twitter
    For Quick Alerts
    ALLOW NOTIFICATIONS  
    For Daily Alerts

    ರಾಮಕೃಷ್ಣ ಆಶ್ರಮದ ಮುಂದೆ ಕಾಫಿ, ಟೀ ಮಾರಿದ ಅಜಯ್ ರಾವ್

    |

    Recommended Video

    ಬೆಂಗಳೂರಿನ ರಾಮಕೃಷ್ಣ ಆಶ್ರಮದ ಮುಂದೆ ಟೀ ಕಾಫೀ ಮಾರಾಟ ಮಾಡಿದ ಅಜಯ್ ರಾವ್ | FILMIBEAT KANNADA

    'ತಾಯಿಗೆ ತಕ್ಕ ಮಗ' ಚಿತ್ರದಲ್ಲಿ ಆಂಗ್ರಿ ಯಂಗ್ ಮ್ಯಾನ್ ನಂತೆ ಅಬ್ಬರಿಸಿದ್ದ 'ಕೃಷ್ಣ' ಅಜಯ್ ರಾವ್ ಇದೀಗ ರಾಮಕೃಷ್ಣ ಆಶ್ರಮದ ಮುಂದೆ ಕಾಫಿ/ಟೀ ಮಾರಿದ್ದಾರೆ.

    ಓ.. ಇದು ಯಾವುದೋ ಚಿತ್ರದ ಚಿತ್ರೀಕರಣ ಇರಬೇಕು ಅಂತ ಭಾವಿಸಬೇಡಿ. ಅಜಯ್ ರಾವ್ 'ಕ್ಯಾಮರಾ ಮುಂದೆ' ಕಾಫಿ ಮತ್ತು ಟೀ ಮಾರಾಟ ಮಾಡಿರಬಹುದು. ಆದ್ರೆ, ಕೇವಲ 'ಶೂಟಿಂಗ್'ಗಾಗಿ ಅಲ್ಲ... ಒಬ್ಬರ ಒಳಿತಿಗಾಗಿ.!

    ಹೌದು, ಓರ್ವ ಹುಡುಗನ ವಿದ್ಯಾಭ್ಯಾಸಕ್ಕಾಗಿ ನಟ ಅಜಯ್ ರಾವ್ ಒಂದು ದಿನದ ಮಟ್ಟಿಗೆ ಕಾಫಿ, ಟೀ ಸೇಲ್ ಮಾಡಿದ್ದಾರೆ. ಅದು ಉದಯ ಟಿವಿಯ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದ ಮೂಲಕ. ಮುಂದೆ ಓದಿರಿ...

    ಈ ವಾರದ ಅತಿಥಿ

    ಈ ವಾರದ ಅತಿಥಿ

    'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದ ಕಳೆದ ಸಂಚಿಕೆಯಲ್ಲಿ ನಟಿ ಹರಿಪ್ರಿಯಾ ರೈತ ಕುಟುಂಬಕ್ಕಾಗಿ ಫ್ರೂಟ್ ಸಲಾಡ್ ಮಾರಾಟ ಮಾಡಿದ್ದರು. ಇದೀಗ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದ ಅತಿಥಿಯಾಗಿ ನಟ ಅಜಯ್ ರಾವ್ ಭಾಗವಹಿಸಿದ್ದಾರೆ.

    ಫುಟ್ ಪಾತ್ ಮೇಲೆ ಪ್ರೂಟ್ ಸಲಾಡ್ ಮಾರಿದ ನಟಿ ಹರಿಪ್ರಿಯಾ ಫುಟ್ ಪಾತ್ ಮೇಲೆ ಪ್ರೂಟ್ ಸಲಾಡ್ ಮಾರಿದ ನಟಿ ಹರಿಪ್ರಿಯಾ

    ಕಾಫಿ/ಟೀ ಮಾರಿದ ಅಜಯ್ ರಾವ್

    ಕಾಫಿ/ಟೀ ಮಾರಿದ ಅಜಯ್ ರಾವ್

    'ಸದಾ ನಿಮ್ಮೊಂದಿಗೆ' ಕಾರ್ಯಕ್ರಮಕ್ಕಾಗಿ ರಾಮಕೃಷ್ಣ ಆಶ್ರಮದ ಮುಂದೆ ನಟ ಅಜಯ್ ರಾವ್ ಕಾಫಿ/ಟೀ ಮಾರಾಟ ಮಾಡಿ ಹಣ ಸಂಗ್ರಹಿಸಿದ್ದಾರೆ.

