Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅನುಪಮಾ ಬದಲು 'ಕನ್ನಡ ಕೋಗಿಲೆ ಸೀಸನ್ 2'ಗೆ ಹೊಸ ಆಂಕರ್
ಕನ್ನಡ ಕಿರುತೆರೆಯಲ್ಲಿ ಪ್ರಸಾರ ಆಗುತ್ತಿರುವ ಗಾಯನ ಕಾರ್ಯಕ್ರಮಗಳಲ್ಲಿ ಕಲರ್ಸ್ ಕನ್ನಡ ವಾಹಿನಿಯ 'ಕನ್ನಡ ಕೋಗಿಲೆ' ಕೂಡ ಒಂದು. ಈಗಾಗಲೇ ಮೊದಲ ಸೀಸನ್ ಅನ್ನು ಯಶಸ್ವಿಯಾಗಿ ಮುಗಿಸಿದ ಈ ಕಾರ್ಯಕ್ರಮ ಮತ್ತೆ ಶುರು ಆಗುತ್ತಿದೆ.
'ಕನ್ನಡ ಕೋಗಿಲೆ ಸೀಸನ್ 2' ಕಾರ್ಯಕ್ರಮ ಪ್ರಾರಂಭ ಆಗುತ್ತಿದೆ. ಸೀಸನ್ 2 ನಲ್ಲಿ ಕಾರ್ಯಕ್ರಮದ ನಿರೂಪಕಿಯನ್ನು ಬದಲಾವಣೆ ಮಾಡಲಾಗಿದೆ. ನಟಿ ಅನುಪಮ ಬದಲಿಗೆ ಆರ್ ಜೆ ಸಿರಿ ಕಾರ್ಯಕ್ರಮವನ್ನು ಮುನ್ನೆಡೆಸಲಿದ್ದಾರೆ.
ಅನುಶ್ರೀಯ ಫೇವರೇಟ್ ಅಂಕರ್ ಯಾರು ಗೊತ್ತೆ?
ಧಾರಾವಾಹಿ ಹಾಗೂ ಕೆಲ ಚಿತ್ರಗಳಲ್ಲಿ ನಟಿಸಿದ್ದ ಅನುಪಮ ಬಿಗ್ ಬಾಸ್ ಗೆ ಎಂಟ್ರಿ ಪಡೆದಿದ್ದರು. ಅದರ ಬಳಿಕ ಅವರಿಗೆ 'ಕನ್ನಡ ಕೋಗಿಲೆ' ಬಾಗಿಲು ತೆರೆಯಿತು. ಮೊದಲ ಸೀಸನ್ ನಲ್ಲಿ ಅನುಪಮ ನಿರೂಪಣೆಯ ಜವಾಬ್ದಾರಿ ತೆಗೆದುಕೊಂಡಿದ್ದರು.
ಆದರೆ, ಈ ಬಾರಿ ಕಾರ್ಯಕ್ರಮದ ಅಂಕರ್ ಅನ್ನು ಬದಲಾವಣೆ ಮಾಡಿರುವ ವಾಹಿನಿ ಆ ಜಾಗಕ್ಕೆ ಆರ್ ಜೆ ಸಿರಿ ಅವರನ್ನು ಆಯ್ಕೆ ಮಾಡಿದೆ. ರೇಡಿಯೋ ಜಗತ್ತಿನಲ್ಲಿ ಹೆಸರು ಮಾಡಿರುವ ಸಿರಿ ಕೆಲ ನಾಟಕಗಳಲ್ಲಿಯೂ ನಟಿಸಿದ್ದಾರೆ. ಇವುಗಳ ನಂತರ 'ಕನ್ನಡ ಕೋಗಿಲೆ ಸೀಸನ್ 2' ಕಾರ್ಯಕ್ರಮಕ್ಕೆ ಅವರು ಎಂಟ್ರಿ ಪಡೆದಿದ್ದಾರೆ.
'ಕನ್ನಡ ಕೋಗಿಲೆ ಸೀಸನ್ 2' ಕಾರ್ಯಕ್ರಮ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರ ಆಗಲಿದೆ. ಮಾರ್ಚ್ 23 ರಿಂದ ಈ ಕಾರ್ಯಕ್ರಮ ಗ್ರಾಂಡ್ ಓಪನಿಂಗ್ ಆಗುತ್ತಿದೆ. ಈ ಬಾರಿಯೂ ಸಂಗೀತ ನಿರ್ದೇಶಕ ಸಾಧು ಕೋಕಿಲ, ಗಾಯಕಿ ಅರ್ಚನಾ ಶರ್ಮಾ ಹಾಗೂ ಗಾಯಕ ಚಂದನ್ ಶೆಟ್ಟಿ ಕಾರ್ಯಕ್ರಮದ ತೀರ್ಪುಗಾರರಾಗಿದ್ದಾರೆ.