Don't Miss!
- Finance mukesh ambaniಗೆ 67 ವರ್ಷ, ಅವರು ಹೊಂದಿರುವ ದುಬಾರಿ ವಸ್ತುಗಳು ಏನೇನು ಗೊತ್ತಾ?
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾಳಿಕಾ ಶ್ರೀ ಎಂಟ್ರಿ, ಬಿಗ್ ಬಾಸ್ ಮನೆಯಲ್ಲಿ ತಳಮಳ!
ಬಳಿಕ ಬಂದರು ನೋಡಿ ಕಾಳಿಕಾ ಮಠದ ಋಷಿಕುಮಾರ ಸ್ವಾಮೀಜಿ. ಅವರನ್ನು ಪಲ್ಲಕ್ಕಿಯಲ್ಲಿ ಹೊತ್ತುಕೊಂಡು ಬಂದು ಬಿಗ್ ಬಾಸ್ ಮನೆಯಲ್ಲಿ ಬಿಡಲಾಯಿತು. ಜೊತೆಗೆ ಬ್ಯಾಕ್ ಗ್ರೌಂಡ್ ಮ್ಯೂಸಿಕ್ "ಚೆಲ್ಲಿದರು ಮಲ್ಲಿಗೆಯಾ ಬಾಣಾಸುರ್ ಏರಿಮ್ಯಾಲೆ..ಅಂದದ ಚೆಂದದ ಮಾಯಕಾರ ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯಾ..."
ಬಿಗ್ ಬಾಸ್ ಮನೆಗೆ ಬಂದವರು ಕಾಳಿಕಾ ಮಠದ ಸ್ವಾಮೀಜಿ ಎಂದು ಗೊತ್ತಾಗುತ್ತಿದ್ದಂತೆ ಸ್ವಲ್ಪ ಡಲ್ ಆದಂತೆ ಕಂಡವರು ಬ್ರಹ್ಮಾಂಡ ಖ್ಯಾತಿಯ ನರೇಂದ್ರ ಬಾಬು ಶರ್ಮಾ. ಕಾಳಿಕಾ ಮಠ ಶ್ರೀಗಳನ್ನು ನೋಡಿ ಉಳಿದವರು ಕೊಂಚ ತಡಬಡಾಯಿಸಿದರು.
ಬಳಿಕ ಅವರಿಗೆ ಮನೆಯ ಪರಿಚಯ ಮಾಡಿಕೊಡಲಾಯಿತು. ಎಲ್ಲರೂ ಅವರ ಬಗ್ಗೆ ಗುಸುಗುಸು ಎಂದು ಮಾತನಾಡಿಕೊಂಡರು. ಮನೆಯಲ್ಲಿ ಇನ್ನೇನು ಅವಾಂತರ ಕಾದಿದೆಯೋ ಏನೋ ಎಂದು ಒಬ್ಬರ ಮುಖ ಒಬ್ಬರು ನೋಡಿಕೊಂಡರು.
ಅಯ್ಯೋ ಈ ಸ್ವಾಮೀಜಿ ಯಾಕಪ್ಪಾ ಇಲ್ಲಿಗೆ ಬಂದ. ಬಹುಶಃ ಇವರಿಗೆ ಸ್ವೀಟ್ ಹುಡುಗಿಯರು ಬೇಕಾಗಿತ್ತು ಎನ್ನಿಸುತ್ತದೆ. ಅದಕ್ಕೆ ಬಿಗ್ ಬಾಸ್ ಮನೆಗೆ ಬಂದಿದ್ದಾನೆ ಎಂದು ಕಾಮೆಂಟ್ ಮಾಡಿದವರು ತಾರೆ ನಿಖಿತಾ.
ಆದರೆ ಕಾಳಿಕಾ ಮಠದ ಸ್ವಾಮೀಜಿ ಬಗ್ಗೆ ಅದೂ ಇದೂ ಹೇಳಿ ಉಳಿದ ಸ್ಪರ್ಧಿಗಳನ್ನು ಬೆಚ್ಚಿ ಬೀಳಿಸಿದ್ದು ಮಾತ್ರ ನರೇಂದ್ರ ಬಾಬು ಶರ್ಮಾ. ಅಯ್ಯೋ ಅವನು ಕೊಡುವ ವಿಭೂತಿ, ಪ್ರಸಾದ ಯಾರೂ ತಗೋಬೇಡಿ. ಅವನು ಸರಿ ಇಲ್ಲ. ವಾಮಾಚಾರ ಅದೂ ಇದೂ ಮಾಡ್ತಾನೆ ಎಂದು ಮೊದಲೇ ಭಯದಿಂದ ತತ್ತರಿಸುತ್ತಿದ್ದವರ ಮೇಲೆ ಹಗ್ಗ ಎಸೆದಂತಾಯಿತು.