Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೀದಿಬೀದಿಯಲ್ಲಿ ಭೇಲ್ ಪೂರಿ ಮಾರಿದ ನಟ ಸೃಜನ್ ಲೋಕೇಶ್.!
Recommended Video
ಸದಾ ನಿಮ್ಮೊಂದಿಗೆ ಕಾರ್ಯಕ್ರಮದ ಕಳೆದ ವಾರದ ಸಂಚಿಕೆಯಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರು ಭಾಗವಹಿಸಿ ರೇಖಾ ಮಹಾಂತೇಶ್ ಕುಟುಂಬಕ್ಕೋಸ್ಕರ ಕಬ್ಬಿನ ಜ್ಯೂಸ್ ಮಾರಾಟ ಮಾಡಿದರು.
ಅದರಿಂದ ಬಂದ ಒಂದೊಂದು ರೂಪಾಯಿಗೂ ಉದಯ ವಾಹಿನಿ 100 ರೂ. ಸೇರಿಸಿ ಒಟ್ಟು 1,55,000 ರೂಪಾಯಿಯನ್ನ ರೇಖಾ ಮಹಾಂತೇಶ್ ಕುಟುಂಬಕ್ಕೆ ನೀಡಿತ್ತು.
ರೈತ ಕುಟುಂಬಕ್ಕಾಗಿ ಕಬ್ಬಿನ ಹಾಲು ಮಾರಿದ ಶ್ರೀಮುರಳಿ
ಅದೇ ರೀತಿ ಈ ವಾರದ ಸಂಚಿಕೆಯಲ್ಲಿ ಗಾರೆ ಕೆಲಸ ಮಾಡುವಾಗ ಶಾಕ್ ಹೊಡೆದು 2 ಕೈ, 1 ಕಾಲು ಕಳೆದುಕೊಂಡಿರುವ ನಾಗೇಶ್ ಅವರಿಗೋಸ್ಕರ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್, ತಾವು ಓದಿದ ಶಾಲೆಗೆ ಹೋಗಿ ಅಲ್ಲಿನ ಮಕ್ಕಳಿಗೆ, ಶಿಕ್ಷಕರಿಗೆ ಪಾನಿಪೂರಿ ಮಾರಾಟ ಮಾಡಿದ್ದಾರೆ.
ಹಾಗೇ, ಸಾರ್ವಜನಿಕ ಸ್ಥಳಗಳಲ್ಲಿ ಗಾಡಿಯನ್ನು ನೂಕುತ್ತಾ ರಸ್ತೆಯಲ್ಲಿ ಭೇಲ್ ಪೂರಿ ಮಾರಿದ್ದಾರೆ. ಹಾಗ್ನೋಡಿದ್ರೆ, ಪಾನಿಪೂರಿ ಮಾರೋದು ಇವರ ಬಾಲ್ಯ ವಯಸ್ಸಿನ ಕನಸಾಗಿತ್ತಂತೆ.
ಬಸವನಗುಡಿಯ ನ್ಯಾಷನಲ್ ಹೈಸ್ಕೂಲ್ ಗೆ ಹೋಗಿ ಕಾರ್ಯಕ್ರಮದ ಉದ್ದೇಶವನ್ನ ಸೃಜನ್ ಲೋಕೇಶ್ ತಿಳಿಸಿದಾಗ ಅಲ್ಲಿನ ಮಕ್ಕಳು, ಶಿಕ್ಷಕರು ಸಂಪೂರ್ಣವಾಗಿ ಪ್ರೋತ್ಸಾಹ ನೀಡಿದ್ರು. ಹಾಗೆ ಸೃಜನ್ ಅವರು ತಮ್ಮ ಅಭಿಮಾನಿಗಳ ಕೋರಿಕೆಯಂತೆ ಕೆಲವರ ಜೊತೆ ಸ್ಟೆಪ್ ಹಾಕಿ, ಸೆಲ್ಫಿ ತೆಗೆಸಿಕೊಂಡು ಕಾರ್ಯಕ್ರಮದ ಉದ್ದೇಶವನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾದರು.
ರೀಲ್ ಅಲ್ಲ ರಿಯಲ್: ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿದ ರಶ್ಮಿಕಾ ಮಂದಣ್ಣ
'ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್' ಭೇಲ್ ಪೂರಿ ಮಾರಿ ತಂದ ಹಣವಾದರೂ ಎಷ್ಟು? ಎಂಬುದು ಇದೇ ಭಾನುವಾರ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.