twitter
    For Quick Alerts
    ALLOW NOTIFICATIONS  
    For Daily Alerts

    ವಿ.ವಿ.ಪುರಂನಲ್ಲಿ ಬಾದಾಮಿ ಹಾಲು ಮಾರಿದ ಪ್ರಜ್ವಲ್ ದೇವರಾಜ್

    |

    Recommended Video

    ಬೆಂಗಳೂರಿನ ವಿ ವಿ ಪುರಂ ನಲ್ಲಿ ಬಾದಾಮಿ ಹಾಲು ಮಾರಿದ ಪ್ರಜ್ವಲ್ ದೇವರಾಜ್ | Filmibeat Kannada

    ಮನರಂಜನೆ ಜೊತೆಗೆ ಸಾಮಾಜಿಕ ಕಳಕಳಿ ಹೊಂದಿರುವ ಕಾರ್ಯಕ್ರಮ ಉದಯ ಟಿವಿಯಲ್ಲಿ ಪ್ರಸಾರ ಆಗುತ್ತಿರುವ 'ಸದಾ ನಿಮ್ಮೊಂದಿಗೆ'. ಕಷ್ಟದಲ್ಲಿ ಇರುವವರಿಗೆ ಸಹಾಯ ಹಸ್ತ ಚಾಚುವ ಉದ್ದೇಶ ಈ ಕಾರ್ಯಕ್ರಮದ್ದು.

    ತೆರೆ ಮೇಲಿನ ಹೀರೋ-ಹೀರೋಯಿನ್ ಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ನೊಂದ ಕುಟುಂಬದವರಿಗೆ ಆಸರೆ ಆಗಿ ಭೇಷ್ ಎನಿಸಿಕೊಂಡಿದ್ದಾರೆ. ಜನಸಾಮಾನ್ಯರಂತೆ ಒಂದು ದಿನದ ಮಟ್ಟಿಗೆ ಕೆಲಸ ಮಾಡಿ, ಅದರಿಂದ ಬಂದ ಹಣವನ್ನ ನಟ-ನಟಿಯರು ಸಂಕಷ್ಟದಲ್ಲಿ ಇರುವವರಿಗೆ 'ಸದಾ ನಿಮ್ಮೊಂದಿಗೆ' ಮೂಲಕ ನೀಡಿದ್ದಾರೆ.

    ಈಗಾಗಲೇ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ರಿಯಲ್ ಸ್ಟಾರ್ ಉಪೇಂದ್ರ, ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ, ವಿಜಯ್ ರಾಘವೇಂದ್ರ, ಶ್ರೀಮುರಳಿ, ಚಿರಂಜೀವಿ ಸರ್ಜಾ, ರಾಗಿಣಿ ದ್ವಿವೇದಿ, ಶ್ರೀಮುರಳಿ, ಶರಣ್, ಮಾನ್ವಿತಾ ಹರೀಶ್, ಪ್ರಿಯಾಂಕಾ ಉಪೇಂದ್ರ ಸೇರಿದಂತೆ ಹಲವರು ಅತಿಥಿಗಳಾಗಿ ಪಾಲ್ಗೊಂಡಿದ್ದಾರೆ. ಈಗ ನಟ ಪ್ರಜ್ವಲ್ ದೇವರಾಜ್ ಸರದಿ. ಮುಂದೆ ಓದಿರಿ...

    ಈ ವಾರದ ಅತಿಥಿ ಪ್ರಜ್ವಲ್ ದೇವರಾಜ್

    ಈ ವಾರದ ಅತಿಥಿ ಪ್ರಜ್ವಲ್ ದೇವರಾಜ್

    'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದ ಹಿಂದಿನ ಸಂಚಿಕೆಯಲ್ಲಿ ಲಕ್ಷ್ಮಿ ಹಾಗೂ ಗಿರಿಜಾ ಲೋಕೇಶ್ ಬಂಡಿ ಮಹಾಕಾಳಮ್ಮ ದೇವಸ್ಥಾನದ ಪೂಜಾ ಸಾಮಾಗ್ರಿಗಳನ್ನು ಮಾರಿ ಮಡಿಕೇರಿಯ ಜಯಂತಿ ಕುಟುಂಬಕ್ಕೆ ಸಹಾಯ ಮಾಡಿದ್ದರು. ಈ ವಾರದ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಭಾಗವಹಿಸಿದ್ದಾರೆ.

