Don't Miss!
- Technology Lava: ಲಾವಾ ಪ್ರೊ ವಾಚ್ Zn ಹಾಗೂ Vn ಸ್ಮಾರ್ಟ್ವಾಚ್ ಲಾಂಚ್! ಸೀಮಿತ ಅವಧಿಯ ಕೊಡುಗೆ ಸಹ ಲಭ್ಯ..
- News Lok Sabha Election: ಕರ್ನಾಟಕದ ಈ ಕ್ಷೇತ್ರದಲ್ಲಿ ಮಹಿಳಾ ಮತದಾರರೇ ನಿರ್ಣಾಯಕ
- Sports ರೋಹಿತ್ ಶರ್ಮಾ ಬಳಿಕ ಭಾರತ ತಂಡದ ನಾಯಕನಾರು?; ಅಚ್ಚರಿ ಹೆಸರು ತಿಳಿಸಿದ ಹರ್ಭಜನ್ ಸಿಂಗ್!
- Lifestyle ಚಪಾತಿ, ಅನ್ನಕ್ಕೆ ಟೊಮೆಟೋ ಬೇಳೆ ಸಾರು ಸಖತ್ ರುಚಿ..! ಮಾಡೋದು ಸುಲಭ..!
- Automobiles ಅಪ್ಪ-ಮಗಳ ಭಾಂದವ್ಯ.. ಪ್ರೀತಿಯ ಪುತ್ರಿಗೆ ತಂದೆಯಿಂದ 2 ಕೋಟಿಯ ಪೋರ್ಷೆ ಕಾರು ಗಿಫ್ಟ್
- Finance ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಹಳದಿ ಅನಕೊಂಡ ಸಹಿತ ವ್ಯಕ್ತಿ ಬಂಧನ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಲಾವಿದನಿಗೆ ಸಹಾಯ ಮಾಡಿದ ಗಾಯಕ ರಾಜೇಶ್ ಕೃಷ್ಣನ್
ಒಂದೊಳ್ಳೆ ಆಶಯದೊಂದಿಗೆ ನಿಮ್ಮ ಉದಯ ಟಿವಿಯಲ್ಲಿ ಪ್ರಸಾರ ಆಗುತ್ತಿರುವ ಕಾರ್ಯಕ್ರಮ 'ಸದಾ ನಿಮ್ಮೊಂದಿಗೆ'. ಈ ಕಾರ್ಯಕ್ರಮದ ಮೂಲಕ ಕನ್ನಡ ಚಿತ್ರ ತಾರೆಯರು ಕಷ್ಟದಲ್ಲಿ ಇರುವವರಿಗೆ ಸ್ಪಂದಿಸುತ್ತಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ, ರೋರಿಂಗ್ ಸ್ಟಾರ್ ಶ್ರೀಮುರಳಿ, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ಪ್ರಿಯಾಂಕಾ ಉಪೇಂದ್ರ, ರಾಗಿಣಿ ದ್ವಿವೇದಿ, ವಿಜಯ್ ರಾಘವೇಂದ್ರ, ರಶ್ಮಿಕಾ ಮಂದಣ್ಣ ಸೇರಿದಂತೆ ಹಲವು ಸ್ಟಾರ್ ಗಳು 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನಸಾಮಾನ್ಯರಂತೆ ಒಂದು ದಿನದ ಮಟ್ಟಿಗೆ ಕೆಲಸ ಮಾಡಿ, ನೊಂದವರಿಗೆ ಸಹಾಯ ಮಾಡಿದ್ದಾರೆ.
ಇದೀಗ ಇದೇ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ಗಾಯಕ ಹಾಗೂ ನಟ ರಾಜೇಶ್ ಕೃಷ್ಣನ್ ಭಾಗವಹಿಸಿದ್ದಾರೆ. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿದೆ, ಓದಿರಿ....
ಈ ವಾರದ ಅತಿಥಿ
'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದ ಕಳೆದ ಸಂಚಿಕೆಯಲ್ಲಿ ತುಪ್ಪದ ಹುಡುಗಿ ರಾಗಿಣಿ, ವಿನೋದ್ ಎಂಬ ಅಂಧನಿಗೋಸ್ಕರ ಮಾವಿನಕಾಯಿ, ಸೌತೆಕಾಯಿ ಮಾರಾಟ ಮಾಡಿ ಹಣ ಸಂಪಾದಿಸಿ ಸಹಾಯ ಮಾಡಿದ್ದರು. ಅದೇ ರೀತಿ ಈ ವಾರದ ನಮ್ಮ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ಭಾಗವಹಿಸಿರುವವರು 'ಸದಾ ನಿಮ್ಮೊಂದಿಗೆ' ಧ್ವನಿ (ಸದಾ ನಿಮ್ಮೊಂದಿಗೆ ಶೀರ್ಷಿಕೆ ಗೀತೆ ಗಾಯಕ) ರಾಜೇಶ್ ಕೃಷ್ಣನ್.
