Don't Miss!
- Automobiles ಮಹೀಂದ್ರಾ ಪ್ರೀಯರಿಗೆ ಭಾರೀ ಸಿಹಿಸುದ್ದಿ: ಗಲ್ಲಿಗಲ್ಲಿಯಲ್ಲಿ ಶುರುವಾಗುತ್ತಾ ಸ್ಕಾರ್ಪಿಯೋ ಹವಾ!
- Sports LSG vs CSK IPL 2024: ಐಪಿಎಲ್ನಲ್ಲಿ ಇತಿಹಾಸ ಸೃಷ್ಟಿಸಿದ ಎಂಎಸ್ ಧೋನಿ
- News Kolar Lok Sabha elections: ಕೋಲಾರ ಲೋಕಸಭಾ ಕ್ಷೇತ್ರದಲ್ಲಿ 'ಸ್ಥಳೀಯ' V/s 'ಹೊರಗಿನವ' ಫೈಟ್!
- Finance bangalore royal challengers ತಂಡದಿಂದ ನಗರದ ಎರಡು ಕೆರೆಗಳ ಪುನರುಜ್ಜೀವನ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಮಕೃಷ್ಣ ಆಶ್ರಮದ ಮುಂದೆ ಕಾಫಿ, ಟೀ ಮಾರಿದ ಅಜಯ್ ರಾವ್
Recommended Video
'ತಾಯಿಗೆ ತಕ್ಕ ಮಗ' ಚಿತ್ರದಲ್ಲಿ ಆಂಗ್ರಿ ಯಂಗ್ ಮ್ಯಾನ್ ನಂತೆ ಅಬ್ಬರಿಸಿದ್ದ 'ಕೃಷ್ಣ' ಅಜಯ್ ರಾವ್ ಇದೀಗ ರಾಮಕೃಷ್ಣ ಆಶ್ರಮದ ಮುಂದೆ ಕಾಫಿ/ಟೀ ಮಾರಿದ್ದಾರೆ.
ಓ.. ಇದು ಯಾವುದೋ ಚಿತ್ರದ ಚಿತ್ರೀಕರಣ ಇರಬೇಕು ಅಂತ ಭಾವಿಸಬೇಡಿ. ಅಜಯ್ ರಾವ್ 'ಕ್ಯಾಮರಾ ಮುಂದೆ' ಕಾಫಿ ಮತ್ತು ಟೀ ಮಾರಾಟ ಮಾಡಿರಬಹುದು. ಆದ್ರೆ, ಕೇವಲ 'ಶೂಟಿಂಗ್'ಗಾಗಿ ಅಲ್ಲ... ಒಬ್ಬರ ಒಳಿತಿಗಾಗಿ.!
ಹೌದು, ಓರ್ವ ಹುಡುಗನ ವಿದ್ಯಾಭ್ಯಾಸಕ್ಕಾಗಿ ನಟ ಅಜಯ್ ರಾವ್ ಒಂದು ದಿನದ ಮಟ್ಟಿಗೆ ಕಾಫಿ, ಟೀ ಸೇಲ್ ಮಾಡಿದ್ದಾರೆ. ಅದು ಉದಯ ಟಿವಿಯ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದ ಮೂಲಕ. ಮುಂದೆ ಓದಿರಿ...
ಈ ವಾರದ ಅತಿಥಿ
'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದ ಕಳೆದ ಸಂಚಿಕೆಯಲ್ಲಿ ನಟಿ ಹರಿಪ್ರಿಯಾ ರೈತ ಕುಟುಂಬಕ್ಕಾಗಿ ಫ್ರೂಟ್ ಸಲಾಡ್ ಮಾರಾಟ ಮಾಡಿದ್ದರು. ಇದೀಗ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದ ಅತಿಥಿಯಾಗಿ ನಟ ಅಜಯ್ ರಾವ್ ಭಾಗವಹಿಸಿದ್ದಾರೆ.
