Don't Miss!
- News Lok Sabha Election 2024: ಮತದಾರರನ್ನು ಆಕರ್ಷಿಸಲು ಚುನಾವಣಾ ಆಯೋಗದ ವಿಭಿನ್ನ ಪ್ರಯತ್ನ
- Technology vivo: ವಿವೋ Y200i ಸ್ಮಾರ್ಟ್ಫೋನ್ ಲಾಂಚ್! 12GB RAM.. 6000mAh ಬ್ಯಾಟರಿ
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಎಳನೀರು ವ್ಯಾಪಾರಿಗಾಗಿ ಎಳನೀರು ಮಾರಿದ ಲವ್ಲಿ ಸ್ಟಾರ್ ಪ್ರೇಮ್
Recommended Video
'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ಸಾಮಾನ್ಯ ಜನರಿಗೆ ಸಹಾಯ ಮಾಡಲು ಧ್ರುವ ಸರ್ಜಾ ಆಟೋ ಓಡಿಸಿದ್ದರು. ನಟಿ ರಶ್ಮಿಕಾ ಮಂದಣ್ಣ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿದ್ದರು. ರೈತರ ಕುಟುಂಬಕ್ಕೆ ಸಹಾಯ ಮಾಡಲು ಶ್ರೀಮುರಳಿ ಕಬ್ಬಿನ ಹಾಲು ಮಾರಿದ್ದರು.
ಕುಟುಂಬವೊಂದಕ್ಕೆ ಧನ ಸಹಾಯ ಮಾಡಲು ಸೃಜನ್ ಲೋಕೇಶ್ ಭೇಲ್ ಪೂರಿ ಮಾರಾಟ ಮಾಡಿದ್ದರು. ನಟ ಧನಂಜಯ್ ಮೂಸಂಬಿ ಜ್ಯೂಸ್ ಮಾರಿದ್ದರೆ, ಪ್ರಿಯಾಂಕಾ ಉಪೇಂದ್ರ ಹೂ ಮಾರಾಟ ಮಾಡಿದ್ದರು. ಇನ್ನೂ ರಿಯಲ್ ಸ್ಟಾರ್ ಉಪೇಂದ್ರ ಹೋಟೆಲ್ ನಲ್ಲಿ ಒಂದು ದಿನ ಮಟ್ಟಿಗೆ ಕೆಲಸ ನಿರ್ವಹಿಸಿದ್ದರು.
ಇದೇ ಕಾರ್ಯಕ್ರಮದಲ್ಲಿ ಪ್ರಿಯಾಮಣಿ, ವಿಜಯ್ ರಾಘವೇಂದ್ರ ಹಾಗೂ ಚಿರಂಜೀವಿ ಸರ್ಜಾ ಭಾಗವಹಿಸಿ ಸಹಾಯ ಹಸ್ತ ಚಾಚಿದ್ದರು. ಇದೀಗ ಲವ್ಲಿ ಸ್ಟಾರ್ ಪ್ರೇಮ್ ಸರದಿ. ಮುಂದೆ ಓದಿರಿ...
ಈ ವಾರದ ಅತಿಥಿ ಲವ್ಲಿ ಸ್ಟಾರ್ ಪ್ರೇಮ್
'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ಈ ವಾರದ ಅತಿಥಿಯಾಗಿ ಲವ್ಲಿ ಸ್ಟಾರ್ ಪ್ರೇಮ್ ಭಾಗವಹಿಸಿದ್ದಾರೆ. ಎಳನೀರು ಮಾರಾಟ ಮಾಡುವ ಕುಟುಂಬಕ್ಕೆ ಸಹಾಯ ಮಾಡಲು ಪ್ರೇಮ್ ಮುಂದಾಗಿದ್ದಾರೆ.