ರಿಯಲ್ ಸುದ್ದಿ: ಬೀದಿಬೀದಿಯಲ್ಲಿ ಸೌತೇಕಾಯಿ, ಮಾವಿನಕಾಯಿ ಮಾರಿದ ರಾಗಿಣಿ
ಕಲಾವಿದನ ಕಷ್ಟಕ್ಕೆ ಸ್ಪಂದಿಸಿದ ರಾಜೇಶ್ ಕೃಷ್ಣನ್
ಗಾಯಕ ರಾಜೇಶ್ ಕೃಷ್ಣನ್ ಒಬ್ಬ ಕಲಾವಿದರಾಗಿ ಮತ್ತೊಬ್ಬ ಕಲಾವಿದನ ಕಷ್ಟಕ್ಕೆ ಸ್ಪಂದಿಸಿದ್ದಾರೆ. ನಾಗರಾಜ್ ಎಂಬ ಅದ್ಭುತ ಚಿತ್ರ ಕಲಾವಿದನ ಸಂಕಷ್ಟಕ್ಕೆ ರಾಜೇಶ್ ಕೃಷ್ಣನ್ ಸಹಾಯ ಹಸ್ತ ಚಾಚಿದ್ದಾರೆ.
'ವಿಕಲಚೇತನ ಟ್ರಸ್ಟ್'ಗಾಗಿ ಕಲ್ಲಂಗಡಿ ಹಣ್ಣು ಮಾರಿದ ನಟಿ ಮಾನ್ವಿತಾ ಹರೀಶ್
ನಾಗರಾಜ್ ಅವರ ಸಮಸ್ಯೆ ಏನು.?
ಚಿತ್ರ ಕಲಾವಿದ ನಾಗರಾಜ್ ಆರೋಗ್ಯದಲ್ಲಿ ಏರುಪೇರಾಗಿ ಓಪನ್ ಹಾರ್ಟ್ ಸರ್ಜರಿಯಾಗಿದೆ. ವೈದ್ಯರು ಈಗ ಸ್ವಲ್ಪ ಸಮಯದವರೆಗೆ ವಿಶ್ರಾಂತಿ ಪಡೆಯಲು ಹೇಳಿದ್ದರಿಂದ ಕುಟುಂಬದ ಆಧಾರ ಸ್ತಂಬವಾಗಿರುವ ಇವರಿಗೆ ಚಿಂತೆಗೀಡು ಮಾಡಿದೆ.
ಚಿರು ದೊಡ್ಡ ಮನಸ್ಸಿಗೆ ಹ್ಯಾಟ್ಸ್ ಆಫ್: ಮೆಕ್ಯಾನಿಕ್ ಕೆಲಸ ಮಾಡಿದ ಸರ್ಜಾ ಕುಡಿ.!
ಸಂಗೀತ ಕಾರ್ಯಕ್ರಮ ಕೊಟ್ಟ ರಾಜೇಶ್ ಕೃಷ್ಣನ್
ನಾಗರಾಜ್ ಅವರ ಜೀವನಕ್ಕೆ ಚಿತ್ರಕಲೆಯೇ ಆಧಾರ. ಈ ಕಲೆಯಿಂದಲೇ ಹೆಂಡತಿ ಹಾಗೂ ಮಕ್ಕಳನ್ನ ಸಾಕಬೇಕಾಗಿದೆ. ಈಗಾಗಲೇ ಒಬ್ಬ ಹೆಣ್ಣು ಮಗಳ ಮದುವೆ ಮಾಡಿದ್ದಾರೆ. ಈಗ ಇವರ ಕಷ್ಟಕ್ಕೆ ಸಹಾಯ ಮಾಡಲು ಗಾಯಕ ರಾಜೇಶ್ ಕೃಷ್ಣನ್ ಶೇಷಾದ್ರಿಪುರಂ ಕಾಲೇಜ್ ನಲ್ಲಿ ಸಂಗೀತ ಕಾರ್ಯಕ್ರಮವನ್ನು ನೀಡಿದ್ದಾರೆ. ಅಲ್ಲಿ ಅವರಿಗೆ ಬಂದ ಹಣವನ್ನು ನಾಗರಾಜರವರ ಜೀವನಕ್ಕಾಗಿ ಸಹಾಯ ಮಾಡಿದ್ದಾರೆ.
ದೇವಸ್ಥಾನದ ಮುಂದೆ ಗೋಲಿ ಸೋಡಾ ಮಾರಿದ 'ಚಿನ್ನಾರಿಮುತ್ತ' ವಿಜಯ್.!
ಸಂಗ್ರಹವಾದ ಹಣ ಎಷ್ಟು.?
ಶೇಷಾದ್ರಿಪುರಂ ಕಾಲೇಜ್ ನಲ್ಲಿ ಸಂಗ್ರಹವಾದ ಹಣವೆಷ್ಟು? ಎಂಬುದನ್ನು ಈ ವಾರದ 'ಸದಾ ನಿಮ್ಮೊಂದಿಗೆ' ಸಂಚಿಕೆಯಲ್ಲಿ ನೋಡಬೇಕು. "ಸದಾ ನಿಮ್ಮೊಂದಿಗೆ" ಇದೇ ಭಾನುವಾರ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.