    ಎಳನೀರು ವ್ಯಾಪಾರಿಗಾಗಿ ಎಳನೀರು ಮಾರಿದ ಲವ್ಲಿ ಸ್ಟಾರ್ ಪ್ರೇಮ್ಎಳನೀರು ವ್ಯಾಪಾರಿಗಾಗಿ ಎಳನೀರು ಮಾರಿದ ಲವ್ಲಿ ಸ್ಟಾರ್ ಪ್ರೇಮ್

    ಸತೀಶ್ ಪುತ್ರಿಗೆ ಸಹಾಯ

    ಸತೀಶ್ ಪುತ್ರಿಗೆ ಸಹಾಯ

    ಟೀ ವ್ಯಾಪಾರಿ ಸತೀಶ್ ಪುತ್ರಿಗೆ ಸಹಾಯ ಮಾಡಲು ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

    ಚಿಕ್ಕ ಹುಡುಗನ ಆರೋಗ್ಯಕ್ಕಾಗಿ ಪೆನ್ನು ಮಾರಿದ 'ಅಧ್ಯಕ್ಷ' ಶರಣ್ಚಿಕ್ಕ ಹುಡುಗನ ಆರೋಗ್ಯಕ್ಕಾಗಿ ಪೆನ್ನು ಮಾರಿದ 'ಅಧ್ಯಕ್ಷ' ಶರಣ್

    ಸತೀಶ್ ಪುತ್ರಿಗೆ ಏನಾಗಿದೆ.?

    ಸತೀಶ್ ಪುತ್ರಿಗೆ ಏನಾಗಿದೆ.?

    ಸತೀಶ್ ಅವರ ಐದು ವರ್ಷದ ಪುತ್ರಿಗೆ ಕಿವಿ ಕೇಳುವುದಿಲ್ಲ. ಮಾತು ಬರುವುದಿಲ್ಲ. ಆಕೆಯ ಶಸ್ತ್ರಚಿಕಿತ್ಸೆಗೆ ಹಣದ ಅವಶ್ಯಕತೆ ಇದೆ. ಈ ಮಗುವಿಗೆ ಸಹಾಯ ಮಾಡಲು ಪ್ರಜ್ವಲ್ ದೇವರಾಜ್ ಮುಂದಾಗಿದ್ದಾರೆ.

    'ವಿಕಲಚೇತನ ಟ್ರಸ್ಟ್'ಗಾಗಿ ಕಲ್ಲಂಗಡಿ ಹಣ್ಣು ಮಾರಿದ ನಟಿ ಮಾನ್ವಿತಾ ಹರೀಶ್'ವಿಕಲಚೇತನ ಟ್ರಸ್ಟ್'ಗಾಗಿ ಕಲ್ಲಂಗಡಿ ಹಣ್ಣು ಮಾರಿದ ನಟಿ ಮಾನ್ವಿತಾ ಹರೀಶ್

    ಬಾದಾಮಿ ಹಾಲು ಮಾರಿದ ಪ್ರಜ್ವಲ್

    ಬಾದಾಮಿ ಹಾಲು ಮಾರಿದ ಪ್ರಜ್ವಲ್

    ಸತೀಶ್ ಪುತ್ರಿಗೆ ಸಹಾಯ ಮಾಡಲು ಬೆಂಗಳೂರಿನ ವಿವಿ ಪುರಂನಲ್ಲಿ ಬಾದಾಮಿ ಹಾಲನ್ನು ಮಾರಿ, ಅದರಿಂದ ಬಂದ ಹಣವನ್ನು ಪ್ರಜ್ವಲ್ ನೀಡಿದ್ದಾರೆ. ಅಲ್ಲದೇ, ವೈಯುಕ್ತಿಕವಾಗಿಯೂ ಸತೀಶ್ ಪುತ್ರಿಗೆ ಪ್ರಜ್ವಲ್ ದೇವರಾಜ್ ಹಣ ಸಹಾಯ ಮಾಡಿದ್ದಾರೆ.

    ರಿಯಲ್ ಸುದ್ದಿ: ಬೀದಿಬೀದಿಯಲ್ಲಿ ಸೌತೇಕಾಯಿ, ಮಾವಿನಕಾಯಿ ಮಾರಿದ ರಾಗಿಣಿ ರಿಯಲ್ ಸುದ್ದಿ: ಬೀದಿಬೀದಿಯಲ್ಲಿ ಸೌತೇಕಾಯಿ, ಮಾವಿನಕಾಯಿ ಮಾರಿದ ರಾಗಿಣಿ

    ಪ್ರಜ್ವಲ್ ಸಂಗ್ರಹ ಮಾಡಿದ ಹಣ ಎಷ್ಟು.?

    ಪ್ರಜ್ವಲ್ ಸಂಗ್ರಹ ಮಾಡಿದ ಹಣ ಎಷ್ಟು.?

    ಬಾದಾಮಿ ಹಾಲನ್ನು ಮಾರಿ ಪ್ರಜ್ವಲ್ ದೇವರಾಜ್ ಸಂಗ್ರಹ ಮಾಡಿದ ಹಣ ಎಷ್ಟು.? ಸತೀಶ್ ಕುಟುಂಬದ ಕೈ ಸೇರಿದ ಹಣವೆಷ್ಟು.? ಎಂಬುದನ್ನು ಈ ವಾರದ ಸಂಚಿಕೆಯಲ್ಲಿ ನೀವೇ ನೋಡಿರಿ... 'ಸದಾ ನಿಮ್ಮೊಂದಿಗೆ' ಇದೇ ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರ ಆಗಲಿದೆ.

    English summary
    Kannada Actor Prajwal Devaraj sells Badam Milk in VV Puram for a new show called 'Sada Nimmondige'. This show will telecast on every Sunday 9PM at Udaya TV.
    Wednesday, November 7, 2018, 14:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X