ರಸ್ತೆ ಬದಿಯಲ್ಲಿ ಬೊಟ್ಟು, ಬಾಚಣಿಗೆ ಮಾರಿದ ಪಂಚಭಾಷಾ ಚತುರೆ ಪ್ರಿಯಾಮಣಿ
ಎಳನೀರು ವ್ಯಾಪಾರಿಗೆ ಸಹಾಯ
ಕಳೆದ ವಾರದ 'ಸದಾ ನಿಮ್ಮೊಂದಿಗೆ' ಸಂಚಿಕೆಯಲ್ಲಿ ಚಿರಂಜೀವಿ ಸರ್ಜಾ ಅವರು ಟ್ಯಾಕ್ಸಿ ಡ್ರೈವರ್ ಶಿವರಾಜ್ ಅವರ ಮಕ್ಕಳಿಗೆ ಇರುವ ಥಲಾಸೀಮಿಯ ಖಾಯಿಲೆಗೋಸ್ಕರ ಗ್ಯಾರೇಜಲ್ಲಿ ಕೆಲಸ ಮಾಡಿ ದುಡ್ಡು ಸಂಪಾದಿಸಿ ಕೊಟ್ಟಿದ್ದರು. ಅಲ್ಲದೇ ಚಿರು ಸರ್ಜಾ ಶಿವರಾಜ್ ಅವರಿಗೆ ತನ್ನ ಕೈಯಿಂದ 50,000 ರೂಗಳನ್ನು ನೀಡಿದ್ದರು. ಈ ವಾರ ಎಳೆನೀರು ವ್ಯಾಪಾರಿಗೆ ಪ್ರೇಮ್ ಸಹಾಯ ಮಾಡಲಿದ್ದಾರೆ.
ಚಿರು ದೊಡ್ಡ ಮನಸ್ಸಿಗೆ ಹ್ಯಾಟ್ಸ್ ಆಫ್: ಮೆಕ್ಯಾನಿಕ್ ಕೆಲಸ ಮಾಡಿದ ಸರ್ಜಾ ಕುಡಿ.!
ರಸ್ತೆಬದಿಯಲ್ಲಿ ಎಳನೀರು ಮಾರುವ ದೇವರಾಜ್
ದೇವರಾಜ್ ಮೂಲತಃ ರೈತಾಪಿ ಕುಟುಂಬದವರು. ಕಬ್ಬಿನ ಗದ್ದೆ ಮಾಡುವ ಕನಸಿಗೆ 70,000 ಸಾಲ ಮಾಡಿ ಕಬ್ಬು ಬೆಳೆ ಕೈಕೊಟ್ಟಿದ್ದರಿಂದ ಊರು ಬಿಡುವಂತಹ ಪರಿಸ್ಥಿತಿ ಬಂತು. ಆಗ ಬೆಂಗಳೂರಿಗೆ ಬಂದ ದೇವರಾಜ್, ಇಂದಿನ ವರೆಗೂ ರಸ್ತೆ ಬದಿಯಲ್ಲಿ ಎಳೆನೀರು ಮಾರುತ್ತಿದ್ದಾರೆ.
ದೇವಸ್ಥಾನದ ಮುಂದೆ ಗೋಲಿ ಸೋಡಾ ಮಾರಿದ 'ಚಿನ್ನಾರಿಮುತ್ತ' ವಿಜಯ್.!
ದೇವರಾಜ್ ಜೀವನೋಪಾಯ
ದೇವರಾಜ್ ಅವರಿಗೆ 3 ಜನ ಹೆಣ್ಮಕ್ಕಳಿದ್ದಾರೆ. ಅವರ ವಿದ್ಯಾಭ್ಯಾಸ ಮತ್ತು ಅವರ ಮುಂದಿನ ಜೀವನಕ್ಕಾಗಿ ಹಣವನ್ನು ಹೊಂದಿಸಲು ಆಗುತ್ತಿಲ್ಲ. ಈ ವಿಷಯದ ಹಿನ್ನಲೆ ಲವ್ಲಿ ಸ್ಟಾರ್ ಪ್ರೇಮ್, ದೇವರಾಜ್ ರಂತೆ ಎಳೆನೀರನ್ನು ಮಾರಿ ಅವರ ಜೀವನೋಪಾಯಕ್ಕೆ ಸಹಾಯ ಹಸ್ತ ನೀಡಿದ್ದಾರೆ.
ಪ್ರೇಮ್ ಸಂಪಾದಿಸಿದ ಹಣವೆಷ್ಟು.?
ಎಳನೀರು ಮಾರಾಟ ಮಾಡುವ ಮೂಲಕ ಹಾಗಾದರೆ ಪ್ರೇಮ್ ಗಳಿಸಿದ ಒಟ್ಟು ಹಣವೆಷ್ಟು? ದೇವರಾಜ್ ಜೀವನಕ್ಕೆ ದೊರೆತ ಹಣವೆಷ್ಟು? ಎಂಬುದನ್ನ ಈ ವಾರದ ಸಂಚಿಕೆಯಲ್ಲಿ ನೋಡಬಹುದು. 'ಸದಾ ನಿಮ್ಮೊಂದಿಗೆ' ಇದೇ ಭಾನುವಾರ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.