ಫುಟ್ ಪಾತ್ ಮೇಲೆ ಪ್ರೂಟ್ ಸಲಾಡ್ ಮಾರಿದ ನಟಿ ಹರಿಪ್ರಿಯಾ
ಕಾಫಿ/ಟೀ ಮಾರಿದ ಅಜಯ್ ರಾವ್
'ಸದಾ ನಿಮ್ಮೊಂದಿಗೆ' ಕಾರ್ಯಕ್ರಮಕ್ಕಾಗಿ ರಾಮಕೃಷ್ಣ ಆಶ್ರಮದ ಮುಂದೆ ನಟ ಅಜಯ್ ರಾವ್ ಕಾಫಿ/ಟೀ ಮಾರಾಟ ಮಾಡಿ ಹಣ ಸಂಗ್ರಹಿಸಿದ್ದಾರೆ.
ವಿ.ವಿ.ಪುರಂನಲ್ಲಿ ಬಾದಾಮಿ ಹಾಲು ಮಾರಿದ ಪ್ರಜ್ವಲ್ ದೇವರಾಜ್
ವಿಕಲಚೇತನ ಹುಡುಗನಿಗೆ ಸಹಾಯ
ಚಂದನ್ ಎಂಬ ವಿಕಲಚೇತನ ಹುಡುಗನಿಗಾಗಿ ನಟ ಅಜಯ್ ರಾವ್ ಸಹಾಯ ಮಾಡಿದ್ದಾರೆ. ರೈಲಿನಿಂದ ಇಳಿಯುವ ಭರದಲ್ಲಿ ತನ್ನ ಎರಡು ಕಾಲುಗಳನ್ನು ಚಿಕ್ಕವಯಸ್ಸಿನಲ್ಲಿ ಚಂದನ್ ಕಳೆದುಕೊಂಡಿದ್ದ. ಈ ಹುಡುಗನ ವಿದ್ಯಾಭ್ಯಾಸಕ್ಕಾಗಿ ಅಜಯ್ ರಾವ್ ಸಹಾಯ ಹಸ್ತ ಚಾಚಿದ್ದಾರೆ.
ರಿಯಲ್ ಸುದ್ದಿ: ಬೀದಿಬೀದಿಯಲ್ಲಿ ಸೌತೇಕಾಯಿ, ಮಾವಿನಕಾಯಿ ಮಾರಿದ ರಾಗಿಣಿ
ಹಣಕಾಸಿನ ತೊಂದರೆ
ಚನ್ನಪಟ್ಟಣದಲ್ಲಿ ಓದುತ್ತಿರುವ ಚಂದನ್ ವಿದ್ಯಾಭ್ಯಾಸಕ್ಕೆ ಹಣದ ತೊಂದರೆ ಇದೆ. ಹೀಗಾಗಿ, ಚಂದನ್ ಗಾಗಿ ಕಾಫಿ, ಟೀ ಮಾರಿ ಅಜಯ್ ರಾವ್ ಹಣ ಗಳಿಸಿದ್ದಾರೆ.
ಚಿಕ್ಕ ಹುಡುಗನ ಆರೋಗ್ಯಕ್ಕಾಗಿ ಪೆನ್ನು ಮಾರಿದ 'ಅಧ್ಯಕ್ಷ' ಶರಣ್
ಪ್ರಸಾರ ಯಾವಾಗ.?
ರಾಮಕೃಷ್ಣ ಆಶ್ರಮದ ಮುಂದೆ ಅಜಯ್ ರಾವ್ ಕಾಫಿ, ಟೀ ಮಾರಾಟ ಮಾಡಿ ಸಂಗ್ರಹಿಸಿದ ಹಣ ಎಷ್ಟು.? ಎಂಬುದನ್ನು ಈ ವಾರದ ಸಂಚಿಕೆಯಲ್ಲಿ ನೋಡಬಹುದು. 'ಸದಾ ನಿಮ್ಮೊಂದಿಗೆ' ಇದೇ ಭಾನುವಾರ ರಾತ್ರಿ 9 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರ ಆಗಲಿದೆ.