಎಂದು ಹೆಸರಿಡಲು ಒಂದು ವಿಶೇಷವಾದ ಕಾರಣವಿದೆ.
'ನಂಜುಂಡಿ ಕಲ್ಯಾಣ' ಸಿನಿಮಾ ನೋಡಿ ರಾಘಣ್ಣನ ಪತ್ನಿ ಸಿಟ್ಟಾಗಿದ್ದೇಕೆ?
ಈ ಹೆಸರಿನ ಹಿಂದಿರುವ ಕಥೆಯನ್ನ ಹಿರಿಯ ನಿರ್ದೇಶಕ ಭಗವಾನ್ ಮತ್ತು ಹಿರಿಯ ನಟಿ ಜಯಂತಿ ಅವರು ಬಿಚ್ಚಿಟ್ಟಿದ್ದಾರೆ. ಅಷ್ಟಕ್ಕೂ, ಡಾ ರಾಜ್ ಪುತ್ರನಿಗೆ ಆ ರಾಘವೇಂದ್ರ ಸ್ವಾಮಿಯ ಹೆಸರಿಡಲು ಕಾರಣವೇನು? ಮುಂದೆ ಓದಿ.....
ಅದು ಮಂತ್ರಾಲಯ ಮಹಾತ್ಮೆ ಚಿತ್ರೀಕರಣದ ಸಮಯ
ಆಗ 'ಮಂತ್ರಾಲಯ ಮಹಾತ್ಮೆ' ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಟಿವಿ ಸಿಂಗ್ ಠಾಕೂರ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದರು. ರಾಜ್ ಕುಮಾರ್, ಉದಯ್ ಕುಮಾರ್, ಜಯಂತಿ, ಕಲ್ಪನ ನಟಿಸುತ್ತಿದ್ದರು. ಆ ಸಂದರ್ಭದಲ್ಲಿ ಹುಟ್ಟಿದವರೇ ರಾಘಣ್ಣ.
ರಾಘವೇಂದ್ರ ಸ್ವಾಮಿ ಪ್ರಸಾದ
ಈ ಹುಡುಗನಿಗೆ ಏನು ಹೆಸರಿಡಬೇಕು ಎಂಬ ಚಿಂತೆಯಲ್ಲಿ ಅಣ್ಣಾವ್ರು ಇದ್ದರು. ರಾಯರ ಪ್ರಸಾದ ಆಗಿದ್ದರಿಂದ ರಾಘವೇಂದ್ರ ಎಂದು ಹೆಸರಿಡುವುದು ಸೂಕ್ತ ಮತ್ತು ಶ್ರೇಯಸ್ಸು ಎಂದು ನಿರ್ಧರಿಸಿ ಆ ಹೆಸರಿಟ್ಟರಂತೆ.
''ನನ್ನ ಆಯಸ್ಸನ್ನೂ ಅವನಿಗೆ ನೀಡಲಿ'' ಎಂದ ಶಿವಣ್ಣ : ಭಾವುಕರಾದ ರಾಘಣ್ಣ ದಂಪತಿ
ಜಯಂತಿ ಪಾಲಿಗೆ ಇವರು 'ಬೆಟ್ಟದ ಹುಲಿ'
ಹಿರಿಯ ನಟಿ ಜಯಂತಿ ಪಾಲಿಗೆ ರಾಘವೇಂದ್ರ ರಾಜ್ ಕುಮಾರ್ ಬೆಟ್ಟದ ಹುಲಿ. ಯಾಕಂದ್ರೆ, ಮಂತ್ರಾಲಯ ಮಹಾತ್ಮೆ ಸಿನಿಮಾ ಮತ್ತು ಬೆಟ್ಟದ ಹುಲಿ ಸಿನಿಮಾಗಳ ಚಿತ್ರೀಕರಣ ಅದೇ ಅಂತರದಲ್ಲಿ ನಡೆಯುತ್ತಿತ್ತು. ರಾಘಣ್ಣ ಜನನವಾದ ದಿನ ಬೆಟ್ಟದ ಹುಲಿ ಸೆಟ್ ನಲ್ಲಿ ರಾಜ್ ಇದ್ದರಂತೆ. ಹಾಗಾಗಿ, ಜಯಂತಿ ಈ ಹುಡುಗನಿಗೆ ಬೆಟ್ಟದ ಹುಲಿ ಎಂದು ಕರೆಯಲು ಇಷ್ಟಪಡುತ್ತಿದ್ದರು. ಈಗಲೂ ರಾಘಣ್ಣ ಅವರನ್ನ ಬೆಟ್ಟದ ಹುಲಿ ಎಂದೇ ಕರೆಯುತ್ತಾರೆ.
ಆಗಸ್ಟ್ 15ಕ್ಕೆ ಹುಟ್ಟಿದ ರಾಘಣ್ಣ
1965 ಅಗಸ್ಟ್ 15 ರಂದು ರಾಘವೇಂದ್ರ ರಾಜ್ ಕುಮಾರ್ ಹುಟ್ಟಿದರು. ವಿಶೇಷ ಅಂದ್ರೆ ಸ್ವಾತಂತ್ರ್ಯ ದಿನಾಚರಣೆಯೂ ಹೌದು. ಚೆನ್ನೈನ ಕಲ್ಯಾಣಿ ಆಸ್ಪತ್ರೆಯಲ್ಲಿ ಇವರ ಜನನವಾಯಿತು.