    ವಿ.ವಿ.ಪುರಂನಲ್ಲಿ ಬಾದಾಮಿ ಹಾಲು ಮಾರಿದ ಪ್ರಜ್ವಲ್ ದೇವರಾಜ್ವಿ.ವಿ.ಪುರಂನಲ್ಲಿ ಬಾದಾಮಿ ಹಾಲು ಮಾರಿದ ಪ್ರಜ್ವಲ್ ದೇವರಾಜ್

    ವಿಕಲಚೇತನ ಹುಡುಗನಿಗೆ ಸಹಾಯ

    ವಿಕಲಚೇತನ ಹುಡುಗನಿಗೆ ಸಹಾಯ

    ಚಂದನ್ ಎಂಬ ವಿಕಲಚೇತನ ಹುಡುಗನಿಗಾಗಿ ನಟ ಅಜಯ್ ರಾವ್ ಸಹಾಯ ಮಾಡಿದ್ದಾರೆ. ರೈಲಿನಿಂದ ಇಳಿಯುವ ಭರದಲ್ಲಿ ತನ್ನ ಎರಡು ಕಾಲುಗಳನ್ನು ಚಿಕ್ಕವಯಸ್ಸಿನಲ್ಲಿ ಚಂದನ್ ಕಳೆದುಕೊಂಡಿದ್ದ. ಈ ಹುಡುಗನ ವಿದ್ಯಾಭ್ಯಾಸಕ್ಕಾಗಿ ಅಜಯ್ ರಾವ್ ಸಹಾಯ ಹಸ್ತ ಚಾಚಿದ್ದಾರೆ.

    ರಿಯಲ್ ಸುದ್ದಿ: ಬೀದಿಬೀದಿಯಲ್ಲಿ ಸೌತೇಕಾಯಿ, ಮಾವಿನಕಾಯಿ ಮಾರಿದ ರಾಗಿಣಿರಿಯಲ್ ಸುದ್ದಿ: ಬೀದಿಬೀದಿಯಲ್ಲಿ ಸೌತೇಕಾಯಿ, ಮಾವಿನಕಾಯಿ ಮಾರಿದ ರಾಗಿಣಿ

    ಹಣಕಾಸಿನ ತೊಂದರೆ

    ಹಣಕಾಸಿನ ತೊಂದರೆ

    ಚನ್ನಪಟ್ಟಣದಲ್ಲಿ ಓದುತ್ತಿರುವ ಚಂದನ್ ವಿದ್ಯಾಭ್ಯಾಸಕ್ಕೆ ಹಣದ ತೊಂದರೆ ಇದೆ. ಹೀಗಾಗಿ, ಚಂದನ್ ಗಾಗಿ ಕಾಫಿ, ಟೀ ಮಾರಿ ಅಜಯ್ ರಾವ್ ಹಣ ಗಳಿಸಿದ್ದಾರೆ.

    ಚಿಕ್ಕ ಹುಡುಗನ ಆರೋಗ್ಯಕ್ಕಾಗಿ ಪೆನ್ನು ಮಾರಿದ 'ಅಧ್ಯಕ್ಷ' ಶರಣ್ಚಿಕ್ಕ ಹುಡುಗನ ಆರೋಗ್ಯಕ್ಕಾಗಿ ಪೆನ್ನು ಮಾರಿದ 'ಅಧ್ಯಕ್ಷ' ಶರಣ್

    ಪ್ರಸಾರ ಯಾವಾಗ.?

    ಪ್ರಸಾರ ಯಾವಾಗ.?

    ರಾಮಕೃಷ್ಣ ಆಶ್ರಮದ ಮುಂದೆ ಅಜಯ್ ರಾವ್ ಕಾಫಿ, ಟೀ ಮಾರಾಟ ಮಾಡಿ ಸಂಗ್ರಹಿಸಿದ ಹಣ ಎಷ್ಟು.? ಎಂಬುದನ್ನು ಈ ವಾರದ ಸಂಚಿಕೆಯಲ್ಲಿ ನೋಡಬಹುದು. 'ಸದಾ ನಿಮ್ಮೊಂದಿಗೆ' ಇದೇ ಭಾನುವಾರ ರಾತ್ರಿ 9 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರ ಆಗಲಿದೆ.

    English summary
    Kannada Actor Ajay Rao sells coffee, tea in front of Ramakrishna Ashrama for a new show called 'Sada Nimmondige'. This show will telecast on every Sunday 9PM at Udaya TV.
    Thursday, November 22, 2018, 18:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X